ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಯಲ್ಲಾಪುರ: ಜಲಪಾತಕ್ಕೆ ತೆರಳಿದವರು ಶವವಾಗಿ ಮರಳಿದರು!
ಯಲ್ಲಾಪುರ, ಅಕ್ಟೋಬರ್ 11: ಪ್ರವಾಸಕ್ಕೆಂದು ಸ್ನೇಹಿತರೊಂದಿಗೆ ಜಲಪಾತಕ್ಕೆ ತೆರಳಿದ್ದ ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಯಲ್ಲಾಪುರ ತಾಲೂಕಿನ ಬಾಸಲ್ ಸಮೀಪದ ಕಾನೂರು ಜಲಪಾತದಲ್ಲಿ ಅಕ್ಟೋಬರ್ 10 ರಂದು ನಡೆದಿದೆ.
ನಾಗರಮಡಿ ಜಲಪಾತದಲ್ಲಿ ಕೊಚ್ಚಿಹೋಗಿದ್ದ 6 ಜನರಲ್ಲಿ ಐವರ ಶವ ಪತ್ತೆ
ಯಲ್ಲಾಪುರದ ಮಾವಿನಮನೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಾನೂರು ಫಾಲ್ಸ್ ಗೆ ಹೋಗಿದ್ದ ಯಲ್ಲಾಪುರದ ಕಾಳಮ್ಮನಗರ ನಿವಾಸಿ ಕಿಗನ್ ವಿನೋದ ಪರ್ನಾಂಡಿಸ್ (21), ಗಣಪತಿಗಲ್ಲಿ ನಿವಾಸಿ ಸಿಲ್ವನ್ ಲಾರೆನ್ಸ್ ಪರ್ನಾಂಡಿಸ್ (17) ಜಲಪಾತದಲ್ಲಿ ಮುಳುಗಿ ಮೃತಪಟ್ಟ ದುರ್ದೈವಿಗಳಾಗಿದ್ದಾರೆ.
ಕಳೆದೆರಡು ದಿನದಿಂದ ಯಲ್ಲಾಪುರ ಪೊಲೀಸರು ಕಾಣೆಯಾಗಿದ್ದ ಈ ಯುವಕರ ಶೋಧ ಕಾರ್ಯದಲ್ಲಿ ನಿರತರಾಗಿದ್ದರು, ಮೃತರ ಶವಗಳ ಮರಣೋತ್ತರ ಪರೀಕ್ಷೆ ತಾಲೂಕು ಆಸ್ಪತ್ರೆಯಲ್ಲಿ ನಡೆದಿದ್ದು, ಮೃತದೇಹಗಳನ್ನು ಕುಟುಂಬಸ್ಥರಿಗೆ ಒಪ್ಪಿಸಲಾಗಿದೆ.
Comments
karwar yellapur tourism death waterfalls ಕಾರವಾರ ಜಿಲ್ಲಾಸುದ್ದಿ ಯಲ್ಲಾಪುರ ಪ್ರವಾಸೋದ್ಯಮ ಜಲಪಾತ ಸಾವು district news
English summary
2 tourists died after drown into water in Kanoor waterfalls in Yellapur taluk, Uttara Kannada district.