ಕರ್ನಾಟಕದಲ್ಲಿ ಒಂದೇ ದಿನ 783 ಮಂದಿಗೆ ಕೊರೊನಾವೈರಸ್
ಬೆಂಗಳೂರು,
ಸೆಪ್ಟೆಂಬರ್
19:
ಕಳೆದ
ಎರಡು
ದಿನಗಳಿಂದ
ಕರ್ನಾಟಕದಲ್ಲಿ
ಕೊರೊನಾವೈರಸ್
ಸೋಂಕಿತ
ಪ್ರಕರಣಗಳ
ಸಂಖ್ಯೆ
ಇಳಿಮುಖಗೊಂಡಿದೆ.
ರಾಜ್ಯದಲ್ಲಿ
ಹೊಸ
ಸೋಂಕಿತ
ಪ್ರಕರಣಗಳ
ಪ್ರಮಾಣ
ಶೇ.0.60ರಷ್ಟಿದ್ದು,
ಸಾವಿನ
ಸಂಖ್ಯೆಯ
ಶೇಕಡಾವಾರು
ಪ್ರಮಾಣ
2.04ರಷ್ಟಿದೆ.
ರಾಜ್ಯದಲ್ಲಿ
ಒಂದು
ದಿನದಲ್ಲಿ
783
ಮಂದಿಗೆ
ಕೊರೊನಾವೈರಸ್
ಸೋಂಕು
ತಗುಲಿರುವುದು
ವೈದ್ಯಕೀಯ
ತಪಾಸಣೆಯಲ್ಲಿ
ದೃಢಪಟ್ಟಿದೆ.
ಇದೇ
ಅವಧಿಯಲ್ಲಿ
1,139
ಸೋಂಕಿತರು
ಗುಣಮುಖರಾಗಿದ್ದಾರೆ.
ಕಳೆದ
24
ಗಂಟೆಗಳಲ್ಲಿ
16
ಮಂದಿ
ಕೊರೊನಾವೈರಸ್
ಸೋಂಕಿನಿಂದಲೇ
ಮೃತಪಟ್ಟಿದ್ದು,
ಈವರೆಗೂ
37,603
ಮಂದಿ
ಮಹಾಮಾರಿಯಿಂದ
ಪ್ರಾಣ
ಕಳೆದುಕೊಂಡಿದ್ದಾರೆ.
ಹುಷಾರ್: ಭಾರತದ 11 ರಾಜ್ಯಗಳಲ್ಲಿ ಡೆಂಗ್ಯೂ ರೋಗದ ಹೊಸ ತಳಿ!
ಭಾನುವಾರದ ಅಂಕಿ-ಅಂಶಗಳ ಪ್ರಕಾರ, ರಾಜ್ಯದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 29,67,866ಕ್ಕೆ ಏರಿಕೆಯಾಗಿದೆ. ಒಟ್ಟು 29,14,852 ಸೋಂಕಿತರು ಗುಣಮುಖರಾಗಿದ್ದು. 15,383 ಕೊವಿಡ್-19 ಸಕ್ರಿಯ ಪ್ರಕರಣಗಳಿವೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಬೆಂಗಳೂರಿನಲ್ಲಿ
ಕೊರೊನಾವೈರಸ್
ಸಂಖ್ಯೆ
ಏರಿಕೆ:
ಬೆಂಗಳೂರು
ನಗರವೊಂದರಲ್ಲಿ
ಕಳೆದ
ಒಂದು
ದಿನದಲ್ಲಿ
267
ಮಂದಿಗೆ
ಕೊವಿಡ್-19
ಸೋಂಕು
ತಗುಲಿರುವುದು
ವೈದ್ಯಕೀಯ
ತಪಾಸಣೆಯಲ್ಲಿ
ದೃಢಪಟ್ಟಿದ್ದು,
ಒಟ್ಟು
ಸೋಂಕಿತ
ಪ್ರಕರಣಗಳ
ಸಂಖ್ಯೆ
1243480ಕ್ಕೆ
ಏರಿಕೆಯಾಗಿದೆ.
7
ಮಂದಿ
ಪ್ರಾಣ
ಬಿಟ್ಟಿದ್ದು,
ಸಾವಿನ
ಸಂಖ್ಯೆ
16089ಕ್ಕೆ
ಏರಿಕೆಯಾಗಿದೆ.
ಇದರ
ಹೊರತಾಗಿ
ಜಿಲ್ಲೆಯಲ್ಲಿ
7474
ಸಕ್ರಿಯ
ಪ್ರಕರಣಗಳಿವೆ.
ಸಿಲಿಕಾನ್
ಸಿಟಿಯಲ್ಲಿ
ಈವರೆಗೂ
ಸೋಂಕು
ತಗುಲಿದ
1219916
ಮಂದಿ
ಗುಣಮುಖರಾಗಿದ್ದಾರೆ.
ರಾಜ್ಯದಲ್ಲಿ
ಕೊವಿಡ್-19
ಸೋಂಕಿನ
ಪರೀಕ್ಷೆ
ಪ್ರಮಾಣ:
ಕರ್ನಾಟಕದಲ್ಲಿ
ಕೊರೊನಾವೈರಸ್
ಸೋಂಕು
ತಪಾಸಣೆ
ವೇಗವನ್ನು
ಕೂಡ
ತಗ್ಗಿಸಲಾಗಿದೆ.
ಕಳೆದ
24
ಗಂಟೆಗಳಲ್ಲಿ
28,377
ಮಂದಿಗೆ
ರಾಪಿಡ್
ಆಂಟಿಜೆನಿಕ್
ಟೆಸ್ಟ್
ಹಾಗೂ
1,01,497
ಮಂದಿಗೆ
RT-PCR
ಟೆಸ್ಟ್
ನಡೆಸಲಾಗಿದ್ದು,
ಒಟ್ಟು
1,29,874
ಮಂದಿಗೆ
ಕೊವಿಡ್-19
ಪರೀಕ್ಷೆ
ನಡೆಸಲಾಗಿದೆ.
ರಾಜ್ಯದಲ್ಲಿ
ಈವರೆಗೂ
86,64,821
ಜನರಿಗೆ
ರಾಪಿಡ್
ಆಂಟಿಜೆನಿಕ್
ಟೆಸ್ಟ್
ಮಾಡಲಾಗಿದೆ.
ಇದರ
ಹೊರತಾಗಿ
3,76,08,368
ಮಂದಿಗೆ
RT-PCR
ಟೆಸ್ಟ್
ನಡೆಸಲಾಗಿದ್ದು,
ಈವರೆಗೂ
ಒಟ್ಟು
4,62,73,189
ಮಂದಿಗೆ
ಕೊವಿಡ್-19
ಪರೀಕ್ಷೆ
ನಡೆಸಲಾಗಿದೆ.
Recommended Video
ಜಿಲ್ಲಾವಾರು
ಕೊರೊನಾವೈರಸ್
ಸೋಂಕಿತ
ಪ್ರಕರಣ:
ರಾಜ್ಯದಲ್ಲಿ
ಒಟ್ಟು
783
ಮಂದಿಗೆ
ಕೊರೊನಾವೈರಸ್
ಸೋಂಕು
ಪತ್ತೆಯಾಗಿವೆ.
ಈ
ಪೈಕಿ
ಬಾಗಲಕೋಟೆ
0,
ಬಳ್ಳಾರಿ
3,
ಬೆಳಗಾವಿ
15,
ಬೆಂಗಳೂರು
ಗ್ರಾಮಾಂತರ
9
ಬೆಂಗಳೂರು
267,
ಬೀದರ್
1,
ಚಾಮರಾಜನಗರ
4,
ಚಿಕ್ಕಬಳ್ಳಾಪುರ
1,
ಚಿಕ್ಕಮಗಳೂರು
36,
ಚಿತ್ರದುರ್ಗ
13,
ದಕ್ಷಿಣ
ಕನ್ನಡ
97,
ದಾವಣಗೆರೆ
6,
ಧಾರವಾಡ
2,
ಗದಗ
3,
ಹಾಸನ
34,
ಹಾವೇರಿ
1,
ಕಲಬುರಗಿ
3,
ಕೊಡಗು
41,
ಕೋಲಾರ
2,
ಕೊಪ್ಪಳ
0,
ಮಂಡ್ಯ
13,
ಮೈಸೂರು
69,
ರಾಯಚೂರು
0,
ರಾಮನಗರ
0,
ಶಿವಮೊಗ್ಗ
28,
ತುಮಕೂರು
23,
ಉಡುಪಿ
82,
ಉತ್ತರ
ಕನ್ನಡ
29,
ವಿಜಯಪುರ
1,
ಯಾದಗಿರಿ
0
ಸೋಂಕಿತರ
ಪ್ರಕರಣಗಳು
ಪತ್ತೆಯಾಗಿವೆ.
ಯಾವ
ಹಂತದಲ್ಲಿ
ಎಷ್ಟು
ಫಲಾನುಭವಿಗಳಿಗೆ
ಲಸಿಕೆ?
ರಾಜ್ಯದಲ್ಲಿ
ಈವರೆಗೂ
7,63,098
ಆರೋಗ್ಯ
ಕಾರ್ಯಕರ್ತರಿಗೆ
ಮೊದಲ
ಡೋಸ್
ಮತ್ತು
6,36,736
ಆರೋಗ್ಯ
ಕಾರ್ಯಕರ್ತರಿಗೆ
ಎರಡನೇ
ಡೋಸ್
ನೀಡಲಾಗಿದೆ.
9,39,062
ಜನ
ಮೊದಲ
ಶ್ರೇಣಿ
ಕಾರ್ಮಿಕರಿಗೆ
ಮೊದಲ
ಡೋಸ್
ಹಾಗೂ
6,52,637
ಕಾರ್ಮಿಕರಿಗೆ
ಎರಡನೇ
ಡೋಸ್
ಕೊವಿಡ್-19
ಲಸಿಕೆ
ನೀಡಲಾಗಿದೆ.
ಇದರ
ಹೊರತಾಗಿ
45
ವರ್ಷಕ್ಕಿಂತ
ಮೇಲ್ಪಟ್ಟ
1,54,52,236
ಫಲಾನುಭವಿಗಳಿಗೆ
ಮೊದಲ
ಡೋಸ್
ಲಸಿಕೆ
ನೀಡಲಾಗಿದ್ದು
86,53,841
ಜನರಿಗೆ
ಎರಡನೇ
ಡೋಸ್
ಲಸಿಕೆ
ನೀಡಲಾಗಿದೆ.
ರಾಜ್ಯದಲ್ಲಿ
ಈವರೆಗೂ
3,74,01,455
ಫಲಾನುಭವಿಗಳಿಗೆ
ಮೊದಲ
ಡೋಸ್
ಹಾಗೂ
1,45,75,815
ಜನರಿಗೆ
ಎರಡನೇ
ಡೋಸ್
ಲಸಿಕೆ
ನೀಡಲಾಗಿದೆ.