ಮೂರು ಮಹಾನಗರ ಪಾಲಿಕೆಗಳಿಗೆ ಇನ್ನೂ ಹೊಸ ಮೇಯರ್ ಸಿಕ್ಕಿಲ್ಲ!
ಬೆಂಗಳೂರು, ಅಕ್ಟೋಬರ್ 24 : ಕರ್ನಾಟಕದ ಮೂರು ಮಹಾನಗರ ಪಾಲಿಕೆಗಳಿಗೆ ಚುನಾವಣೆ ನಡೆದು 2 ತಿಂಗಳು ಕಳೆದಿದೆ. ಆದರೆ, ಮೇಯರ್ ಮತ್ತು ಉಪ ಮೇಯರ್ ಆಯ್ಕೆ ನಡೆದಿಲ್ಲ. ಮೇಯರ್ ಇಲ್ಲದೇ ಈ ಬಾರಿಯ ಮೈಸೂರು ದಸರಾ ಸಹ ಮುಕ್ತಾಯಗೊಂಡಿದೆ.
ಆಗಸ್ಟ್ 31ರಂದು ಮೈಸೂರು, ಶಿವಮೊಗ್ಗ ಮತ್ತು ತುಮಕೂರು ಮಹಾನಗರ ಪಾಲಿಕೆಗೆ ಚುನಾವಣೆ ನಡೆದಿತ್ತು. ಸೆಪ್ಟೆಂಬರ್ 3ರಂದು ಚುನಾವಣಾ ಫಲಿತಾಂಶ ಪ್ರಕಟವಾಗಿದೆ. ಆದರೆ, ಇದುವರೆಗೂ ಮೇಯರ್ ಮತ್ತು ಉಪ ಮೇಯರ್ ಆಯ್ಕೆ ನಡೆದಿಲ್ಲ.
ಸ್ಥಳೀಯ ಸಂಸ್ಥೆ ಫಲಿತಾಂಶ : ಯಾವ ಪಕ್ಷದ ಹಿಡಿತ ಎಷ್ಟು?
ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಳ್ಳದೇ ಸ್ಪರ್ಧೆ ಮಾಡಿದ್ದವು. ಅತಂತ್ರ ಫಲಿತಾಂಶ ಬಂದರೆ ದೋಸ್ತಿ ಮಾಡಿಕೊಳ್ಳಲು ನಿರ್ಧಾರವನ್ನು ಕೈಗೊಳ್ಳಲಾಗಿತ್ತು. ಆದರೆ, ಇದುವರೆಗೂ ಮೇಯರ್, ಉಪ ಮೇಯರ್ ಆಯ್ಕೆ ಮಾಡಲು ಸಾಧ್ಯವಾಗಿಲ್ಲ.
ಸ್ಥಳೀಯ ಸಂಸ್ಥೆ ಚುನಾವಣೆ : ಯಾವ ಪಕ್ಷಕ್ಕೆ ಎಷ್ಟು ಸೀಟು?
ಪ್ರಾದೇಶಿಕ ಆಯುಕ್ತರು ಮೇಯರ್ ಮತ್ತು ಉಪ ಮೇಯರ್ ಆಯ್ಕೆಗೆ ಚುನಾವಣೆ ನಡೆಸಬೇಕು. ಆದರೆ, ಸರ್ಕಾರದಿಂದ ಇನ್ನೂ ಚುನಾವಣೆ ನಡೆಸಲು ಅಧಿಸೂಚನೆ ಪ್ರಕಟಗೊಂಡಿಲ್ಲ. ಯಾವಾಗ ಹೊಸ ಮೇಯರ್ ಆಯ್ಕೆ ನಡೆಯಲಿದೆ? ಎಂದು ಕಾದು ನೋಡಬೇಕು....
ಶಿವಮೊಗ್ಗ ಮಹಾನಗರ ಪಾಲಿಕೆ ಬಿಜೆಪಿ ತೆಕ್ಕೆಗೆ
ತುಮಕೂರು ಮಹಾನಗರ ಪಾಲಿಕೆ
ತುಮಕೂರು ಮಹಾನಗರ ಪಾಲಿಕೆಯಲ್ಲಿ ಅತಂತ್ರ ಫಲಿತಾಂಶ ಬಂದಿದೆ. ಒಟ್ಟು 35 ವಾರ್ಡ್ಗಳಿದ್ದು, ಬಹುಮತ ಪಡೆಯಲು 18 ಸ್ಥಾನಗಳಲ್ಲಿ ಜಯಗಳಿಸಬೇಕಾಗಿದೆ.
ಆಗಸ್ಟ್
31ರಂದು
ನಡೆದ
ಚುನಾವಣೆಯಲ್ಲಿ
ಬಿಜೆಪಿ
12,
ಜೆಡಿಎಸ್
10,
ಕಾಂಗ್ರೆಸ್
10,
ಮೂರು
ಪಕ್ಷೇತರ
ಅಭ್ಯರ್ಥಿಗಳು
ಜಯಗಳಿಸಿದ್ದಾರೆ.
2014ರಲ್ಲಿ
ತುಮಕೂರು
ಮಹಾನಗರ
ಪಾಳಿಕೆ
ರಚನೆ
ಆಯಿತು.
ಇದು
ಮೊದಲ
ಚುನಾವಣೆಯಾಗಿದೆ.
ಮೊದಲು
ತುಮಕೂರು
ನಗರಸಭೆ
ಅಸ್ತಿತ್ವದಲ್ಲಿತ್ತು.
1994ರಿಂದಲೂ
ನಗರದಲ್ಲಿ
ಮೈತ್ರಿ
ಆಡಳಿತವಿದೆ.
ಮೈಸೂರು ಮಹಾನಗರ ಪಾಲಿಕೆ
ಮೈಸೂರು ಮಹಾನಗರ ಪಾಲಿಕೆಯಲ್ಲಿ 65 ವಾರ್ಡ್ಗಳಿವೆ. ಬಹುಮತ ಪಡೆಯಲು 33 ಸ್ಥಾನಗಳ ಅಗತ್ಯವಿದೆ. ಆದರೆ, ಅತಂತ್ರ ಫಲಿತಾಂಶ ಬಂದಿದೆ.
ಚುನಾವಣೆಯಲ್ಲಿ ಬಿಜೆಪಿ 22, ಕಾಂಗ್ರೆಸ್ 19, ಜೆಡಿಎಸ್ 18, ಬಿಎಸ್ಪಿ 1 ಮತ್ತು 6 ಪಕ್ಷೇತರ ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಹಿಂದೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೇಯರ್ ಮತ್ತು ಉಪ ಮೇಯರ್ ಪಟ್ಟವನ್ನು ಹಂಚಿಕೊಂಡಿದ್ದವು.
ಶಿವಮೊಗ್ಗ ಮಹಾನಗರ ಪಾಲಿಕೆ
ಶಿವಮೊಗ್ಗ
ಮಹಾನಗರ
ಪಾಲಿಕೆಯ
35
ಸ್ಥಾನಗಳಿಗೆ
ಚುನಾವಣೆ
ನಡೆದಿದ್ದು,
ಬಿಜೆಪಿ
ಸ್ಪಷ್ಟ
ಬಹುಮತ
ಪಡೆದಿದೆ.
ಆದರೆ,
ಇನ್ನೂ
ಮೇಯರ್
ಮತ್ತು
ಉಪ
ಮೇಯರ್
ಆಯ್ಕೆ
ನಡೆದಿಲ್ಲ.
ಚುನಾವಣೆಯಲ್ಲಿ
ಬಿಜೆಪಿ
20,
ಕಾಂಗ್ರೆಸ್
7,
ಜೆಡಿಎಸ್
2,
ಎಸ್ಡಿಪಿಐ
1
ಮತ್ತು
5
ಸ್ಥಾನಗಳಲ್ಲಿ
ಪಕ್ಷೇತರ
ಅಭ್ಯರ್ಥಿಗಳು
ಜಯಗಳಿಸಿದ್ದಾರೆ.
ಮೇಯರ್-ಉಪ ಮೇಯರ್ ಆಯ್ಕೆಯಾಗಬೇಕು
ಸರ್ಕಾರದಿಂದ ಸೂಚನೆ ಸಿಕ್ಕ ಮೇಲೆ ಪ್ರಾದೇಶಿಕ ಆಯುಕ್ತರು ಮೇಯರ್ ಮತ್ತು ಉಪ ಮೇಯರ್ ಚುನಾವಣೆಗೆ ದಿನಾಂಕ ನಿಗದಿ ಪಡಿಸುತ್ತಾರೆ. ಆದರೆ, ಇದುವರೆಗೂ ಸರ್ಕಾರ ಯಾವುದೇ ಸೂಚನೆ ನೀಡಲ್ಲ. ಕೆಎಂಸಿ ಕಾಯ್ದೆಯ ಪ್ರಕಾರ ಚುನಾವಣೆ ನಡೆದ ಕೆಲವೇ ದಿನಗಳಲ್ಲಿ ಮೇಯರ್ ಮತ್ತು ಉಪ ಮೇಯರ್ ಆಯ್ಕೆಗೆ ಅಧಿಸೂಚನೆ ಹೊರಡಿಸಬೇಕಾಗಿದೆ.