ಕಲಬುರಗಿ ಪಾಲಿಕೆ ಚುನಾವಣೆ: ವಿಜಯೇಂದ್ರ, ಕುಮಾರಸ್ವಾಮಿ ಮತಬೇಟೆ
ಕಲಬುರಗಿ, ಆಗಸ್ಟ್ 30: ರಾಜ್ಯದ ಕಲಬುರಗಿ, ಬೆಳಗಾವಿ ಹಾಗೂ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಗಳಿಗೆ ಚುನಾವಣೆ ಘೋಷಣೆಯಾಗಿದ್ದು, ಸೆ. 3ರಂದು ಮತದಾನ ನಡೆಯಲಿದೆ.
ಮೂರು ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ರಾಜಕೀಯ ಪಕ್ಷಗಳ ಪ್ರಚಾರದ ಭರಾಟೆ ಜೋರಾಗಿ ನಡೆಯುತ್ತಿದೆ. ಇಂದು (ಸೋಮವಾರ) ಕಲಬುರಗಿಗೆ ಬಿಜೆಪಿ ಪರವಾಗಿ ಬಿ.ವೈ. ವಿಜಯೇಂದ್ರ ಹಾಗೂ ಜೆಡಿಎಸ್ ಪರವಾಗಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಪ್ರಚಾರಕ್ಕೆ ತೆರಳಿದ್ದಾರೆ.
ರಾಜ್ಯದ ಸರ್ವತೋಮುಖ ಅಭಿವೃದ್ಧಿಗಾಗಿ ಬಿಜೆಪಿ ಪಕ್ಷವನ್ನು ಬೆಂಬಲಿಸಿ, ಆಶೀರ್ವಾದ ಮಾಡಬೇಕೆಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
ಶನಿವಾರದಂದು ಕಲಬುರಗಿ ಮಹಾನಗರ ಪಾಲಿಕೆ ಚುನಾವಣಾ ಅಂಗವಾಗಿ ಕಲಬುರಗಿ ಉತ್ತರ ಮಂಡಲದ ವಾರ್ಡ್ ನಂ.8 ಅಭ್ಯರ್ಥಿ ಸಚಿನ್ ಕಡಗಂಚಿ, ವಾರ್ಡ್ ನಂ.10 ಅಭ್ಯರ್ಥಿ ಜನಾಬಾಯಿ ಗಣಪತ ರಾವ್, ವಾರ್ಡ್ ನಂ. 11 ಅಭ್ಯರ್ಥಿ ಪ್ರಭುಲಿಂಗ ಹಾದಿಮನಿ ಪರವಾಗಿ ರೋಡ್ ಶೋ ಮೂಲಕ ಮತಯಾಚನೆ ಮಾಡಿದರು.
ಬಹಿರಂಗ ಸಭೆಯಲ್ಲಿ ಮಾತನಾಡಿದ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ, "ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರಾಜ್ಯದ ಅಭಿವೃದ್ಧಿ ಮಾಗ೯ದರ್ಶನದಲ್ಲಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ರಾಜ್ಯ ಸರಕಾರ ಅನೇಕ ಜನಪರ ಯೋಜನೆಗಳನ್ನು ಜನರಿಗೆ ತಲುಪಿಸುತ್ತಿದೆ," ಎಂದು ತಿಳಿಸಿದರು.
"ಸೆಪ್ಟೆಂಬರ್ 3ನೇ ತಾರೀಖಿನ ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳಿಗೆ ಮತ ಹಾಕುವ ಮೂಲಕ ಬಿಜೆಪಿ ಪಕ್ಷಕ್ಕೆ ಬೆಂಬಲಿಸಬೇಕೆಂದು," ಮನವಿ ಮಾಡಿದರು.
ಈ ಸಂದರ್ಭದಲ್ಲಿ ಗ್ರಾಮೀಣ ಶಾಸಕರಾದ ಬಸವರಾಜ ಮತ್ತಿಮೂಡ, ಕ್ರೆಡೆಲ್ ಅಧ್ಯಕ್ಷ ಚಂದು ಪಾಟೀಲ್, ದಿವ್ಯಾ ಹಾಗರಗಿ, ಮಲ್ಲಿಕಾರ್ಜುನ ಓಕಳಿ ಸೇರಿದಂತೆ ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪ್ರಚಾರಕ್ಕೆ
ಆಗಮಿಸಿದ
ಎಚ್.ಡಿ.ಕುಮಾರಸ್ವಾಮಿ
ಸೆಪ್ಟೆಂಬರ್
3ರಂದು
ನಡೆಯಲಿರುವ
ಕಲಬುರಗಿ
ಮಹಾನಗರ
ಪಾಲಿಕೆ
ಚುನಾವಣೆಯ
ಕಾವು
ದಿನದಿಂದ
ದಿನಕ್ಕೆ
ರಂಗೇರುತ್ತಿದ್ದು,
ಜೆಡಿಎಸ್
ಅಭ್ಯರ್ಥಿಗಳ
ಪರ
ಪ್ರಚಾರಕ್ಕಾಗಿ
ಮಾಜಿ
ಮುಖ್ಯಮಂತ್ರಿ
ಎಚ್.ಡಿ.
ಕುಮಾರಸ್ವಾಮಿ
ಕಲಬುರಗಿಗೆ
ಆಗಮಿಸಿದರು.
ಕಲಬುರಗಿ ವಿಮಾನ ನಿಲ್ದಾಣದಲ್ಲಿ ಜೆಡಿಎಸ್ ಪದಾಧಿಕಾರಿಗಳು ಕುಮಾರಸ್ವಾಮಿಯವರಿಗೆ ಆತ್ಮೀಯವಾಗಿ ಹೂಗುಚ್ಛ ನೀಡಿ ಸ್ವಾಗತಿಸಿದರು.
ಕಲಬುರಗಿ ಪಾಲಿಕೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ 47 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ ಸ್ಪರ್ಧಿಸಿದ್ದು, ರಾಜಾಪುರ ಕಾಲೋನಿ, ಸಂಗಮೇಶ್ವರ ಕಾಲೋನಿ ಸೇರಿದಂತೆ ಹಲವು ವಾರ್ಡ್ಗಳಲ್ಲಿ ಎಚ್.ಡಿ. ಕುಮಾರಸ್ವಾಮಿ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡಲಿದ್ದಾರೆ.
ಕಲಬುರಗಿ ಜೆಡಿಎಸ್ ಜಿಲ್ಲಾಧ್ಯಕ್ಷ ಕೇದಾರಲಿಂಗಯ್ಯ ಹಿರೇಮಠ, ಜೆಡಿಎಸ್ ಅಲ್ಪಸಂಖ್ಯಾತರ ರಾಜ್ಯಾಧ್ಯಕ್ಷ ನಾಸಿರ್ ಹುಸೇನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾಮರಾವ್ ಸೂರನ್, ಜೆಡಿಎಸ್ ಗುಲ್ಬರ್ಗ ಕಲಬುರಗಿ ತಿಮ್ಮಯ್ಯ ಪುರ್ಲೆ ಸೇರಿ ಜೆಡಿಎಸ್ನ ಅನೇಕ ಮುಖಂಡರು ಕಾರ್ಯಕರ್ತರಿಂದ ಅದ್ಧೂರಿಯಾಗಿ ಸ್ವಾಗತಿಸಲಾಯಿತು.