ಖರ್ಗೆ ನಾಡಿನಲ್ಲಿ ಕುರುಬ ಸಮಾವೇಶ: ಇದೇನು ಸಿದ್ದರಾಮಯ್ಯ ಶಕ್ತಿ ಪ್ರದರ್ಶನವೋ?
Recommended Video
ಕಲಬುರಗಿ, ಸೆ 29: ಕರ್ನಾಟಕ ಹಿರಿಯ ಕಾಂಗ್ರೆಸ್ ಮುಖಂಡರ ಅಸಹನೆಯ ಕಟ್ಟೆ ಈ ಮಟ್ಟಿಗೆ ಒಡೆಯುತ್ತದೆ ಎಂದು ಬಹುಷಃ ಕಾಂಗ್ರೆಸ್ ಹೈಕಮಾಂಡ್ ನಿರೀಕ್ಷಿಸಿರಲಿಕ್ಕಿಲ್ಲ.
ಸಿದ್ದರಾಮಯ್ಯ ವಿರುದ್ದ ಹಿರಿಯ ಮತ್ತು ಮೂಲ ಕಾಂಗ್ರೆಸ್ಸಿಗರು ಒಂದಾಗಿದ್ದಾರೆ. ಪಕ್ಷದೊಳಗೆ ಎರಡು ಬಣಗಳಾಗಿರುವುದು ಅತ್ಯಂತ ಸ್ಪಷ್ಟವಾಗಿರುವ ಈ ಸಮಯದಲ್ಲಿ ಕಲಬುರಗಿಯಲ್ಲಿ ಸಮಾವೇಶವೊಂದನ್ನು ಭಾನುವಾರ (ಸೆ 29) ಆಯೋಜಿಸಲಾಗಿದೆ.
ದಿನೇಶ್ ಗುಂಡೂರಾವ್-ಸಿದ್ದರಾಮಯ್ಯ ಬಗ್ಗೆ ಎಂಟಿಬಿ ತೀವ್ರ ವಾಗ್ದಾಳಿ
ಮಲ್ಲಿಕಾರ್ಜುನ ಖರ್ಗೆಯವರ ರಾಜಕೀಯ ಕರ್ಮಭೂಮಿ ಕಲಬುರಗಿಯಲ್ಲಿ ಕುರುಬ ಸಮಾವೇಶ ನಡೆಯಲಿದೆ. ಸುಮಾರು ಇಪ್ಪತ್ತು ಸಾವಿರಕ್ಕೂ ಹೆಚ್ಚು ಜನರು ಇದರಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
ಭಾನುವಾರ ಮಧ್ಯಾಹ್ನ ಕುರುಬ ಸಮುದಾಯದ ಪ್ರತಿಭಾ ಸಮಾವೇಶ ನಡೆಯಲಿದೆ. ಸಿದ್ದರಾಮಯ್ಯ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಕಲಬುರ್ಗಿಯ 10 ಸಾವಿರ ಮಕ್ಕಳಿಗೆ 'ಅನ್ನಪೂರ್ಣ ಬೆಳಗಿನ ಉಪಹಾರ'ಕ್ಕೆ ಚಾಲನೆ
ಖರ್ಗೆಯವರಿಗೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಮಂತ್ರಣ ಹೋಗಿದೆ. ಆದರೆ, ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಾಧ್ಯತೆ ಕಮ್ಮಿ ಎಂದು ಹೇಳಲಾಗುತ್ತಿದೆ.
ತಮ್ಮ ವಿರುದ್ದ ಕತ್ತಿ ಮಸಿಯುತ್ತಿರುವ ಹಿರಿಯ ಕಾಂಗ್ರೆಸ್ ಮುಖಂಡರ ವಿರುದ್ದ, ಶಕ್ತಿ ಪ್ರದರ್ಶನ ಮಾಡಲು ಸಿದ್ದರಾಮಯ್ಯ ಈ ವೇದಿಕೆಯನ್ನು ಬಳಸುವ ಸಾಧ್ಯತೆಯಿಲ್ಲದಿಲ್ಲ.