ಕರ್ನಾಟಕ: ಕ್ಷಯರೋಗಿಗಳಲ್ಲಿ ಶೇ.8ರಷ್ಟು ಮಂದಿ ಎಚ್ಐವಿ ಪೀಡಿತರು
ಬೆಂಗಳೂರು, ಏಪ್ರಿಲ್ 06: ಕ್ಷಯ ರೋಗ(ಟಿಬಿ) ಹಾಗೂ ಎಚ್ಐವಿ ಎರಡೂ ಇರುವ ರೋಗಿಗಳ ಸಂಖ್ಯೆ ಕರ್ನಾಟಕದಲ್ಲಿ ಹೆಚ್ಚಾಗುತ್ತಿದೆ. ಭಾರತದಲ್ಲಿ ಕರ್ನಾಟಕವು ಮೂರನೇ ಸ್ಥಾನದಲ್ಲಿದೆ.
ಇಂಡಿಯಾ ಟ್ಯೂಬರ್ ಕಿಲಾಸಿಸ್ 2018 ಸಮೀಕ್ಷೆ ಪ್ರಕಾರ ಶೇ.8ರಷ್ಟು ಮಂದಿ ಕ್ಷಯರೋಗಿಗಳು ಎಚ್ಐವಿ ರೋಗದಿಂದ ಬಳಲುತ್ತಿದ್ದಾರೆ. ಕ್ಷಯ ರೋಗವನ್ನು ಪ್ರಾರಂಭದಲ್ಲಿಯೇ ತಿಳಿದುಬಂದರೆ ತಡೆಗಟ್ಟಬಹುದಾಗಿದೆ. ಆದರೆ ಅಂತಿಮ ಹಂತದಲ್ಲಿ ತಿಳಿದುಬರುತ್ತಿರುವ ಕಾರಣ ರೋಗಿಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
2025ರ ಹೊತ್ತಿಗೆ ಭಾರತದಿಂದ ಕ್ಷಯ ರೋಗ ನಿರ್ಮೂಲನೆ: ನರೇಂದ್ರ ಮೋದಿ
ಕ್ಷಯ ಹಾಗೂ ಎಚ್ಐವಿ ಎರಡೂ ಇರುವ ವ್ಯಕ್ತಿಗಳು: ನಾಗಾಲ್ಯಾಂಡ್ ನಲ್ಲಿ ಶೇ. 14, ಆಂಧ್ರಪ್ರದೇಶದಲ್ಲಿ ಶೇ.10, ಒಟ್ಟಾರೆ ಕ್ಷಯ ರೋಗಿಗಳನ್ನು ಗಮನಿಸುವುದಾದರೆ ಕರ್ನಾಟಕವು 10ನೇ ಸ್ಥಾನದಲ್ಲಿದೆ. ಕರ್ನಾಟಕದಲ್ಲಿ 81,187 ಕ್ಷಯರೋಗಿಗಳು ಪತ್ತೆಯಾಗಿದ್ದಾರೆ. ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಅಂದರೆ 3,11,041 ರೋಗಿಗಳು ಇದ್ದಾರೆ.
ಕರ್ನಾಟಕದಲ್ಲಿ ಬಾಗಲಕೋಟೆಗೆ ಮೊದಲ ಸ್ಥಾನ: ಕರ್ನಾಟಕದಲ್ಲಿರುವ ಒಟ್ಟು ಕ್ಷಯ ರೋಗಿಗಳ ಪೈಕಿ ಶೇ.30ರಷ್ಟು ಮಂದಿ ಬಾಗಲಕೋಟೆಯಲ್ಲಿದ್ದಾರೆ. ಬೆಳಗಾವಿಯಲ್ಲಿ ಶೇ.15, ಧಾರವಾಡ, ರಾಯಚೂರು, ಉಡುಪಿಯಲ್ಲಿ ಶೇ. 11ರಷ್ಟು ಕ್ಷಯರೋಗಿಗಳು ಎಚ್ಐವಿಯಿಂದ ಬಳಲುತ್ತಿದ್ದಾರೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | 2018ರ ನಿಮ್ಮ ಕನಸಿನ ಸಂಪುಟವನ್ನು ಆಯ್ಕೆ ಮಾಡಿ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಟ್ಯುಬರ್ ಕಿಲಾಸಿಸ್ ಪ್ರೋಗ್ರಾಮ್ನ ಜಂಟಿ ನಿರ್ದೇಶಕ ಡಾ. ರಾಮಚಂದ್ರ ಅವರು ಹೇಳುವ ಪ್ರಕಾರ, ರೋಗದ ಗುಣಲಕ್ಷಗಳು ಕಂಡು ಬಂದ ತಕ್ಷಣವೇ ಸರಿಯಾದ ಚಿಕಿತ್ಸೆ ದೊರೆತರೆ ರೋಗವನ್ನು ಕಡಿಮೆ ಮಾಡಬಹುದು ಹಾಗೂ ಇನ್ಫೆಕ್ಷನ್ ತಡೆಗಟ್ಟಬಹುದು.
ಆದರೆ ಎಚ್ಐವಿ ಪೀಡಿತರು ತಿಂಗಳಿಗೊಮ್ಮೆ ತಪಾಸಣೆ ಮಾಡಿಸಲು ಆಸ್ಪತ್ರೆಗೆ ತೆರಳಿದಾಗ ಕ್ಷಯ ರೋಗವಿರುವ ಕುರಿತು ಮಾಹಿತಿ ತಿಳಿಯುತ್ತಿದೆ ಹಾಗಾಗಿ ಸಮರ್ಪಕ ಚಿಕಿತ್ಸೆ ನೀಡಲು ಸಾದ್ಯವಾಗುತ್ತಿಲ್ಲ ಎಂದಿದ್ದಾರೆ.
ರಾಜ್ಯಗಳು
ಟಿಬಿ
ರೋಗಿಗಳು
ಎಚ್ಐವಿ
ಪೀಡಿತ
ಪ್ರಕರಣಗಳು
ಉತ್ತರ
ಪ್ರದೇಶ
3,11,041
ಶೇ.1
ಮಹಾರಾಷ್ಟ್ರ
1,92,458
ಶೇ.5
ಗುಜರಾತ್
1,49,061
ಶೇ.3
ಮಧ್ಯಪ್ರದೇಶ
1,34,333
ಶೇ.1
ರಾಜಸ್ತಾನ
1,05,953
ಶೇ.೦
ಪಶ್ಚಿಮ
ಬಂಗಾಳ
97,297
ಶೇ.1
ಬಿಹಾರ
96,489
ಶೇ.1
ತಮಿಳುನಾಡು
93,327
ಶೇ.5
ಆಂಧ್ರಪ್ರದೇಶ
81,118
ಶೇ.10
ಕರ್ನಾಟಕ
81,187
ಶೇ.8