ಕಲಬುರಗಿ : ತರಕಾರಿ ಬೆಳೆ ಮಧ್ಯೆ ಗಾಂಜಾ
ಕಲಬುರಗಿ, ನವೆಂಬರ್ 27 : ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಯಾಗಾಪೂರ ಗ್ರಾಮದ ಹೊರವಲಯದಲ್ಲಿನ ಜಮೀನಿನಲ್ಲಿ ಹಚ್ಚ ಹಸಿರು ಮೈದಳಿಸಿತ್ತು. ಅದನ್ನು ನೋಡಿದ ಜನರು ಯಾರಪ್ಪ ಈ ರೈತರು ಎಷ್ಟೊಂದು ಚೆನ್ನಾಗಿ ಬೆಳೆ ಬೆಳದಿದ್ದಾರೆ ಎಂದು ಮಾತನಾಡಿಕೊಳ್ಳುತ್ತಿದ್ದರು. ಆದರೆ ಆ ಜಮೀನಿನ ಅಸಲಿಯತ್ತನ್ನು ಇಂದು(ನವೆಂಬರ್ 27) ಚಿತ್ತಾಪುರ ಠಾಣೆಯ ಸಿಪಿಐ ಶಂಕರಗೌಡ ಪಾಟೀಲರು ಬಯಲು ಮಾಡಿದ್ದಾರೆ.
ಕಲಬುರಗಿಯಲ್ಲಿ ನ.24ರಿಂದ ಹೆಲ್ಮೆಟ್ ಕಡ್ಡಾಯ
ಹೌದು
ಕೃಷಿ
ಜಮೀನಿನಲ್ಲಿ
ತರಕಾರಿ
ಜತೆ
ಗಾಂಜಾ
ಬೆಳೆದ
ರೈತರ
ಜಮೀನಿನ
ಮೇಲೆ
ದಾಳಿ
ನಡೆಸಿದ
ಚಿತ್ತಾಪುರ
ಠಾಣೆಯ
ಸಿಪಿಐ
ಶಂಕರಗೌಡ
ಹಾಗೂ
ಅವರ
ಸಿಬ್ಬಂದಿ
74
ಕೆ.ಜಿ
ಹಸಿ
ಗಾಂಜಾ
ಗಿಡಗಳನ್ನು
ಜಪ್ತಿ
ಮಾಡಿಕೊಂಡಿದ್ದಾರೆ.
ಜೊತೆಗೆ
ಗಾಂಜಾ
ಬೆಳದಿದ್ದ
ಇಬ್ಬರು
ರೈತರನ್ನು
ಬಂಧಿಸಿದ್ದಾರೆ.
ಮೋನಪ್ಪ ಬೇವಿನಹಳ್ಳಿ, ನೀಲಕಂಠ ಬೇವಿನಹಳ್ಳಿ, ಬಂಧಿತ ಆರೋಪಿಗಳು. ಗಾಂಜಾ ಬೆಳೆದಿದ್ದ ಇನ್ನೂ ಇಬ್ಬರು ಪರಾರಿಯಾಗಿದ್ದು, ಅವರ ಬಂಧನಕ್ಕೂ ಬಲೆ ಬೀಸಲಾಗಿದೆ. ಈ ಬಗ್ಗೆ ವಾಡಿ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರು: ವಿದ್ಯಾರ್ಥಿಗಳಿಗೆ ಗಾಂಜಾ ಪೂರೈಸುತ್ತಿದ್ದ ವ್ಯಕ್ತಿಯ ಬಂಧನ
ಗಾಂಜಾ ಬೆಳೆಯುವದು ಮತ್ತು ಮಾರಾಟ ಮಾಡುವುದು ಅಕ್ರಮ. ಆದರೂ ಕೆಲವರು ಕೃಷಿ ಜಮೀನಿನಲ್ಲಿ, ಹೊಲದ ಸುತ್ತ ತರಕಾರಿ ಬೆಳೆದು, ಮಧ್ಯದಲ್ಲಿ ಗಾಂಜಾ ಬೆಳೆ ಬೆಳೆದು ಮಾರಾಟ ಮಾಡುವ ಕೆಲಸ ಮಾಡುತ್ತಿದ್ದಾರೆ.