ಆಗಸ್ಟ್ 06: ಕರ್ನಾಟಕದ ಜಿಲ್ಲೆಗಳ ಸಂಕ್ಷಿಪ್ತ ನೋಟ
ಕರ್ನಾಟಕದಲ್ಲಿ ಇಂದು ವಿವಿಧ ಜಿಲ್ಲೆಗಳಲ್ಲಿ ಹಲವು ಘಟನೆಗಳು ನಡೆದಿದ್ದು, ಅವುಗಳ ಸಂಕ್ಷಿಪ್ತ ವರದಿ ಇಲ್ಲಿದೆ.
ಚಿತ್ರದುರ್ಗದಲ್ಲಿ
ಆರ್ಟಿ-ಪಿಸಿಆರ್
ನೆಗೆಟಿವ್
ವರದಿ
ಕಡ್ಡಾಯ
ನೆರೆಯ
ಕೇರಳ
ಹಾಗೂ
ಮಹಾರಾಷ್ಟ್ರ
ರಾಜ್ಯಗಳಲ್ಲಿ
ಕೋವಿಡ್-19
ಪ್ರಕರಣಗಳು
ಹೆಚ್ಚಾಗುತ್ತಿರುವುದರಿಂದ
ಈ
ರಾಜ್ಯಗಳಿಂದ
ಆಗಮಿಸುವ
ಪ್ರಯಾಣಿಕರು
72
ಗಂಟೆಗಳ
ಅವಧಿಯೊಳಗಿನ
ಆರ್ಟಿ-ಪಿಸಿಆರ್
ನೆಗೆಟಿವ್
ವರದಿ
ಒದಗಿಸುವುದು
ಕಡ್ಡಾಯವಾಗಿದೆ.
ಜಿಲ್ಲೆಗೆ
ರೈಲು,
ರಸ್ತೆ
ಮಾರ್ಗದಲ್ಲಿ
ಆಗಮಿಸುವ
ಪ್ರಯಾಣಿಕರಿಗೆ
ಈ
ನಿಯಮ
ಅನ್ವಯವಾಗುತ್ತದೆ.
ರಾಜ್ಯ
ರಸ್ತೆ
ಸಾರಿಗೆ
ಸಂಸ್ಥೆ,
ರೈಲ್ವೆ
ಇಲಾಖೆಯ
ಸಕ್ಷಮ
ಪ್ರಾಧಿಕಾರಿಗಳು,
ಖಾಸಗಿ
ಸಾರಿಗೆ
ಸಂಸ್ಥೆಗಳ
ನಿರ್ವಹಣೆಗಾರರು
ನಿತ್ಯ
ಈ
ಕುರಿತು
ಮಾಹಿತಿಯನ್ನು
ಜಿಲ್ಲಾಡಳಿತಕ್ಕೆ
ನೀಡಬೇಕು
ಎಂದು
ಚಿತ್ರದುರ್ಗ
ಜಿಲ್ಲಾಧಿಕಾರಿ
ಕವಿತಾ.
ಎಸ್.
ಮನ್ನಿಕೇರಿ
ಆದೇಶಿಸಿದ್ದಾರೆ.
ಸಚಿವ
ಸ್ಥಾನಕ್ಕಾಗಿ
ತೀವ್ರಗೊಂಡ
ಹೋರಾಟದ
ಕಾವು
ಚಿತ್ರದುರ್ಗ
ಜಿಲ್ಲೆಯ
ಹಿರಿಯೂರು
ಕ್ಷೇತ್ರದ
ಶಾಸಕಿ
ಪೂರ್ಣಿಮಾ
ಶ್ರೀನಿವಾಸ್ಗೆ
ಸಚಿವ
ಸ್ಥಾನ
ಕೈ
ತಪ್ಪಿದ್ದು,
ಅಸಮಾಧಾನಗೊಂಡ
ಬಿಜೆಪಿ
ಕಾರ್ಯಕರ್ತರ
ಹೋರಾಟ
ತೀವ್ರಗೊಂಡಿದೆ.
ಮೊನ್ನೆ
ಹೆದ್ದಾರಿ
ಬಂದ್
ಮಾಡಿ
ಆಕ್ರೋಶ
ಹೊರಹಾಕಿದ್ದರು.
ನಿನ್ನೆ
ಹಿಂದುಳಿದ
ವರ್ಗಗಳ
ಮುಖಂಡರಿಂದ
ಸಭೆ
ನಡೆಸಿ
ಸಚಿವ
ಸ್ಥಾನ
ನೀಡುವಂತೆ
ಆಗ್ರಹಿಸಿದ್ದರು.
ಇಂದು
ಹಿರಿಯೂರು
ತಾಲೂಕಿನ
ಧರ್ಮಪುರ
ಹೋಬಳಿ
ಗ್ರಾಮದಲ್ಲಿ
ಟೈರ್ಗೆ
ಬೆಂಕಿ
ಹಚ್ಚಿ
ಪ್ರತಿಭಟಿಸಿ,
ನಂತರ
ಹಿರಿಯೂರಿಗೆ
30
ಕಿ.ಮೀ
ಪಾದಯಾತ್ರೆ
ನಡೆಸುವ
ಮೂಲಕ
ಬಿಜೆಪಿ
ಸರ್ಕಾರದ
ವಿರುದ್ಧ
ಕಿಡಿಕಾರಿದರು.
ಸಂಪುಟದಲ್ಲಿ
ಚಿಕ್ಕಮಗಳೂರು
ಜಿಲ್ಲೆಯನ್ನು
ಕಡೆಗಣಿಸಿಲ್ಲ
ಇಡೀ
ರಾಷ್ಟ್ರದ
ಮಹಾಮಂತ್ರಿ
ಇರುವುದು
ನಮ್ಮ
ಚಿಕ್ಕಮಗಳೂರು
ಜಿಲ್ಲೆಯಲ್ಲಿ.
ಆ
ಮಹಾಮಂತ್ರಿ
ಜಿಲ್ಲೆ,
ರಾಜ್ಯ,
ರಾಷ್ಟ್ರದ
ಸಮಗ್ರ
ಅಭಿವೃದ್ಧಿ
ಬಗ್ಗೆ
ಯೋಚನೆ
ಮಾಡುತ್ತಾರೆ
ಎಂದು
ಬಿಜೆಪಿ
ರಾಷ್ಟ್ರೀಯ
ಪ್ರಧಾನ
ಕಾರ್ಯದರ್ಶಿ
ಸಿ.ಟಿ.
ರವಿಯನ್ನು
ಶಾಸಕ
ಬೆಳ್ಳಿ
ಪ್ರಕಾಶ್
ಹೊಗಳಿದರು.
ಸಂಪುಟ ರಚಿಸುವಾಗ ಚಿಕ್ಕಮಗಳೂರು ಜಿಲ್ಲೆಯನ್ನು ಕಡೆಗಣಿಸಿಲ್ಲ ಎಂದ ಶಾಸಕ ಬೆಳ್ಳಿ ಪ್ರಕಾಶ್, ಸಿ.ಟಿ. ರವಿ ಬಿಜೆಪಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾಗಿದ್ದಾರೆ. ಅವರ ವಿಶೇಷ ಪ್ರಯತ್ನದಿಂದ ಜಿಲ್ಲೆಯಲ್ಲಿ ಏನು ಬೇಕಾದರೂ ಆಗಬಹುದು ಅನ್ನುವ ಸನ್ನಿವೇಶವಿದೆ. ರಾಜ್ಯದಲ್ಲಿ ಚಿಕ್ಕಮಗಳೂರು ಬಲಿಷ್ಠ ಜಿಲ್ಲೆ ಆಗಿದೆ ಎಂದರು.
ನಾನು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷನಾಗಿದ್ದೇನೆ, ತರೀಕೆರೆ ಶಾಸಕ ಡಿ.ಎಸ್. ಸುರೇಶ್ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿದ್ದಾರೆ, ಎಂ.ಕೆ. ಪ್ರಾಣೇಶ್ ವಿಧಾನ ಪರಿಷತ್ ಉಪಸಭಾಪತಿಗಳಾಗಿದ್ದಾರೆ, ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿಗೂ ಅಧಿಕಾರ ಬರುತ್ತದೆ ಎಂದು ಹೇಳಿದರು.
ರಾಜ್ಯದಲ್ಲೇ ಬಲಿಷ್ಠ ಜಿಲ್ಲೆ ನಮ್ಮದು ಅಂತ ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ, ಸಂಪುಟ ರಚನೆ ವೇಳೆ ಸಹಜವಾಗಿ ಕೆಲವರಿಗೆ ಅಸಮಾಧಾನ ಆಗಿದೆ. ಅವರೆಲ್ಲರನ್ನು ಸಮಾಧಾನ ಮಾಡುವ ಶಕ್ತಿ ಪಕ್ಷ, ಮುಖ್ಯಮಂತ್ರಿಗೆ ಇದೆ. ಚಿಕ್ಕಮಗಳೂರು ಜಿಲ್ಲೆಗೆ ಅನ್ಯಾಯವಾಗಿಲ್ಲ ಎಂದು ಬೆಳ್ಳಿ ಪ್ರಕಾಶ್ ಸಮರ್ಥನೆ ನೀಡಿದರು.
ಜಮೀರ್
ಮನೆ
ಮೇಲಿನ
ಇ.ಡಿ
ದಾಳಿ
ರಾಜಕೀಯ
ಪ್ರೇರಿತ
ಚಾಮರಾಜಪೇಟೆ
ಶಾಸಕ
ಹಾಗೂ
ಮಾಜಿ
ಸಚಿವ
ಜಮೀರ್
ಅಹ್ಮದ್
ಮನೆ
ಮೇಲೆ
ನಡೆದಿರುವ
ಇ.ಡಿ
ದಾಳಿಯನ್ನು
ರಾಜಕೀಯ
ಪ್ರೇರಿತ
ಎಂದು
ಮಾಗಡಿ
ಕ್ಷೇತ್ರದ
ಕಾಂಗ್ರೆಸ್
ಮುಖಂಡ
ಹಾಗೂ
ಮಾಜಿ
ಶಾಸಕ
ಎಚ್.ಸಿ.
ಬಾಲಕೃಷ್ಣ
ಆರೋಪಿಸಿದ್ದಾರೆ.
ನನ್ನ ಸ್ನೇಹಿತ ಜಮೀರ್ ಅಹ್ಮದ್ ಮೇನೆ ಮೇಲೆ ನಡೆದಿರುವ ಇ.ಡಿ ಅಧಿಕಾರಿಗಳ ದಾಳಿ ಕೇಂದ್ರದ ಬಿಜೆಪಿ ಸರ್ಕಾರ ಸ್ವಯಂ ಪ್ರೇರಿತ ದಾಳಿ ಎಂದರೆ ತಪ್ಪಾಗಲಾರದು ಎಂದು ಟ್ವಿಟ್ ಮಾಡುವ ಮೂಲಕ ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಮುಖಂಡ ಎಚ್.ಸಿ.ಬಾಲಕೃಷ್ಣ ನೈತಿಕ ಬೆಂಬಲ ವ್ಯಕ್ತಪಡಿಸಿದ್ದಾರೆ.
ನಿರ್ಗತಿಕರಿಗೆ, ಬಡವರಿಗೆ, ಸಂಕಷ್ಟದಲ್ಲಿ ಸಿಲುಕಿರುವ ಸಹಾಯ ಮಾಡುವಂತಾ ಗುಣ ಹೊಂದಿರುವ ವ್ಯಕ್ತಿಯನ್ನು ಆರೋಪದ ಸುಳಿಯಲ್ಲಿ ಸಿಲುಕಿಸಲು ಹೊರಟಿರವುದು ಸರಿಯಲ್ಲ ಎಂದು ಜಮೀರ್ ಮನೆ ಮೇಲಿನ ಇಡಿ ದಾಳಿಗೆ ಬಾಲಕೃಷ್ಣ ಅಸಮಾಧಾನ ಹೊರಹಾಕಿದ್ದಾರೆ.
ಇನ್ನು ಜಮೀರ್ ಅಹ್ಮದ್ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸುತ್ತಿದ್ದಾರೆ ಎಂಬುದನ್ನು ಮನಗಂಡ ಬಿಜೆಪಿಯವರು ಜಮೀರ್ನನ್ನು ಗುರಿಯಾಗಿಸಿ ಇಡಿ ದಾಳಿ ಮಾಡಿ ಅವರನ್ನು ಕಟ್ಟಿಹಾಕುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಬಾಲಕೃಷ್ಣ ಆರೋಪಿಸಿದರು.
ಪಕ್ಷ
ಯಾವತ್ತೂ
ಯಾರನ್ನೂ
ಕೈ
ಬಿಟ್ಟಿಲ್ಲ
ನಿಷ್ಠೆಯಿಂದ
ಪಕ್ಷಕ್ಕಾಗಿ
ದುಡಿಯುವವರನ್ನು
ಪಕ್ಷ
ಯಾವತ್ತೂ
ಕೈ
ಬಿಟ್ಟಿಲ್ಲ.
ಸಾಮಾನ್ಯ
ಕಾರ್ಯಕರ್ತನಾಗಿದ್ದ
ನನಗೆ
ಭಾರತೀಯ
ಜನತಾ
ಪಾರ್ಟಿ
ಆರು
ಬಾರಿ
ಶಾಸಕನಾಗುವ
ಅವಕಾಶ
ಕಲ್ಪಿಸಿತ್ತು.
ಎರಡನೇ
ಬಾರಿಗೆ
ಸಚಿವನಾಗುವ
ಭಾಗ್ಯವೂ
ನನ್ನ
ಪಾಲಿಗೆ
ದೊರೆತಿದೆ.
ಕೊಟ್ಟ
ಜವಾಬ್ದಾರಿಯನ್ನು
ಸಮರ್ಪಕವಾಗಿ
ನಿಭಾಯಿಸುತ್ತೇನೆ
ಎಂದು
ಮುಖ್ಯಮಂತ್ರಿ
ಬಸವರಾಜ
ಬೊಮ್ಮಾಯಿ
ಸಂಪುಟದಲ್ಲಿ
ಸಚಿವನಾಗಿ
ಪ್ರಮಾಣವಚನ
ಸ್ವೀಕರಿಸಿರುವ
ಸುಳ್ಯದ
ಶಾಸಕ
ಎಸ್.ಅಂಗಾರ
ಹೇಳಿದ್ದಾರೆ.
ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಪ್ರಥಮ ಬಾರಿಗೆ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಕಚೇರಿಗೆ ಶುಕ್ರವಾರ ಭೇಟಿ ನೀಡಿದ ಅವರು ಪಕ್ಷದ ವತಿಯಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ತ್ವರಿತವಾಗಿ
ಪರಿಹಾರ
ವಿತರಿಸಬೇಕು
ಪ್ರಾಕೃತಿಕ
ವಿಕೋಪದಿಂದ
ಸಂಪೂರ್ಣ,
ಭಾಗಶಃ
ಮನೆ
ಹಾನಿ
ಹಾಗೂ
ಮನೆಗೆ
ನೀರು
ನುಗ್ಗಿ
ಉಪಕರಣಗಳು
ಹಾಳಾಗಿ
ಸಂಕಷ್ಟಕ್ಕೆ
ತುತ್ತಾದವರಿಗೆ,
ಸ್ಥಳ
ಪರಿಶೀಲಿಸಿ
ಸರ್ಕಾರದ
ನಿಯಮಾನುಸಾರ
ತ್ವರಿತವಾಗಿ
ಪರಿಹಾರ
ವಿತರಿಸಬೇಕು
ಎಂದು
ಸಚಿವ
ಕೋಟ
ಶ್ರೀನಿವಾಸ
ಪೂಜಾರಿ
ನಿರ್ದೇಶನ
ನೀಡಿದರು.
Recommended Video
ಮಡಿಕೇರಿ ನಗರದ ಜಿ.ಪಂ. ಸಭಾಂಗಣದಲ್ಲಿ ಕೊಡಗು ಜಿಲ್ಲೆಯಲ್ಲಿ ಕೋವಿಡ್-19 ನಿರ್ವಹಣೆ ಮತ್ತು ಮಳೆ ಹಾನಿ ಪರಿಹಾರ ಕಾರ್ಯಗಳ ಕುರಿತು ಶುಕ್ರವಾರ ನಡೆದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ನಿಟ್ಟಿನಲ್ಲಿ ಪ್ರಥಮ ಆದ್ಯತೆಯಲ್ಲಿ ಕರ್ತವ್ಯ ನಿರ್ವಹಿಸುವಂತೆ ಹೇಳಿದರು.