ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೋಮೇಶ್ವರಖಾನ್ ಗ್ರಾಮದಲ್ಲಿ 8ಕ್ಕೂ ಹೆಚ್ಚು ಮನೆಗಳಲ್ಲಿ ಬಿರುಕು

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

Recommended Video

ಸಾಮಾಜಿಕ ಜಾಲತಾಣದಲ್ಲಿ ಎಚ್ ಡಿ ಕೆ ಜಿಲ್ಲೆಗೆ‌ ಬರುವಂತೆ ಮನವಿ ಮಾಡಿದ ಮೂಡಿಗೆರೆ ಶಾಸಕ

ಚಿಕ್ಕಮಗಳೂರು, ಆಗಸ್ಟ್.24: ಕಾಫಿನಾಡಲ್ಲಿ ಮನೆಗಳ ಬಿರುಕು ಹೆಚ್ಚುತ್ತಲೇ ಇದ್ದು, ಭೂ ಕುಸಿತವೂ ಕಡಿಮೆಯಾಗಿಲ್ಲ. ಕೊಪ್ಪ‌ ತಾಲೂಕಿನ ಸೋಮೇಶ್ವರಖಾನ್ ಗ್ರಾಮದಲ್ಲಿ ಇದಕ್ಕಿದ್ದಂತೆ 8 ಕ್ಕೂ ಹೆಚ್ಚು ಮನೆಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದು ಗ್ರಾಮಸ್ಥರು ಆತಂಕದಲ್ಲಿದ್ದಾರೆ.

ಈ ಹಿನ್ನೆಲೆಯಲ್ಲಿ ಮನೆಯೊಳಗಿನ ವಸ್ತುಗಳನ್ನು ಗ್ರಾಮಸ್ಥರು ಹೊರಗಿಟ್ಟಿದ್ದಾರೆ. ತೋಟಗಳಲ್ಲಿ ಭೂಕುಸಿತ, ಕುಸಿದು ಬೀಳುತ್ತಿರುವ ರಸ್ತೆಗಳಿಂದ ಜನ ಆತಂಕಗೊಂಡಿದ್ದಾರೆ.

ಕೊಡಗು ಭೂಕುಸಿತಕ್ಕೆ ಭೂಕಂಪ ಕಾರಣವಲ್ಲ: ಭೂ ವಿಜ್ಞಾನ ಕೇಂದ್ರ ಸ್ಪಷ್ಟನೆಕೊಡಗು ಭೂಕುಸಿತಕ್ಕೆ ಭೂಕಂಪ ಕಾರಣವಲ್ಲ: ಭೂ ವಿಜ್ಞಾನ ಕೇಂದ್ರ ಸ್ಪಷ್ಟನೆ

ಬಸ್ರೀಕಟ್ಟೆ ,ಮೇಗುಂದ, ಸೋಮೇಶ್ವರಖಾನ್ ಗ್ರಾಮಗಳಲ್ಲಿ ಭೂಕುಸಿತ, ಮನೆಗಳ ಬಿರುಕು ಹೆಚ್ಚಾಗಿದೆ. ಮಳೆ ಕಮ್ಮಿಯಾದ್ರು ನಿಲ್ಲದ ಭೂ ಕುಸಿತ, ಮನೆಗಳ ಬಿರುಕಿಗೆ ಜನ ಹೈರಾಣಾಗಿದ್ದಾರೆ.

8 houses cracked in Chikkamagaluru district

ಮನವಿ ಮಾಡಿದ ಶಾಸಕ

ಸಿಎಂ ಕುಮಾರಸ್ವಾಮಿ ಚಿಕ್ಕಮಗಳೂರು ಜಿಲ್ಲೆಗೆ‌ ಬರುವಂತೆ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಸಾಮಾಜಿಕ ಜಾಲತಾಣದಲ್ಲಿ ಕೈ ಮುಗಿದು ಮನವಿ ಮಾಡಿದ್ದಾರೆ.

ತಮ್ಮ ಫೇಸ್ ಬುಕ್ ಖಾತೆಯಲ್ಲಿ ಕೈಮುಗಿದು ಜಿಲ್ಲೆಗೆ ಬರುವಂತೆ ಮನವಿ ಮಾಡಿರುವ ಅವರು ಅತಿವೃಷ್ಡಿ ಬಗ್ಗೆ ಪರಿಶೀಲನೆ ನಡೆಸುವಂತೆ ಕೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ಮೂಡಿಗೆರೆ ತಾಲೂಕಿನಲ್ಲಿ ಗ್ರಾಮ ವಾಸ್ತವ ಮಾಡುವಂತೆ ಮನವಿ ಮಾಡಿದ್ದಾರೆ.

8 houses cracked in Chikkamagaluru district

ಜಿಲ್ಲೆಯ ಅತಿವೃಷ್ಟಿ ಪರಿಶೀಲನೆ ನಡೆಸಲು ಶಾಸಕರು ಸಾಮಾಜಿಕ ಜಾಲದ ಮೊರೆ ಹೋಗಿದ್ದು, ಅವರು ಕೈ ಮುಗಿದು ಬೇಡಿಕೊಳ್ಳುತ್ತಿರುವ ವೀಡಿಯೊ ವೈರಲ್ ಆಗಿದೆ.

English summary
In Chikkamagaluru district at Someshwar Khan village, there have been more than 8 houses cracked so villagers are scared.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X