ಸಾಲಮನ್ನಾ ಬಗ್ಗೆ ಸಿಎಂ ಹೇಳಿಕೆ ಅಚ್ಚರಿ ಮೂಡಿಸಿದೆ ಎಂದ ಯಡಿಯೂರಪ್ಪ
ಗುಲ್ಬರ್ಗ, ಆಗಸ್ಟ್ .10: ಸಾಲಮನ್ನಾ ಬಗ್ಗೆ ಸಿಎಂ ಕುಮಾರಸ್ವಾಮಿ ಹೇಳಿಕೆ ಅಚ್ಚರಿ ಮೂಡಿಸಿದೆ ಎಂದು ಮಾಜಿ ಸಿಎಂ, ವಿರೋಧ ಪಕ್ಷದ ನಾಯಕ ಶ್ರೀ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಚುನಾವಣೆ ಪ್ರಣಾಳಿಕೆಯಲ್ಲಿ ಸಾಲಮನ್ನಾ ಹೇಳಿಕೆ ನೀಡಿದ ಸಿಎಂ ಕುಮಾರಸ್ವಾಮಿ ಅವರು ಈಗ ಗಿಡ ನೆಟ್ಟಿದ್ದೇನೆಯೇ ಎಂದಿರುವುದು ವಿಚಿತ್ರ. ಬಿಜೆಪಿಯ ಕೆಲವು ಶಾಸಕರು ಕಾಂಗ್ರೆಸ್ ಪಕ್ಷ ಸೇರುತ್ತಾರೆ ಎನ್ನುವ ಹೇಳಿಕೆ ಊಹಾಪೋಹ ಎಂದು ಸ್ಪಷ್ಟಪಡಿಸಿದರು.
ರೈತರ ಸಾಲ ಮನ್ನಾ ಯಾರಿಗೆ ಸಿಗುತ್ತೆ, ಯಾರಿಗೆ ಸಿಗಲ್ಲ? ಇಲ್ಲಿದೆ ವಿವರ
ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿವೆ. 10 ಸಾವಿರ ಕೋಟಿ ಬಾಕಿ ಬಿಲ್ ಬಾಕಿ ಇದ್ದು, ಕೆಲಸ ಮಾಡಲು ಗುತ್ತಿಗೆದಾರರು ಮುಂದೆ ಬರುತ್ತಿಲ್ಲ.
13
ಜಿಲ್ಲೆಗಳಲ್ಲಿ
ಬರಗಾಲ
ಆವರಿಸಿದೆ,
ಸಿಎಂ
ಹಾಗೂ
ಕೃಷಿ
ಸಚಿವರು
ಪ್ರವಾಸ
ಮಾಡುತ್ತಿಲ್ಲ.
ವರ್ಗಾವಣೆ
ಒಂದು
ದಂಧೆಯಾಗಿದ್ದು,
ಜನಹಿತ
ಮರೆತು
ತುಘಲಕ್
ದರ್ಬಾರ್
ನಡೆಯುತ್ತಿದೆ.
ಕಾಂಗ್ರೆಸ್,
ಜೆಡಿಎಸ್
ಸ್ಥಾನಮಾನ
ಪಡೆದುಕೊಳ್ಳಲು
ತಲ್ಲೀನರಾಗಿ,
ಅಭಿವೃದ್ಧಿ
ಮರೆತಿದ್ದಾರೆ
ಎಂದು
ಯಡಿಯೂರಪ್ಪ
ಟೀಕಿಸಿದರು.
ಸಹಕಾರಿ ಬ್ಯಾಂಕ್ ಸಾಲ ಮನ್ನಾ: ಷರತ್ತುಗಳು ಅಷ್ಟು ಸಲೀಸಲ್ಲ!
ಕುಮಾರಸ್ವಾಮಿ ಪ್ರಮಾಣವಚನ ವೇಳೆ ಮಾಡಿದ ದುಂದುವೆಚ್ಚ ವಿಚಾರ ಕುರಿತು ಮಾತನಾಡಿದ ಯಡಿಯೂರಪ್ಪ, ಸಿಎ ಆಡಂಬರದ ಖರ್ಚು ಮಾಡಬಾರದಿತ್ತು, ದುಂದುವೆಚ್ಚ ಮಾಡುವುದು ಸರಿಯಲ್ಲ ಎಂದರು.