ದ್ವಿತೀಯ ಪಿಯುಸಿ ಪರೀಕ್ಷೆ ಆರಂಭ: ಆಲ್ ದಿ ಬೆಸ್ಟ್ ಹೇಳಿದ ಸಚಿವ ಬಿ.ಸಿ. ನಾಗೇಶ್
ಬೆಂಗಳೂರು, ಏಪ್ರಿಲ್ 22: ರಾಜ್ಯದಾದ್ಯಂತ ಇಂದಿನಿಂದ (ಏ.22) ದ್ವಿತೀಯ ಪಿಯುಸಿ ಪರೀಕ್ಷೆಗಳು ಪ್ರಾರಂಭವಾಗಿದೆ. ಈಗಾಗಲೇ ಎಸ್ಎಸ್ಎಲ್ಸಿ ಪರೀಕ್ಷೆಗಳು ಯಾವುದೇ ಗೊಂದಲಗಳಿಲ್ಲದೆ ಯಶಸ್ವಿಯಾಗಿದೆ.
ದ್ವಿತೀಯ ಪಿಯುಸಿಯಲ್ಲೂ ಯಾವುದೇ ಗೊಂದಲವಿಲ್ಲದೇ ನಡೆಸಲು ಶಿಕ್ಷಣ ಇಲಾಖೆ ಸಂಪೂರ್ಣವಾಗಿ ಸಜ್ಜಾಗಿದ್ದು, ಉಡುಪಿ ಪಿಯು ಕಾಲೇಜು ವಿದ್ಯಾರ್ಥಿನಿಯರಿಂದ ಪ್ರಾರಂಭವಾದ ಹಿಜಾಬ್ ಗೊಂದಲಕ್ಕೀಡಾಗಿತ್ತು. ಸಮವಸ್ತ್ರವನ್ನು ಕಡ್ಡಾಯವಾಗಿ ಧರಿಸಬೇಕು. ಹಿಜಾಬ್ ಧರಿಸಿ ಬಂದರೆ ಪರೀಕ್ಷೆಗೆ ಅವಕಾಶ ಮಾಡಿಕೊಡುವುದಿಲ್ಲ ಎಂದು ಶಿಕ್ಷಣ ಇಲಾಖೆ ಸ್ಪಷ್ಟಪಡಿಸಿದೆ.
2nd PUC Exam; ಉಡುಪಿಯಲ್ಲಿ ಹಿಜಾಬ್ ವಿದ್ಯಾರ್ಥಿನಿಯರ ಹೈಡ್ರಾಮ!
ಚಿಕ್ಕಮಗಳೂರು
ಜಿಲ್ಲೆಗೆ
ಭೇಟಿ
ನೀಡಿ
ಶಿಕ್ಷಣ
ಸಚಿವ
ಬಿ.ಸಿ.
ನಾಗೇಶ್
ಇನ್ನು
ಶುಕ್ರವಾರ
ಚಿಕ್ಕಮಗಳೂರು
ಜಿಲ್ಲೆಗೆ
ಭೇಟಿ
ನೀಡಿದ್ದ
ಪ್ರಾಥಮಿಕ
ಮತ್ತು
ಪ್ರೌಢ
ಶಿಕ್ಷಣ
ಸಚಿವ
ಬಿ.ಸಿ.
ನಾಗೇಶ್,
ಉರ್ದು
ಶಾಲೆ
ಮುಚ್ಚುವ
ಚಿಂತನೆ
ಇಲ್ಲ.
ಉತ್ತಮ
ಶಿಕ್ಷಣ
ನೀಡುವ
ಉದ್ದೇಶದಿಂದ
ಒಂಟಿ
ಶಾಲೆಗಳನ್ನು
ವಿಲೀನ
ಮಾಡಲಾಗುವುದು
ಎಂದು
ತಿಳಿಸಿದರು.
ಕಲಿಕೆ ಹಾಗೂ ಮಕ್ಕಳ ನಡುವೆ ಪ್ರತಿಸ್ಪರ್ಧೆ, ಉತ್ತಮ ಶಿಕ್ಷಣ ನೀಡುವ ಉದ್ದೇಶದಿಂದ ಶಾಲೆಗಳ ವಿಲೀನ ಮಾಡಲಾಗುವುದು. ಯಾವುದೇ ಶಾಲೆಗಳನ್ನು ಮುಚ್ಚುವುದಿಲ್ಲ, ಬದಲಾಗಿ ವಿಲೀನ ಮಾಡುತ್ತೇವೆ. ಕನ್ನಡ ಶಾಲೆ, ಉರ್ದು, ಮರಾಠಿ, ತಮಿಳು ಶಾಲೆ ಯಾವುದೇ ಇದ್ದರೂ ಸಹ ವಿಲೀನ ಮಾಡಲಾಗುವುದು ಎಂದರು.
Breaking; ಉಡುಪಿಯಲ್ಲಿ ಹಿಜಾಬ್ಗೆ ಪಟ್ಟು, ಪರೀಕ್ಷೆ ಬರೆಯದ ಆಲಿಯಾ, ರೇಷಂ
ದ್ವಿತೀಯ ಪಿಯುಸಿ ಕುರಿತು ಮಾತನಾಡಿದ ಶಿಕ್ಷಣ ಸಚಿವರು, ವಿದ್ಯಾರ್ಥಿಗಳು ತುಂಬಾ ವಿಶ್ವಾಸದಲ್ಲಿದ್ದಾರೆ. ರಾಜ್ಯದಲ್ಲಿ ಬಾಲಕರು ಮತ್ತು ಬಾಲಕಿಯರು ಸಮಪಾಲು ಬರೆಯುತ್ತಿದ್ದಾರೆ. ಅಧಿಕಾರಿಗಳ ಮೇಲೆ ವಿಶ್ವಾಸವಿದೆ ಪರೀಕ್ಷೆ ಉತ್ತಮವಾಗಿ ನಡೆಯುತ್ತದೆ ಎಂದು ಚಿಕ್ಕಮಗಳೂರಿನಲ್ಲಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದರು.
ದ್ವಿತೀಯ
ಪಿಯುಸಿ
ಪರೀಕ್ಷೆ
ಬರೆಯುತ್ತಿರುವ
ಎಲ್ಲಾ
ವಿದ್ಯಾರ್ಥಿಗಳಿಗೂ
ಶುಭ
ಕೋರುತ್ತೇನೆ.
ಎರಡು
ವರ್ಷದಿಂದ
ಮಕ್ಕಳಿಗೆ
ಪರೀಕ್ಷೆ
ಇರಲಿಲ್ಲ,
ಈಗ
ಎಲ್ಲಾ
ಮಕ್ಕಳು
ಧೈರ್ಯದಿಂದಿದ್ದಾರೆ.
ಸಿದ್ಧತೆ
ಹೇಗಿದೆ
ಎಂಬುದನ್ನು
ನೋಡುವುದಕ್ಕೆ
ಚಿಕ್ಕಮಗಳೂರಿಗೆ
ಬಂದಿದ್ದೆ.
ಎಲ್ಲಾ
ಸಿದ್ಧತೆಗಳು
ಶಿಕ್ಷಕರು
ಅಚ್ಚುಕಟ್ಟಾಗಿ
ಮಾಡಿದ್ದಾರೆ.
ಶಿಕ್ಷಕರು
ಮಕ್ಕಳಿಗೆ
ಧೈರ್ಯ
ತುಂಬಿ
ಪರೀಕ್ಷೆ
ಬರೆಸುತ್ತಾರೆಂದು
ವಿಶ್ವಾಸ
ನನಗಿದೆ
ಎಂದು
ಸಚಿವ
ಬಿ.ಸಿ.
ನಾಗೇಶ್
ಪ್ರತಿಕ್ರಿಯಿಸಿದರು.
Recommended Video
ಹಾಸನದಲ್ಲಿ
ಉತ್ಸಾಸದಿಂದ
ಪರೀಕ್ಷಾ
ಕೇಂದ್ರಕ್ಕೆ
ಆಗಮಿಸಿದ
ವಿದ್ಯಾರ್ಥಿಗಳು
ಇಂದಿನಿಂದ
ದ್ವಿತೀಯ
ಪಿಯುಸಿ
ಪರೀಕ್ಷೆ
ಆರಂಭವಾಗಿದ್ದು,
ಹಾಸನದಲ್ಲಿ
ವಿದ್ಯಾರ್ಥಿಗಳು
ಉತ್ಸಾಸದಿಂದ
ಪರೀಕ್ಷಾ
ಕೇಂದ್ರಕ್ಕೆ
ಆಗಮಿಸಿದರು.
ಮುಸ್ಲಿಂ
ವಿದ್ಯಾರ್ಥಿನಿಯರು
ಹಿಜಾಬ್
ಧರಿಸದೆ
ಪರೀಕ್ಷೆ
ಬರೆಯಲು
ಬಂದಿದ್ದಾರೆ.
ಹಾಸನ ನಗರದ ಗಂಧದಕೋಠಿಯಲ್ಲಿರುವ ಬಾಲಕಿಯರ ವಿಭಜಿತ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಸಮವಸ್ತ್ರ ಧರಸಿ ಪರೀಕ್ಷೆಗೆ ಹಾಜರಾದರು. ಪರೀಕ್ಷಾ ಕೇಂದ್ರದ ಬಳಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ.