ಕರ್ನಾಟಕದ ಕೊರೊನಾವೈರಸ್ ಕಥೆ: 24 ಗಂಟೆಗಳಲ್ಲೇ 5938 ಜನಕ್ಕೆ ಸೋಂಕು
ಬೆಂಗಳೂರು,
ಆಗಸ್ಟ್.23:
ಕರ್ನಾಟಕದಲ್ಲಿ
ಕೊರೊನಾವೈರಸ್
ಸೋಂಕಿತ
ಪ್ರಕರಣಗಳ
ಸಂಖ್ಯೆ
ಕಳೆದೆರೆಡು
ದಿನಗಳಿಗೆ
ಹೋಲಿಸಿದ್ದಲ್ಲಿ
ಕೊಂಚ
ತಗ್ಗಿದೆ.
ಕಳೆದ
24
ಗಂಟೆಗಳಲ್ಲಿ
5938
ಮಂದಿಗೆ
ಕೊವಿಡ್-19
ಸೋಂಕು
ತಗುಲಿರುವುದು
ವೈದ್ಯಕೀಯ
ತಪಾಸಣೆಯಲ್ಲಿ
ದೃಢಪಟ್ಟಿದೆ.
ರಾಜ್ಯದಲ್ಲಿ
ಕೊವಿಡ್-19
ಸೋಂಕಿತ
ಪ್ರಕರಣಗಳ
ಸಂಖ್ಯೆಗೆ
ಸಂಬಂಧಿಸಿದಂತೆ
ಆರೋಗ್ಯ
ಮತ್ತು
ಕುಟುಂಬ
ಇಲಾಖೆಯು
ಹೆಲ್ತ್
ಬುಲೆಟಿನ್
ಬಿಡುಗಡೆ
ಮಾಡಿದೆ.
ಒಂದೇ
ದಿನ
ಕೊವಿಡ್-19
ಸೋಂಕಿಗೆ
68
ಮಂದಿ
ಪ್ರಾಣ
ಬಿಟ್ಟಿದ್ದು,
ಮಹಾಮಾರಿಗೆ
ಬಲಿಯಾದವರ
ಸಂಖ್ಯೆಯು
4683ಕ್ಕೆ
ಏರಿಕೆಯಾಗಿದೆ.
ಕಳೆದ
24
ಗಂಟೆಗಳಲ್ಲಿ
4996
ಸೋಂಕಿತರು
ಗುಣಮುಖರಾಗಿದ್ದಾರೆ.
Recommended Video
ಭಾರತದಲ್ಲಿ
8
ದಿನಗಳಲ್ಲೇ
5
ಲಕ್ಷ
ಜನರಿಗೆ
ಕೊವಿಡ್-19
ಪಾಸಿಟಿವ್!
ಕೊರೊನಾವೈರಸ್
ಸೋಂಕಿತ
ಪ್ರಕರಣಗಳ
ಒಟ್ಟು
ಸಂಖ್ಯೆ
277814ಕ್ಕೆ
ಏರಿಕೆಯಾಗಿದೆ.
ಕರ್ನಾಟಕದಲ್ಲಿ
ಈವರೆಗೂ
189564
ಸೋಂಕಿತರು
ಗುಣಮುಖರಾಗಿದ್ದರೆ
83,551
ಸಕ್ರಿಯ
ಪ್ರಕರಣಗಳಿವುದು
ತಿಳಿದು
ಬಂದಿದೆ.
ಕರ್ನಾಟಕದಲ್ಲಿ ಎಷ್ಟು ಮಂದಿಗೆ ಕೊವಿಡ್ ಟೆಸ್ಟ್?
ಕೊರೊನಾವೈರಸ್ ಸೋಂಕು ಹರಡುವಿಕೆ ಆತಂಕದ ನಡುವೆ ಸಾರ್ವಜನಿಕರನ್ನು ಕೊವಿಡ್-19 ತಪಾಸಣೆಗೆ ಒಳಪಡಿಸುವುದು ತುರ್ತು ಅಗತ್ಯವಾಗಿದೆ. ಈ ಹಿನ್ನೆಲೆ ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲೇ 11071 ಜನರನ್ನು ರಾಪಿಡ್ ಆಂಟಿಜೆನ್ ಡಿಟೆಕ್ಷನ್ ತಪಾಸಣೆಗೆ ಒಳಪಡಿಸಲಾಗಿದ್ದು, 29777 ಜನರಿಗೆ RT-PCR ವೈದ್ಯಕೀಯ ತಪಾಸಣೆ ನಡೆಸಲಾಗಿದೆ. ಒಂದೇ ದಿನ 40848 ಜನರನ್ನು ಕೊವಿಡ್-19 ಟೆಸ್ಟ್ ಗೆ ಒಳಪಡಿಸಲಾಗಿದೆ. ರಾಜ್ಯದಲ್ಲಿ ಇದುವರೆಗೂ 24,13,951 ಜನರಿಗೆ ಕೊವಿಡ್-19 ತಪಾಸಣೆಗೆ ಒಳಪಡಿಸಲಾಗಿದೆ.
ಸಿಲಿಕಾನ್ ಸಿಟಿಯಲ್ಲಿ 2126 ಮಂದಿಗೆ ಕೊರೊನಾವೈರಸ್
ಬೆಂಗಳೂರಿನಲ್ಲಿ ಕಳೆದ 24 ಗಂಟೆಗಳಲ್ಲೇ 2126 ಮಂದಿಗೆ ಕೊರೊನಾವೈರಸ್ ಸೋಂಕು ತಗಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ಖಾತ್ರಿಯಾಗಿದೆ. ಇದರಿಂದ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 1,07,875ಕ್ಕೆ ಏರಿಕೆಯಾಗಿದೆ. ಇಂದು 1468 ಸೋಂಕಿತರು ಗುಣಮುಖರಾಗಿದ್ದು, ಇದುವರೆಗೂ ಬೆಂಗಳೂರಿನಲ್ಲೇ 71329 ಜನರು ಡಿಸ್ಚಾರ್ಜ್ ಆಗಿದ್ದಾರೆ. ಇನ್ನು, ಒಂದೇ ದಿನ ಮಹಾಮಾರಿಗೆ ಐವರು ಪ್ರಾಣ ಬಿಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 1668ಕ್ಕೆ ಏರಿಕೆಯಾಗಿದೆ.
ರಾಜ್ಯದ ಯಾವ ಜಿಲ್ಲೆಗಳಲ್ಲಿ ಎಷ್ಟು ಕೊರೊನಾವೈರಸ್ ಕೇಸ್?
ರಾಜ್ಯದಲ್ಲಿ ಒಟ್ಟು 5938 ಮಂದಿಗೆ ಕೊರೊನಾವೈರಸ್ ಸೋಂಕು ಪತ್ತೆಯಾಗಿದ್ದು, 30 ಜಿಲ್ಲೆಗಳಲ್ಲೂ ಸೋಂಕಿತ ಪ್ರಕರಣಗಳು ವರದಿಯಾಗಿದೆ. ಬಾಗಲಕೋಟೆ 139, ಬಳ್ಳಾರಿ 406, ಬೆಳಗಾವಿ 136, ಬೆಂಗಳೂರು ಗ್ರಾಮಾಂತರ 35, ಬೆಂಗಳೂರು 2126, ಬೀದರ್ 38, ಚಾಮರಾಜನಗರ 23, ಚಿಕ್ಕಬಳ್ಳಾಪುರ 81, ಚಿಕ್ಕಮಗಳೂರು 126, ಚಿತ್ರದುರ್ಗ 71, ದಕ್ಷಿಣ ಕನ್ನಡ 193, ದಾವಣಗೆರೆ 265, ಧಾರವಾಡ 194, ಗದಗ 182, ಹಾಸನ 196, ಹಾವೇರಿ 150, ಕಲಬುರಗಿ 203, ಕೊಡಗು 15, ಕೋಲಾರ 47, ಕೊಪ್ಪಳ 256, ಮಂಡ್ಯ 51, ಮೈಸೂರು 92, ರಾಯಚೂರು 81, ರಾಮನಗರ 42, ಶಿವಮೊಗ್ಗ 246, ತುಮಕೂರು 112, ಉಡುಪಿ 117, ಉತ್ತರ ಕನ್ನಡ 108, ವಿಜಯಪುರ 134, ಯಾದಗಿರಿ 73 ಸೋಂಕಿತರ ಪ್ರಕರಣಗಳು ಪತ್ತೆಯಾಗಿವೆ.
ರಾಜ್ಯದಲ್ಲಿ 24 ಗಂಟೆಗಳಲ್ಲಿ 4996 ಸೋಂಕಿತರು ಗುಣಮುಖ
ಕೊರೊನಾವೈರಸ್ ಸೋಂಕು ಹರಡುವಿಕೆ ಭೀತಿ ನಡುವೆಯೂ ಸೋಂಕಿತರಿಗೆ ನೀಡಿದ ಚಿಕಿತ್ಸೆ ಯಶಸ್ವಿಯಾಗುತ್ತಿದೆ. ರಾಜ್ಯದಲ್ಲಿ ಗುಣಮುಖರ ಸಂಖ್ಯೆಯೂ ಏರಿಕೆಯಾಗುತ್ತಿದೆ. ಕಳೆದ 24 ಗಂಟೆಗಳಲ್ಲೇ ರಾಜ್ಯದಲ್ಲಿ 4996 ಮಂದಿ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಬಾಗಲಕೋಟೆ 140, ಬಳ್ಳಾರಿ 304, ಬೆಳಗಾವಿ 134, ಬೆಂಗಳೂರು ಗ್ರಾಮಾಂತರ 20, ಬೆಂಗಳೂರು ನಗರ 1468, ಬೀದರ್ 46, ಚಾಮರಾಜನಗರ 46, ಚಿಕ್ಕಬಳ್ಳಾಪುರ 40, ಚಿಕ್ಕಮಗಳೂರು 42, ಚಿತ್ರದುರ್ಗ 92, ದಕ್ಷಿಣ ಕನ್ನಡ 164, ದಾವಣಗೆರೆ 178, ಧಾರವಾಡ 170, ಗದಗ 100, ಹಾಸನ 128, ಹಾವೇರಿ 23, ಕಲಬುರಗಿ 215, ಕೋಲಾರ 68, ಕೊಪ್ಪಳ 177, ಮಂಡ್ಯ 139, ರಾಯಚೂರು 171, ರಾಮನಗರ 40, ಶಿವಮೊಗ್ಗ 271, ತುಮಕೂರು 55, ಉಡುಪಿ 309, ಉತ್ತರ ಕನ್ನಡ 63, ವಿಜಯಪುರ 155, ಯಾದಗಿರಿ 238 ಸೋಂಕಿತರು ಗುಣಮುಖರಾಗಿದ್ದಾರೆ.