ಉತ್ತರ ಕರ್ನಾಟಕದಲ್ಲಿ 62 ತಾಲೂಕುಗಳಲ್ಲಿ ಬರ
ಬೆಂಗಳೂರು, ಫೆಬ್ರವರಿ 26 : ಹಿಂಗಾರು ಹಂಗಾಮಿನಲ್ಲಿ ಮಳೆ ಕೊರತೆಯಿಂದಾಗಿ ಉತ್ತರ ಕರ್ನಾಟಕದ 12 ಜಿಲ್ಲೆಗಳಲ್ಲಿನ 62 ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಣೆ ಮಾಡಲಾಗಿದೆ ಎಂದು ಕಂದಾಯ ಸಚಿವ ವಿ. ಶ್ರೀನಿವಾಸ ಪ್ರಸಾದ್ ತಿಳಿಸಿದರು.
ಶುಕ್ರವಾರ
ವಿಧಾನಸೌಧದ
ಸಮ್ಮೇಳನ
ಸಭಾಂಗಣದಲ್ಲಿ
ಪತ್ರಿಕಾಗೋಷ್ಠಿ
ನಡೆಸಿದ
ಸಚಿವ
ಶ್ರೀನಿವಾಸ
ಪ್ರಸಾದ್
ಅವರು,
'ಕೇಂದ್ರ
ಸರ್ಕಾರದ
ಕೃಷಿ
ಮಂತ್ರಾಲಯದ
ಜಂಟಿ
ಕಾರ್ಯದರ್ಶಿ
ದಿನೇಶ್
ಕುಮಾರ್
ನೇತೃತ್ವದ
ತಂಡ
ಫೆ.24
ಹಾಗೂ
25
ರಂದು
ಮೂರು
ತಂಡಗಳಾಗಿ
ರಾಜ್ಯದಲ್ಲಿ
ಬರ
ಪೀಡಿತ
ತಾಲೂಕುಗಳ
ಪರಿಶೀಲನೆ
ನಡೆಸಿದೆ'
ಎಂದರು.
[ರಾಜ್ಯದ
98
ಬರಪೀಡಿತ
ತಾಲೂಕುಗಳ
ಪಟ್ಟಿ]
'ಮೂರು ತಂಡಗಳು ಬರಪೀಡಿತ ಜಿಲ್ಲೆಗಳಾದ ಬೀದರ್, ಕಲಬುರಗಿ, ರಾಯಚೂರು, ಯಾದಗಿರಿ, ಬಳ್ಳಾರಿ, ಕೊಪ್ಪಳ, ಬೆಳಗಾವಿ, ವಿಜಯಪುರ, ಬಾಗಲಕೋಟೆ, ಧಾರವಾಡ, ಗದಗ ಹಾಗೂ ಹಾವೇರಿ ಜಿಲ್ಲೆಗಳ 62 ತಾಲೂಕುಗಳಿಗೆ ಭೇಟಿನೀಡಿ ಪರಿಶೀಲನೆ ನಡೆಸಿದೆ' ಎಂದು ಹೇಳಿದರು. [ಬರಗಾಲ : ಲೋಕಸಭೆಯಲ್ಲಿ ಯಡಿಯೂರಪ್ಪ ವಿಷಯ ಪ್ರಸ್ತಾಪ]
'ರಾಜ್ಯದಲ್ಲಿನ ಬರಪೀಡಿತ ಜಿಲ್ಲೆಗಳಿಗೆ ಸರ್ಕಾರ ಎನ್ಡಿಆರ್ಎಫ್ ಹಾಗೂ ಎಸ್ಡಿಆರ್ಎಫ್ ನಿಧಿಯಿಂದ 2066 ಕೋಟಿ ರೂ. ಗಳನ್ನು ವೆಚ್ಚ ಮಾಡಿದ್ದು, ಕೇಂದ್ರ ಸರ್ಕಾರ ನೀಡಿದ 1540 ಕೋಟಿ ರೂ. ಪೈಕಿ 27 ಜಿಲ್ಲೆಗಳಿಗೆ 1043 ಕೋಟಿ ರೂ. ಹಣವನ್ನು 26,35,000 ರೈತರಿಗೆ ನೇರವಾಗಿ ಅವರ ಖಾತೆಗಳಿಗೆ ಜಮಾ ಮಾಡಲಾಗಿದೆ' ಎಂದು ತಿಳಿಸಿದರು. [ಕೇಂದ್ರ ತಂಡದಿಂದ ರಾಜ್ಯದ 12 ಜಿಲ್ಲೆಗಳಲ್ಲಿ ಬರ ಸಮೀಕ್ಷೆ]
'ಕೇಂದ್ರದ ತಂಡ ಸರ್ಕಾರಕ್ಕೆ ವರದಿ ಸಲ್ಲಿಸಿದ ಬಳಿಕ, ಕೇಂದ್ರದ ಗೃಹ ಸಚಿವರು ಹಣಕಾಸು ಸಚಿವರು ಹಾಗೂ ಕೃಷಿ ಸಚಿವರನ್ನು ಭೇಟಿಮಾಡಿ ಪರಿಹಾರ ಬಿಡುಗಡೆ ಮಾಡುವಂತೆ ರಾಜ್ಯ ಸರ್ಕಾರದ ಪರವಾಗಿ ಮನವಿ ಮಾಡಲಾಗುವುದು' ಎಂದರು.