ತುಳಜಾಪುರ ಅಂಬಾ ಭವಾನಿ ಜಾತ್ರೆಗೆ ವಿಶೇಷ ಬಸ್ ವ್ಯವಸ್ಥೆ
ಕಲಬುರಗಿ, ಸೆ.28: ತುಳಜಾಪುರದಲ್ಲಿ ಜರುಗಲಿರುವ ಶ್ರೀ ಮಾತಾ ಅಂಬಾಭವಾನಿ ಜಾತ್ರೆಗೆ ಆಗಮಿಸಲಿರುವ ಭಕ್ತಾಧಿಗಳ ಅನುಕೂಲಕ್ಕಾಗಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ.
ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಕಲಬುರಗಿ ವಿಭಾಗ-1ರಿಂದ ಸೆಪ್ಟೆಂಬರ್ 28 ರಿಂದ ಅಕ್ಟೋಬರ್ 18ರವರೆಗೆ ತುಳಜಾಪುರದಲ್ಲಿ ಜರುಗಲಿರುವ ಶ್ರೀ ಮಾತಾ ಅಂಬಾಭವಾನಿ ಜಾತ್ರೆಗೆ ಆಗಮಿಸಲಿರುವ ಭಕ್ತಾಧಿಗಳ ಅನುಕೂಲಕ್ಕಾಗಿ ಹೆಚ್ಚುವರಿ ಬಸ್ ಸೌಲಭ್ಯ ಕಲ್ಪಿಸಲಾಗಿದೆ.
ಕಲಬುರಗಿ-ತುಳಜಾಪುರ, ಚಿಂಚೋಳಿ-ತುಳಜಾಪುರ, ಕಾಳಗಿ-ತುಳಜಾಪುರ, ಚಿತ್ತಾಪೂರ-ತುಳಜಾಪುರ, ಸೇಡಂ-ತುಳಜಾಪುರ ಮಾರ್ಗಗಳಲ್ಲಿ ಹೆಚ್ಚುವರಿ ವಿಶೇಷ ವಾಹನಗಳ ವ್ಯವಸ್ಥೆ ಮಾಡಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಂ. ವಾಸು ತಿಳಿಸಿದ್ದಾರೆ.
ಘಟಕಗಳ
ವ್ಯಾಪ್ತಿಯಲ್ಲಿ
ಬರುವ
ಗ್ರಾಮಗಳಿಂದ
54ಜನ
ಪ್ರಯಾಣಿಕರು
ತುಳಜಾಪುರಕ್ಕೆ
ಪ್ರಯಾಣಿಸಿದ್ದಲ್ಲಿ
ಅವರಿಗೆ
ಹೆಚ್ಚಿನ
ಬಸ್
ವ್ಯವಸ್ಥೆ
ಕಲ್ಪಿಸಲಾಗುವುದು.
ಸಾರ್ವಜನಿಕರು/
ಭಕ್ತಾದಿಗಳು
ಹೆಚ್ಚಿನ
ಮಾಹಿತಿಗಾಗಿ
ವಿಭಾಗೀಯ
ಸಾರಿಗೆ
ಅಧಿಕಾರಿ
ಮೊಬೈಲ್
ಸಂ.-77609
92102,
ಕಲಬುರಗಿ
ಘಟಕ-1ರ
ಮೊಬೈಲ್
ಸಂ.-77609
92113,
ಚಿಂಚೋಳಿ
ಮೊಬೈಲ್
ಸಂ.-77609
92117,
ಚಿತ್ತಾಪುರ
ಮೊಬೈಲ್
ಸಂ.-77609
92119,
ಕಾಳಗಿ
ಮೊಬೈಲ್
ಸಂ.-77609
92120,
ಸೇಡಂ
ಮೊಬೈಲ್
ಸಂ.-77609
92466,
ವಿಭಾಗೀಯ
ಕಚೇರಿ
ಮೊಬೈಲ್
ಸಂ.-7760992108
ಗಳನ್ನು
ಸಂಪರ್ಕಿಸಲು
ಕೋರಿದೆ.
ತುಳಜಾ ಭವಾನಿ ಜಾತ್ರೆ: ಮಹಾರಾಷ್ಟ್ರದ ಮರಾಠ್ ವಾಡ ಪ್ರದೇಶದ ಒಸ್ಮಾನಾಬಾದ್ ಜಿಲ್ಲೆಯಲ್ಲಿ ಹಿಂದೂಗಳ ಪವಿತ್ರ ಕ್ಷೇತ್ರ ತುಳಜಾಪುರ. 12ನೇ ಶತಮಾನದಲ್ಲಿ ನಿರ್ಮಾಣಗೊಂಡ ಈ ಭವಾನಿ ದೇಗುಲವು 51 ಶಕ್ತಿಪೀಠಗಳಲ್ಲಿ ಒಂದೆನಿಸಿದೆ ಎಂದು ಸ್ಕಂದ ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಐತಿಹಾಸಿಕವಾಗಿಯೂ ಮಹತ್ವ ಪಡೆದಿರುವ ಈ ದೇಗುಲಕ್ಕೆ ಛತ್ರಪತಿ ಶಿವಾಜಿ ಮಹಾರಾಜರು ಭೇಟಿ ಕೊಡುತ್ತಿದ್ದರು. ಇಲ್ಲಿನ ದೇವಿಯ ಅನುಗ್ರಹದಿಂದಲೇ ಅವರಿಗೆ 'ಭವಾನಿ ಖಡ್ಗ' ಲಭಿಸಿತು ಎಂಬ ಪ್ರತೀತಿ ಇದೆ.