ಪೈಲಟ್ ವಾಹನ ಬಳಕೆ, ಖರ್ಗೆ ವಿರುದ್ಧ ಅಯೋಗಕ್ಕೆ ದೂರಿತ್ತ ಬಿಜೆಪಿ
ಚಿಂಚೋಳಿ, ಮೇ 16: ನೀತಿ ಸಂಹಿತೆ ಜಾರಿಯಲ್ಲಿದ್ದರೂ ಕೂಡಾ ಪ್ರಚಾರಕ್ಕೆ ಕಾಂಗ್ರೆಸ್ ನಾಯಕರು ಪೊಲೀಸ್ ಪೈಲೆಟ್ ವಾಹನ ಬಳಸುತ್ತಿದ್ದಾರೆ ಅಲ್ಲದೆ ಈ ವಾಹನಗಳಲ್ಲಿ ಹಣ ಸಾಗಾಟ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಚಿಂಚೋಳಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ ಅವಿನಾಶ್ ಜಾಧವ್ ಹಾಗೂ ಶಾಸಕ ಪಿ.ರಾಜೀವ್ ಚುನಾವಣಾಧಿಕಾರಿಗಳಿಗೆ ಈ ಕುರಿತಂತೆ ಗುರುವಾರ(ಮೇ 16)ದಂದು ದೂರು ಸಲ್ಲಿಸಿದ್ದಾರೆ.ಮೇ 19ರಂದು ಈ ಕ್ಷೇತ್ರದಲ್ಲಿ ಮತದಾನ ನಡೆಯಲಿದ್ದು, ಮೇ 23ರಂದು ಫಲಿತಾಂಶ ಹೊರ ಬರಲಿದೆ.
ಯುವಕರಿಗೆ ಆದ್ಯತೆ ನೀಡಿದ ಯಡಿಯೂರಪ್ಪ ಶ್ರೇಷ್ಠ ನಾಯಕ: ಬಾಬು ಮೋಹನ್
ಕಾಂಗ್ರೆಸ್
ನಾಯಕರು
ಮಲ್ಲಿಕಾರ್ಜುನ
ಖರ್ಗೆ
ಮತ್ತು
ಸಚಿವ
ಪ್ರಿಯಾಂಕ
ಖರ್ಗೆ
ವಿರುದ್ದ
ಚುನಾವಣಾಧಿಕಾರಿಗಳಿಗೆ
ದೂರು
ನೀಡಿದ
ಶಾಸಕ
ಪಿ
ರಾಜೀವ್
ಮಾತನಾಡಿ,
ಚುನಾವಣಾ
ನೀತಿ
ಸಂಹಿತೆ
ಜಾರಿಯಲ್ಲಿದೆ.
ಚಿಂಚೋಳಿ ಉಪಚುನಾವಣೆಯಲ್ಲಿ ಸಮಾಜ ಕಲ್ಯಾಣ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ ಖರ್ಗೆಯವರು ಹಾಗೂ ಮಲ್ಲಿಕಾರ್ಜುನ ಖರ್ಗೆರವರು ಪೊಲೀಸ್ ಪೈಲೆಟ್ ಬಳಸಿಕೊಂಡಿದ್ದಾರೆ ಎಂದರು.
ಅಲ್ಲದೆ, ಸದರಿ ಪೈಲೆಟ್ಗಳು ಕಾಂಗ್ರೆಸ್ ಗೆ ಮತ ನೀಡುವಂತೆ ಪ್ರಚಾರ ಮಾಡುತ್ತಿರುವುದು ಕಂಡುಬಂದಿದೆ. ಇವರ ಮೇಲೆ ಕಾನೂನಿನ ಪ್ರಕಾರ ಸೂಕ್ತ ಕ್ರಮವಹಿಸಿ ನೀತಿಸಂಹಿತೆ ಉಲ್ಲಂಘನೆಯಾಗದಂತೆ ಮತ್ತು ಚುನಾವಣೆ ಪಾರದರ್ಶಕವಾಗಿ ನಡೆಯುವಂತೆ ನೋಡಿಕೊಳ್ಳಲು ಚುನಾವಣಾಧಿಕಾರಿಗಳಿಗೆ ಮನವಿ ಮಾಡಿದ್ದೇವೆ.
ಹಾಗೂ ಪೈಲೆಟ್ ಕರ್ತವ್ಯಕ್ಕೆ ನಿಯೋಜಿಸಿದ ಮತ್ತು ಭಾಗವಹಿಸಿದ ಅಧಿಕಾರಿಗಳ ಮೇಲೆ ಕೂಡಲೇ ಕ್ರಮ ಕೈಗೊಳ್ಳಲು ಕೇಳಿಕೊಂಡಿದ್ದೇವೆ ಎಂದು ಹೇಳಿದರು. ಈ ಸಂಧರ್ಭದಲ್ಲಿ ಬಿಜೆಪಿ ಅಭ್ಯರ್ಥಿ ಡಾ ಅವಿನಾಶ್ ಜಾಧವ್, ಮಾಜಿ ಶಾಸಕ ವಾಲ್ಮೀಕಿ ನಾಯಕರು ಸಾಧ್ ನೀಡಿದರು.