ಮತ್ತೆ ಮೋದಿ ಹೆಸರಲ್ಲಿ ಮತ ಕೇಳಿದರೆ ಬಾಯಲ್ಲಿ ಬೂಟ್ ಹಾಕ್ತೀವಿ: ಮುತಾಲಿಕ್
ಕಲಬುರಗಿ, ಜುಲೈ 4: ಪ್ರತಿ ಬಾರಿಯೂ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿನಲ್ಲಿ ಚುನಾವಣೆ ಪ್ರಚಾರ ನಡೆಸಿ ಗೆಲ್ಲುವ ರಾಜ್ಯ ಬಿಜೆಪಿ ಅಭ್ಯರ್ಥಿಗಳ ವಿರುದ್ಧ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ರಾಮ ಮಂದಿರ ಕುರಿತ ಮೋದಿ ಹೇಳಿಕೆಗೆ ಶ್ರೀರಾಮ ಸೇನೆ ವಿರೋಧ
ವಿರಾಟ್ ಹಿಂದೂ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿ ಸಂಸದರ ವಿರುದ್ಧ ನಾಲಿಗೆ ಹರಿಬಿಟ್ಟಿರುವ ವಿಡಿಯೋ ಈಗ ವೈರಲ್ ಆಗಿದೆ.
ರಾಜಕೀಯ ದೂರ ಸರಿದ ಪ್ರಮೋದ್ ಮುತಾಲಿಕ್: ಕಾರಣ ಏನು?
ಇನ್ನಾದರೂ ಐದು ವರ್ಷ ಕೆಲಸ ಮಾಡಿ. ಮುಂದಿನ ಬಾರಿಯೂ ಮೋದಿ ಅವರ ಹೆಸರು ಹೇಳಿದರೆ ಬಾಯಲ್ಲಿ ಬೂಟ್ ಹಾಕುತ್ತೇವೆ ಎಂದು ಮುತಾಲಿಕ್ ಹೇಳಿದ್ದಾರೆ.
'ಐದಾರು ಗೆಲ್ಲುತ್ತೀರಿ, ಇಪ್ಪತ್ತೈದು ವರ್ಷ ಒಂದು ಜಿಲ್ಲೆಯನ್ನಾಳುತ್ತೀರಿ. ನಾಚಿಕೆ ಬರುವುದಿಲ್ಲ ನಿಮಗೆ? ನಿರ್ಲಜ್ಜರು ನೀವು. ಈಗ ಹೇಳಬೇಕು ಅವರಿಗೆ ಮೋದಿ ಅವರ ಮುಖ ನೋಡಿ, ಮೋದಿ ಅವರ ಗಂಡಸ್ತನ ನೋಡಿ, ಮೋದಿ ಅವರ ಹಿಂದುತ್ವದ ವಿಚಾರ ನೋಡಿ ನಾವು ಅವರಿಗೆ ವೋಟ್ ಹಾಕಿದ್ದೇವೆ. ಈ ಐದು ವರ್ಷ ಬಾಯಿಮುಚ್ಚಿಕೊಂಡು ಕೆಲಸ ಮಾಡಿ. ಮುಂದಿನ ಸಲ ಏನಾದರೂ ಮೋದಿ ಎಂದರೆ ಬಾಯಲ್ಲಿ ಬೂಟ್ ಹಾಕ್ತೇವೆ ಎಂಬ ಎಚ್ಚರಿಕೆಯನ್ನು ಅವರಿಗೆ ಕೊಡಬೇಕಿದೆ' ಎಂದು ಹೇಳಿದ್ದಾರೆ.
ಸತ್ಯ ನಿಮ್ಮ ಪರವಾಗಿದ್ರೆ, ನ್ಯಾಯಾಲಯಕ್ಕೆ ಹೋಗಿ:ಬಿಜೆಪಿಗೆ ಪ್ರಮೋದ್ ಮುತಾಲಿಕ್ ಸವಾಲು
ಮುತಾಲಿಕ್ ಅವರು ಇತ್ತೀಚೆಗಷ್ಟೇ ತಾವು ರಾಜಕೀಯದಿಂದ ದೂರ ಸರಿದಿರುವುದಾಗಿ ತಿಳಿಸಿದ್ದರು. ಇತ್ತೀಚಿನ ದಿನಗಳಲ್ಲಿ ರಾಜಕೀಯವಾಗಿ ನೆಲೆ ಕಂಡುಕೊಳ್ಳುವುದು ಕಷ್ಟ. ಪಕ್ಷೇತರರಾಗಿ ಗೆದ್ದರೂ ಯಾರಿಗೂ ಸಹಾಯ ಮಾಡಲು ಸಾಧ್ಯವಾಗುವುದಿಲ್ಲ ಎಂದಿದ್ದರು.