ಚುನಾವಣೆ ಹೊಸ್ತಿಲಲ್ಲಿ 106 ತಹಶೀಲ್ದಾರ್ಗಳ ವರ್ಗಾವಣೆ
ಬೆಂಗಳೂರು, ಫೆಬ್ರವರಿ 22: ಚುನಾವಣೆ ಹೊಸ್ತಿಲಲ್ಲಿರುವಾಗ ಬರೋಬ್ಬರಿ 106 ತಹಶೀಲ್ದಾರ್ ಅವರುಗಳನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಲಾಗಿದೆ.
ಹಲವು ತಾಲ್ಲೂಕುಗಳ ತಹಶೀಲ್ದಾರ್ಗಳು ಸೇರಿದಂತೆ, ಇಲಾಖೆಗಳ ತಹಶೀಲ್ದಾರ್ ಗ್ರೇಡ್ ಅಧಿಕಾರಿಗಳನ್ನು ಸಹ ವರ್ಗಾವಣೆ ಮಾಡಲಾಗಿದೆ. ಕಂದಾಯ ಇಲಾಖೆಯ ವತಿಯಿಂದ ವರ್ಗಾವಣೆ ನಡೆದಿದೆ.
ಐಪಿಎಸ್ ಅಧಿಕಾರಿಗಳನ್ನು ಸಹ ವರ್ಗಾವಣೆ ಮಾಡಲಾಗಿದ್ದು, ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸೇರಿದಂತೆ ಒಟ್ಟು ಐದು ಜಿಲ್ಲಾಧಿಕಾರಿಗಳನ್ನು ವಿವಿಧ ಸ್ಥಾನಗಳಿಗೆ ವರ್ಗಾವಣೆ ಮಾಡಲಾಗಿದೆ.
20 ನೇ ತಾರೀಖಿನಂದು 31 ಐಪಿಎಸ್ ಅಧಿಕಾರಿಗಳನ್ನು ಸಹ ವರ್ಗಾವಣೆ ಮಾಡಲಾಗಿತ್ತು, 18 ಅಧಿಕಾರಿಗಳು ಬೆಂಗಳೂರಿಗೆ ವರ್ಗವಾಗಿದ್ದರೆ 14 ಅಧಿಕಾರಿಗಳು ಬೆಂಗಳೂರಿನಿಂದ ಹೊರ ಜಿಲ್ಲೆಗಳಿಗೆ ವರ್ಗವಾಗಿ ಹೋಗಿದ್ದರು.
ಚುನಾವಣೆ ಸಮೀಪ ಇರುವ ಕಾರಣ ಈ ರೀತಿಯ ವರ್ಗಾವಣೆ ಆಗುತ್ತಿದ್ದು, ಮುಂದಿನ ದಿನಗಳಲ್ಲಿ, ಪೊಲೀಸ್ ಅಧಿಕಾರಿಗಳ ವರ್ಗಾವಣೆ ದೊಡ್ಡ ಮಟ್ಟದಲ್ಲಿ ಆಗಲಿದೆ. ಅಬಕಾರಿ ಇಲಾಖೆಯಲ್ಲಿಯೂ ವರ್ಗಾವಣೆ ಅತಿಶೀಘ್ರದಲ್ಲಿಯೇ ಆಗಲಿದೆ.