Breaking: ಕರ್ನಾಟಕದ ಇಬ್ಬರು ತೆರೆ-ಮರೆ ಸಾಧಕರಿಗೆ ಪದ್ಮಶ್ರೀ ಗೌರವ
ನವದೆಹಲಿ, ಜನವರಿ 25: ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ಪ್ರಕಟಗೊಂಡಿದ್ದು, ಕರ್ನಾಟಕದ ಇಬ್ಬರು ತೆರೆ-ಮರೆ ಸಾಧಕರಿಗೆ ಪ್ರದ್ಮಶ್ರೀ ಪ್ರಶಸ್ತಿ ದೊರೆತಿದೆ.
ಒಟ್ಟು 21 ಮಂದಿ ವಿವಿಧ ಸಾಧಕರಿಗೆ 2020 ನೇ ಸಾಲಿನ ಪದ್ಮಶ್ರೀ ಗೌರವ ದೊರೆತಿದ್ದು, ಇದರಲ್ಲಿ ಇಬ್ಬರು ಕರ್ನಾಟಕದ ಸಾಧಕರಾಗಿದ್ದಾರೆ.
2020ನೇ ಸಾಲಿನ ಪದ್ಮಶ್ರೀ ಪ್ರಶಸ್ತಿ ಪ್ರಕಟ: ಇಲ್ಲಿದೆ ಪಟ್ಟಿ
ಅರಣ್ಯದ ಬಗ್ಗೆ ಅಪಾರ ಜ್ಞಾನ ಹೊಂದಿರುವ ಅರಣ್ಯ ರಕ್ಷಕಿ, ಹಾಲಕ್ಕಿ ಸಮುದಾಯದ 72 ವರ್ಷ ವಯಸ್ಸಿನ ತುಳಸಿ ಗೌಡ ಅವರಿಗೆ ಹಾಗೂ ಅಕ್ಷರ ಸಂತ ಹರೆಕಲ ಹಾಜಬ್ಬ ಅವರಿಗೆ ಪದ್ಮಶ್ರೀ ಗೌರವಕ್ಕೆ ಪ್ರಾಪ್ತರಾಗಿದ್ದಾರೆ.
ಮರಗಳನ್ನು ಮಕ್ಕಳಂತೆ ಸಾಕಿದ 'ಕಾಡಿನ ಜೀವ' ತುಳಸಿ ಗೌಡ ಗೆ 'ಪದ್ಮಶ್ರೀ'
ದಕ್ಷಿಣ ಕನ್ನಡ ಜಿಲ್ಲೆಯ ಹರೆಕಲ ಹಾಜಬ್ಬ ಅವರು ಅಕ್ಷರ ಸಂತ ಎಂದೇ ಖ್ಯಾತರಾಗಿದ್ದು, ಸಾವಿರಾರು ಮಕ್ಕಳಿಗೆ ಉಚಿತವಾಗಿ ಶಿಕ್ಷಣ ನೀಡಿದ್ದಾರೆ. ಸ್ವತಃ ಅನರಕ್ಷಸ್ಥರಾಗಿರುವ ಹಾಜಬ್ಬ ಅವರು ಶಾಲೆ ಪ್ರಾರಂಭಿಸಿ ಉಚಿತವಾಗಿ ಶಿಕ್ಷಣ ನೀಡುತ್ತಿದ್ದಾರೆ. ಉಚಿತ ಶಿಕ್ಷಣ ದಾಸೋಹವನ್ನು ಕಳೆದ 20 ವರ್ಷದಿಂದಲೂ ಇವರು ನಡೆಯುತ್ತಿದ್ದಾರೆ.
ಬೀದಿಯಲ್ಲಿ ಕಿತ್ತಳೆ ಹಣ್ಣು ಮಾರಿ ಶಾಲೆ ಕಟ್ಟಿದವಗೆ ಪದ್ಮಶ್ರೀ ಗೌರವ
ಜಗದೀಶ್ ಜಲ್ ಅಹುಜಾ, ಮೊಹಮ್ಮದ್ ಶರೀಫ್, ಮುನ್ನಾ ಮಾಸ್ಟರ್ ಸೇರಿ 21 ಮಂದಿಗೆ ಪದ್ಮಶ್ರೀ ಗೌರವ ಪ್ರಾಪ್ತಿಯಾಗಿದೆ. ಪೂರ್ಣ ಪಟ್ಟಿ ಇನ್ನಷ್ಟೆ ಬಿಡುಗಡೆ ಆಗಬೇಕಿದೆ.