ದೇಶದ ಗಮನ ಸೆಳೆದಿರುವ ರಾಜಸ್ಥಾನದ 10 ಕ್ಷೇತ್ರಗಳ ಕದನ
ಜೈಪುರ, ನವೆಂಬರ್ 24: ರಾಜಸ್ಥಾನದಲ್ಲಿ ಚುನಾವಣಾ ಪ್ರಚಾರದ ರಂಗು ಪ್ರತಿದಿನ ಹೆಚ್ಚಾಗುತ್ತಿದೆ. ರಾಜ್ಯದ 10 ವಿಧಾನಸಭಾ ಕ್ಷೇತ್ರಗಳ ಮೇಲೆ ಸ್ಥಳೀಯರಷ್ಟೇ ಅಲ್ಲದೆ, ದೇಶದ ವಿವಿಧ ರಾಜ್ಯಗಳ ಚುನಾವಣಾ ತಜ್ಞರ ಗಮನ ಸೆಳೆದಿದೆ.
ಹಿರಿಯ ನಾಯಕರನ್ನು ಕಣಕ್ಕಿಳಿಸದೆ, ಯುವ ಅಭ್ಯರ್ಥಿಗಳನ್ನು ಸ್ಪರ್ಧಿಸಲು ಬಿಟ್ಟಿರುವುದು ರಾಜಸ್ಥಾನದ 10 ಕ್ಷೇತ್ರಗಳು ಕುತೂಹಲ ಕೆರಳಿಸಲು ಮುಖ್ಯ ಕಾರಣವಾಗಿದೆ. ರಾಜಸ್ಥಾನ ಈ ಹತ್ತು ಕ್ಷೇತ್ರಗಳ ಪೈಕಿ 6 ಕ್ಷೇತ್ರಗಳ ಫಲಿತಾಂಶಗಳು ರಾಜ್ಯವನ್ನು ಯಾರು ಮುನ್ನಡೆಸಲಿದ್ದಾರೆ ಎಂಬುದನು ನಿರ್ಧರಿಸಲಿದೆ.
ಮುಖ್ಯವಾಗಿ ಮುಖ್ಯಮಂತ್ರಿ ವಸುಂಧರಾ ರಾಜೇ ಅವರು ಸ್ಪರ್ಧಿಸಿರುವ ಝಲ್ನಪಟಾನ್ ಕ್ಷೇತ್ರದಲ್ಲಿ ಈ ಬಾರಿ ಕಠಿಣ ಸ್ಪರ್ಧೆ ಎದುರಿಸುವ ಸಾಧ್ಯತೆಯಿದೆ. ಮಾಜಿ ಕೇಂದ್ರ ಸಚಿವ ಜಸ್ವಂತ್ ಸಿಂಗ್ ಅವರ ಪುತ್ರ ಮಾನ್ವೇಂದ ಸಿಂಗ್ ಅವರು ವಸುಂಧರಾ ಅವರ ಪ್ರತಿಸ್ಪರ್ಧಿಯಾಗಿದ್ದಾರೆ.
ಉಳಿದಂತೆ ಸಂಗಾನೇರ್ ಕ್ಷೇತ್ರ, ಸರ್ದಾರ್ ಪುರ, ನಾಥಡ್ವಾರ,ಟೊಂಕ್, ಚಿತ್ತೊರ್ ಘರ್ ಮುಂತಾದ ಕ್ಷೇತ್ರಗಳಲ್ಲಿ ಭಾರಿ ಹಣಾಹಣಿ ನಿರೀಕ್ಷಿತವಾಗಿದೆ.