ಕುದಿಯುತ್ತಿರುವ ಕಲಬುರಗಿಯಲ್ಲಿ ಕಾಂಗ್ರೆಸ್ಗೆ ಬಿಸಿ ಮುಟ್ಟಿಸಿದ ಮೋದಿ
ಕಲಬುರಗಿ, ಮೇ 03: ನೆಹರು ಅವರು ಕರ್ನಾಟಕದ ವೀರಪುತ್ರ ಫೀಲ್ಡ್ ಫಾರ್ಷಲ್ ಕಾರಿಯಪ್ಪ ಅವರನ್ನು ಗೂಂಡಾ ಎಂದು ಕರೆದಿದ್ದರು, ಅಂತಹ ಪಕ್ಷದವರಿಗೆ ನೀವು ಓಟು ಹಾಕುತ್ತೀರಾ? ಎಂದು ಮೋದಿ ಪ್ರಶ್ನಿಸಿದರು.
ಕಲಬುರಗಿಯಲ್ಲಿ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಮೋದಿ ಅವರು, ನೆಹರು ಸೇರಿದಂತೆ ಕಾಂಗ್ರೆಸ್ ಮೇಲೆ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಈ ವರೆಗೂ ಸೈನಿಕರಿಗೆ ಗೌರವ ಸಲ್ಲಿಸಿಯೇ ಇಲ್ಲ ಎಂದರು.
ಕಲ್ಬುರ್ಗಿಗೆ ಸರ್ದಾರ್ ವಲ್ಲಭಭಾಯಿ ಪಟೇಲ್ರಿಗೆ ವಿಶೇಷ ಸಂಬಂಧವಿದೆ. ನಿಜಾಮರು ಸ್ವತಂತ್ರ ಭಾರತದಲ್ಲಿ ವಿಲೀನಗೊಲ್ಲಳು ನಿರಾಕರಿಸಿದ್ದರು, ಆದರೆ ಪಟೇಲರು ಅವರನ್ನು ಮಣಿಸಿ ಭಾರತದಲ್ಲಿ ಸೇರಿಸಿಕೊಂಡರು.ಅಂಥಾ ಪಟೇಲರನ್ನು ಕೂಡಾ ಕಾಂಗ್ರೆಸ್ ನೆನೆಸಿಕೊಳ್ಳುವ ಕೆಲಸ ಮಾಡಲಿಲ್ಲ ಅಂತಹವರಿಗೆ ಮತ ಹಾಕುತ್ತೀರಾ ಎಂದರು.ಕಲಬುರಗಿಯಲ್ಲಿ ಈಗ 43.04 ಗರಿಷ್ಠ ತಾಪಮಾನ. ಈ ಅತಿಯಾದ ಬಿಸಿಲಿನ ಝಳದ ನಡುವೆಯೂ ಮೋದಿ ಅವರ ಭಾಷಣ ಕೇಳಲು ಸಾಕಷ್ಟು ಸಂಖ್ಯೆಯಲ್ಲಿ ಕಾರ್ಯಕರ್ತರು ಸಮಾವೇಶಕ್ಕೆ ಆಗಮಿಸಿದ್ದರು. ಟವೆಲ್ಗಳಲ್ಲಿ, ಕರವಸ್ತ್ರಗಳಲ್ಲಿ ಬೆವರು ಒರೆಸಿಕೊಳ್ಳುತ್ತಲೇ ಮೋದಿ ಅವರ ಮಾತುಗಳನ್ನು ಆಲಿಸಿದರು.
ಬಿಸಿಲಿನಲ್ಲಿ ನಿಂತಿದ್ದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಮೋದಿ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯಬೇಕೆಂಬ ಧೃಡ ನಿರ್ಧಾರದಿಂದ ಬಿಸಿಲಿನ ಝಳವನ್ನು ಲೆಕ್ಕಿಸದೆ ನೀವಿಲ್ಲಿ ಬಂದಿದ್ದೀರಾ ನಿಮಗೆಲ್ಲಾ ನನ್ನ ಧನ್ಯವಾದಗಳು ಎಂದರು.