ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸತ್ತರೂ ಬಿಜೆಪಿ ಸೇರಲ್ಲ ಅಂದಿದ್ರು ಯಡಿಯೂರಪ್ಪ : ಬಿ.ಆರ್.ಪಾಟೀಲ್

By Manjunatha
|
Google Oneindia Kannada News

ಕಲಬುರಗಿ, ಡಿಸೆಂಬರ್ 05 : 'ಬಿ.ಆರ್.ಪಾಟೀಲ್ ಓರ್ವ ನಂಬಿಕೆ ದ್ರೋಹಿ, ಮೋಸಗಾರ, ಆತ ನನ್ನ ಹೆಸರು ಬಳಸಿ ಚುನಾವಣೆ ಗೆದ್ದಿದಾರೆ' ಎಂದು ಬಿ.ಎಸ್.ಯಡಿಯೂರಪ್ಪ ಅವರು ಕಲಬುರಗಿಯಲ್ಲಿ ನಡೆದ ಪರಿವರ್ತನಾ ಯಾತ್ರೆ ವೇಳೆ ಆಡಿದ್ದ ಮಾತಿಗೆ ಶಾಸಕ ಬಿ.ಆರ್.ಪಾಟೀಲ್ ಎದುರುತ್ತರ ನೀಡಿದ್ದಾರೆ.

ಕಲಬುರಗಿ : ಬಿಆರ್ ಪಾಟೀಲ್, ಯಡಿಯೂರಪ್ಪ ಏಟು, ಎದಿರೇಟು!ಕಲಬುರಗಿ : ಬಿಆರ್ ಪಾಟೀಲ್, ಯಡಿಯೂರಪ್ಪ ಏಟು, ಎದಿರೇಟು!

ಬಿ.ಎಸ್.ಯಡಿಯೂರಪ್ಪ ಅವರ ಮೇಲೆ ವಾಗ್ದಾಳಿ ನಡೆಸಿದ ಆಳಂದ ಶಾಸಕ ಬಿ.ಆರ್.ಪಾಟೀಲ್ 'ಸ್ವಂತ ವರ್ಚಸ್ಸಿನ ಮೇಲೆ ಗೆದ್ದಿರುವವನು ನಾನು, ಕಳೆದ ಚುನಾವಣೆಯಲ್ಲಿ ಕೆಜೆಪಿಯಿಂದ ಶಿವಮೊಗ್ಗದಲ್ಲಿ ಎಷ್ಟು ಜನ ಗೆದ್ದಿದ್ದಾರೆ?' ಎಂದು ಯಡಿಯೂರಪ್ಪ ಅವರಿಗೆ ಬಿ.ಆರ್.ಪಾಟೀಲ್ ಪ್ರಶ್ನೆ ಮಾಡಿದ್ದಾರೆ.

Aland MLA BR Patil lambasts BS Yeddyurappa

ಯಡಿಯೂರಪ್ಪ ಅವರನ್ನು ಸುಳ್ಳುಗಾರ ಎಂದು ಕರೆದ ಅವರು 'ಉಸಿರಿರೋವರೆಗೂ ಬಿಜೆಪಿ ಹೋಗಲ್ಲ, ರಕ್ತದಲ್ಲಿ ಬರೆದು ಕೊಡುತ್ತೇನೆ ಅಂತಾ ಯಡಿಯೂರಪ್ಪ ಹೇಳಿದ್ದರು ಆದರೆ ರಾತೋರಾತ್ರಿ ಬಿಜೆಪಿಗೆ ಪಲಾಯನ ಮಾಡಿದ್ರು, ಇವಾಗ ಹೇಳಿ ನಿಮ್ಮಲ್ಲಿ ಯಾರ ರಕ್ತ ಹರಿಯುತ್ತಿದೆ?' ಎಂದು ವಾಗ್ಬಾಣ ಬಿಟ್ಟರು.

ಸಿದ್ದರಾಮಯ್ಯ ಅವರ ಬಾಲಂಗೋಚಿ ಎಂದು ಕರೆದಿದ್ದಕ್ಕೆ ಉತ್ತರಿಸಿದ ಪಾಟೀಲ್ 'ಸಿದ್ದರಾಮಯ್ಯ ನನ್ನ ಆತ್ಮೀಯ ಗೆಳೆಯರು, ನಾನು ಸಿಎಂ ಸೇರಿದಂತೆ ಯಾರ ಬಾಲಂಗೋಚಿಯೂ ಅಲ್ಲ' ಎಂದರು

ಯಡಿಯೂರಪ್ಪ ಅವರನ್ನು ಮೋಸಗಾರ ಎಂದು ಕರೆದ ಬಿ.ಆರ್.ಪಾಟೀಲ್ 'ಬಿಎಸ್‌ವೈ ಅವರನ್ನು ನಂಬಿ ಹಲವರು ಕೆಜೆಪಿ ಸೇರಿದ್ದರು ,ಆದರೆ ಅವರಿಗೆಲ್ಲ ಕೈಕೊಟ್ಟು ಯಡಿಯೂರಪ್ಪ ಮಾತ್ರ ಬಿಜೆಪಿ ಸೇರಿದ್ರು, ಇವಾಗ ಹೇಳಿ ಯಾರು ಮೋಸಗಾರ?' ಎಂದು ಅವರು ಪ್ರಶ್ನೆ ಮಾಡಿದರು.

English summary
Aland MLA BR Patil has lambasted BS Yeddyurappa in Kalaburagi for his comments on him. BSY had blamed Patil saying he was unfaithful, cheat and won using his name. In turn, BR Patil has criticized Yeddyurappa for letting his followers down by quitting KJP. BR Patil had won from Aland from KJP ticket.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X