ಕರುನಾಡಿಗೆ ಕೊರೊನಾಘಾತ: ಒಂದೇ ದಿನ 34804 ಮಂದಿಗೆ ಸೋಂಕು!
ಬೆಂಗಳೂರು,
ಏಪ್ರಿಲ್
25:
ಕರ್ನಾಟಕದಲ್ಲಿ
ಕೊರೊನಾವೈರಸ್
ಸಾಂಕ್ರಾಮಿಕ
ಪಿಡುಗು
ನಿಯಂತ್ರಣ
ಕಳೆದುಕೊಂಡಿದೆ.
ಕೊವಿಡ್-19
ಸೋಂಕು
ಆರಂಭದ
ಬಳಿಕ
ಮೊದಲ
ಬಾರಿಗೆ
ರಾಜ್ಯದಲ್ಲಿ
34
ಸಾವಿರಕ್ಕೂ
ಹೆಚ್ಚು
ಸೋಂಕಿತ
ಪ್ರಕರಣಗಳು
ವರದಿಯಾಗಿವೆ.
ರಾಜ್ಯದಲ್ಲಿ
24
ಗಂಟೆಗಳಲ್ಲಿ
34804
ಮಂದಿಗೆ
ಕೊರೊನಾವೈರಸ್
ಸೋಂಕು
ತಗುಲಿರುವುದು
ವೈದ್ಯಕೀಯ
ತಪಾಸಣೆಯಲ್ಲಿ
ದೃಢಪಟ್ಟಿದೆ.
ಒಂದು
ದಿನದಲ್ಲಿ
143
ಮಂದಿ
ಮಹಾಮಾರಿಗೆ
ಬಲಿಯಾಗಿದ್ದರೆ,
ಇದೇ
ಅವಧಿಯಲ್ಲಿ
6982
ಸೋಂಕಿತರು
ಗುಣಮುಖರಾಗಿದ್ದಾರೆ.
ಕೊರೊನಾ
ರೋಗಿಗಳಿಗೆ
ಮನೆಯಲ್ಲೇ
ಆಕ್ಸಿಮೀಟರ್
ತಪಾಸಣೆ
ಹೇಗೆ?
ಬೆಂಗಳೂರಿನಲ್ಲೇ
ಒಂದು
ದಿನದಲ್ಲಿ
20733
ಮಂದಿಗೆ
ಸೋಂಕು
ತಗುಲಿರುವುದು
ದೃಢಪಟ್ಟಿದೆ.
ಸಿಲಿಕಾನ್
ಸಿಟಿಯಲ್ಲಿ
ಒಟ್ಟು
ಸೋಂಕಿತ
ಪ್ರಕರಣಗಳ
ಸಂಖ್ಯೆ
6,53,656ಕ್ಕೆ
ಏರಿಕೆಯಾಗಿದ್ದು,
ಈವರೆಗೂ
5800
ಮಂದಿ
ಮಹಾಮಾರಿಗೆ
ಬಲಿಯಾಗಿದ್ದಾರೆ.
ಕಳೆದ
24
ಗಂಟೆಗಳಲ್ಲೇ
77
ಮಂದಿ
ಪ್ರಾಣ
ಬಿಟ್ಟಿದ್ದು,
ಬೆಂಗಳೂರಿನಲ್ಲಿ
1,80,542
ಸಕ್ರಿಯ
ಪ್ರಕರಣಗಳಿವೆ.
Recommended Video
ಯಾವ
ಜಿಲ್ಲೆಯಲ್ಲಿ
ಎಷ್ಟು
ಪ್ರಕರಣ?
ರಾಜ್ಯದಲ್ಲಿ
ಒಟ್ಟು
34804
ಮಂದಿಗೆ
ಕೊರೊನಾವೈರಸ್
ಸೋಂಕು
ಪತ್ತೆಯಾಗಿವೆ.
ಈ
ಪೈಕಿ
ಬಾಗಲಕೋಟೆ
390,
ಬಳ್ಳಾರಿ
732,
ಬೆಳಗಾವಿ
336,
ಬೆಂಗಳೂರು
ಗ್ರಾಮಾಂತರ
864,
ಬೆಂಗಳೂರು
20733,
ಬೀದರ್
406,
ಚಾಮರಾಜನಗರ
284,
ಚಿಕ್ಕಬಳ್ಳಾಪುರ
434,
ಚಿಕ್ಕಮಗಳೂರು
247,
ಚಿತ್ರದುರ್ಗ
100,
ದಕ್ಷಿಣ
ಕನ್ನಡ
564,
ದಾವಣಗೆರೆ
242,
ಧಾರವಾಡ
546,
ಗದಗ
76,
ಹಾಸನ
768,
ಹಾವೇರಿ
99,
ಕಲಬುರಗಿ
626,
ಕೊಡಗು
1077,
ಕೋಲಾರ
782,
ಕೊಪ್ಪಳ
152,
ಮಂಡ್ಯ
814,
ಮೈಸೂರು
700,
ರಾಯಚೂರು
643,
ರಾಮನಗರ
225,
ಶಿವಮೊಗ್ಗ
418,
ತುಮಕೂರು
1153,
ಉಡುಪಿ
319,
ಉತ್ತರ
ಕನ್ನಡ
243,
ವಿಜಯಪುರ
468,
ಯಾದಗಿರಿ
363
ಸೋಂಕಿತರ
ಪ್ರಕರಣಗಳು
ಪತ್ತೆಯಾಗಿವೆ.