ವಿವಾಹ ಸಮಾರಂಭಕ್ಕೆ ಸಾಕ್ಷಿಯಾದ ಕಲಬುರಗಿ ಮಹಿಳಾ ವಸತಿ ನಿಲಯ
ಕಲಬುರಗಿ, ಆಗಸ್ಟ್ 30: ಕಲಬುರಗಿ ನಗರದ ಆಳಂದ ರಸ್ತೆಯಲ್ಲಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ರಾಜ್ಯ ಮಹಿಳಾ ನಿಲಯ ವಿವಾಹ ಸಮಾರಂಭಕ್ಕೆ ಸಾಕ್ಷಿಯಾಯಿತು. ನಿಲಯದ ನಿವಾಸಿಗಳಾದ ಅಂಬಿಕಾ ಹಾಗೂ ಶಾರದಾಬಾಯಿ ಅವರ ವಿವಾಹವು ಸರಳವಾಗಿ ನಡೆಯಿತು.
ಮಹಿಳಾ ನಿಲಯದ ನಿವಾಸಿಯಾದ ಅಂಬಿಕಾ ವಿವಾಹವು ಕಲಬುರಗಿ ಬಿದ್ದಾಪುರ ಕಾಲೋನಿಯ ಕಾವೇರಿ ಮತ್ತು ಕೇಶವರಾವ ಕುಲಕರ್ಣಿ ಅವರ ಪುತ್ರ ವೆಂಕಟೇಶ ಅವರೊಂದಿಗೆ ನಡೆಯಿತು.
ಹೆತ್ತವರಂತೆ ಮದುವೆ ಮಾಡಿಕೊಟ್ಟ ಕಲಬುರಗಿ ಮಹಿಳಾ ನಿಲಯ
ಶಾರದಾಬಾಯಿ ಎಂಬ ಮಹಿಳಾ ನಿಲಯದ ನಿವಾಸಿ ವಿವಾಹ ಅಫಜಲಪುರ ತಾಲೂಕಿನ ಬಾದನಳ್ಳಿಯ ಮಹಾನಂದಾ ಮತ್ತು ಭೀಮಾಶಂಕರ ಜಮಾದಾರ ಇವರ ಜೇಷ್ಠ ಪತ್ರ ಮಲಕಣ್ಣಾ ಜೊತೆ ನಡೆಯಿತು.
ಜ್ಯೋತಿಯ ಬಾಳು ಬೆಳಗಿದ ಗಿರೀಶ್ ಕುಮಾರ್
ಕೋವಿಡ್-19 ಪರಿಸ್ಥಿತಿ ಹಿನ್ನೆಲೆಯಲ್ಲಿ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಮದುವೆ ನೋಂದಣಿ ಮಾಡುವ ಮೂಲಕ ಸರಳವಾದಿ ಮದುವೆ ಕಾರ್ಯಕ್ರಮ ನೆರವೇರಿಸಲಾಯಿತು.
ವಿವಾಹ ವಾರ್ಷಿಕೋತ್ಸವ ದಿನದಂದೇ ಪೊಲೀಸ್ ಪೇದೆ ಸಾವು
ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೆಶಕ ಜಿ.ಎಸ್. ಗುಣಾರಿ, ರಾಜ್ಯ ಮಹಿಳಾ ನಿಲಯದ ಅಧೀಕ್ಷಕಿ ಡಾ. ವಿಜಯಲಕ್ಷ್ಮೀ ಹೇರೂರು, ವಿವಾಹ ನೋಂದಣಾಧಿಕಾರಿ ಪರಸಪ್ಪ ಮುಂತಾದವರು ಉಪಸ್ಥಿತರಿದ್ದರು.