ರಾಜಸ್ಥಾನ ಸರ್ಕಾರದ ಮಹತ್ವದ ನಿರ್ಧಾರ: ಜುಲೈ 1 ರಿಂದ ರಾಜ್ಯದಲ್ಲಿ ಪ್ಲಾಸ್ಟಿಕ್ ನಿಷೇಧ
ಜೈಪುರ ಜೂನ್ 23: ರಾಜ್ಯವನ್ನು ಮಾಲಿನ್ಯ ಮುಕ್ತವಾಗಿಡಲು ರಾಜ್ಯದ ಗೆಹ್ಲೋಟ್ ಸರ್ಕಾರ ದೊಡ್ಡ ಹೆಜ್ಜೆ ಇಟ್ಟಿದೆ. ಜುಲೈ 1 ರಿಂದ ಸರ್ಕಾರಿ ಕಚೇರಿಗಳಲ್ಲಿ ಒಂದೇ ಬಾರಿ ಬಳಸುವ ಪ್ಲಾಸ್ಟಿಕ್ ವಸ್ತುಗಳನ್ನು ಸರ್ಕಾರ ನಿಷೇಧಿಸಿದೆ.
ನಿಷೇಧಿತ ವಸ್ತುಗಳಲ್ಲಿ ಪ್ಲಾಸ್ಟಿಕ್ ಸ್ಪೂನ್ ಒಳಗೊಂಡಂತೆ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ಗಳು, ಪ್ಲಾಸ್ಟಿಕ್/ಥರ್ಮಾಕೋಲ್ನಿಂದ ಮಾಡಿದ ವಸ್ತುಗಳು, ಬೌಲ್ಗಳು, ಟ್ರೇಗಳು, ಪ್ಲೇಟ್ಗಳಂತಹ ಬಿಸಾಡಬಹುದಾದ ಕಟ್ಲರಿಗಳು ಸೇರಿವೆ. ಈ ಆದೇಶವನ್ನು ಪಾಲಿಸದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರದಿಂದ ಹೇಳಲಾಗಿದೆ.
ವಿಶ್ವ ಪರಿಸರ ದಿನದಂದು ಭಾರತ ಸಿಂಗಲ್ ಯೂಸ್ ಪ್ಲಾಸ್ಟಿಕ್ ವಸ್ತು ನಿಷೇಧಿಸಲು ನಿರ್ಧರಿಸಿದೆ. ಅದರಂತೆ 2022, ಜುಲೈ 1ರಿಂದ ಪಾಲಿಸ್ಟಿರಿನ್ ಇತ್ಯಾದಿ ಸಿಂಗಲ್ ಯೂಸ್ ಪ್ಲಾಸ್ಟಿಕ್ ವಸ್ತುವಿನ ಉತ್ಪಾದನೆ, ಆಮದು, ವಿತರಣೆ, ಸಂಗ್ರಹ, ಮಾರಾಟ ಮಾಡುವಂತಿಲ್ಲ. ಇದರಂತೆ ರಾಜಸ್ಥಾನ ಸರ್ಕಾರದ ಮಹತ್ವದ ನಿರ್ಧಾರ ತೆಗೆದುಕೊಮಡಿದ್ದು ಜುಲೈ 1 ರಿಂದ ರಾಜ್ಯದಲ್ಲಿ ಪ್ಲಾಸ್ಟಿಕ್ ನಿಷೇಧ ಮಾಡಿದೆ.
ಪ್ರಾಣಕ್ಕೆ ಕುತ್ತು
ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್, ಬಳಸಿ ಬಿಸಾಡುವ ವಸ್ತುಗಳ ಮೂಲಕ ಅಪಾಯಕಾರಿ ರಾಸಾಯನಿಕ ವಸ್ತುಗಳು ಮಾನವನ ದೇಹವನ್ನು ತಲುಪುತ್ತವೆ. ವಾಸ್ತವವಾಗಿ, ಬಳಸಿ ಬಿಸಾಡುವ ಪ್ಲಾಸ್ಟಿಕ್ ಶಾಖ ಮತ್ತು ಸೂರ್ಯನ ಬೆಳಕಿನಲ್ಲಿ ಕರಗುತ್ತದೆ. ಅದರೊಳಗಿನ ರಾಸಾಯನಿಕವೂ ಕರಗುತ್ತದೆ. ಆದ್ದರಿಂದ ನಾವು ತಯಾರಿಸಿದ ಆಹಾರವನ್ನು ಸೇವಿಸಿದಾಗ, ಆ ರಾಸಾಯನಿಕವು ನಮ್ಮ ಆಹಾರದೊಂದಿಗೆ ದೇಹವನ್ನು ಸೇರುತ್ತದೆ. ಇದು ಕ್ಯಾನ್ಸರ್ನಂತಹ ಮಾರಣಾಂತಿಕ ಕಾಯಿಲೆಗಳಿಗೆ ಕಾರಣವಾಗಬಹುದು. ಇಷ್ಟೇ ಅಲ್ಲ, ಪ್ಲಾಸ್ಟಿಕ್ ಆಟಿಕೆಗಳು ಸೀಸ ಮತ್ತು ಆರ್ಸೆನಿಕ್ ಅನ್ನು ವಿಷಕಾರಿಯಾಗಿವೆ. ಇದು ಮಕ್ಕಳಿಗೆ ಹಾನಿ ಮಾಡುತ್ತದೆ. ಮತ್ತೊಂದೆಡೆ, ಪ್ಲಾಸ್ಟಿಕ್ ಕರಗುವುದಿಲ್ಲ, ಆದ್ದರಿಂದ ಪ್ರಾಣಿ ಅದನ್ನು ತಿಂದರೆ ಅದು ಅದಕ್ಕೂ ಮಾರಕವಾಗುತ್ತದೆ.
ಮನೆಯಿಂದಲೇ ಪ್ಲಾಸ್ಟಿಕ್ ಬಳಕೆ ತಪ್ಪಿಸಿ
ಪ್ಲಾಸ್ಟಿಕ್ ಬಳಕೆಯಿಂದ ಪರಿಸರದ ಮೇಲೆ ದುಷ್ಪರಿಣಾಮಗಳು ಬೀರುತ್ತವೆ. ಇದರಿಂದ ಗಾಳಿ, ನೀರು, ಮಣ್ಣು ಮತ್ತು ವಾತಾವರಣ ಕಲುಷಿತಗೊಂಡು ರೋಗಗಳು ಹರಡುತ್ತವೆ. ಹಾಗಾಗಿ ಪ್ರತಿಯೊಬ್ಬರು ಜಾಗೃತರಾಗಿ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು.
ಪ್ರತಿಯೊಬ್ಬರ ಮನೆಗಳಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸಲು ಪಣತೊಡಬೇಕಾಗಿದೆ. ಅಡುಗೆ ಮನೆಯ ಸಾಮಾಗ್ರಿಗಳು ಪ್ಲಾಸ್ಟಿಕ್ಮಯವಾಗುವುದನ್ನು ನಿಲ್ಲಿಸಬೇಕು. ಮಾರುಕಟ್ಟೆಗೆ ತೆರಳಿದಾಗ ಪ್ಲಾಸ್ಟಿಕ್ ಕವರ್ಗಳನ್ನು ನೆಚ್ಚಿಕೊಂಡಿರಬಾರದು. ಪ್ಲಾಸ್ಟಿಕ್ ಬದಲಾಗಿ ಪರಿಸರಸ್ನೇಹಿ ಬ್ಯಾಗ್ಗಳನ್ನು ಅನುಸರಿಸಿದರೆ ಪರಿಸರ ಸಂರಕ್ಷಣೆ ಹಾಗೂ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
ಪ್ಲಾಸ್ಟಿಕ್ ವಸ್ತುಗಳ ನಿಷೇಧ
ಪ್ಲಾಸ್ಟಿಕ್ ವಸ್ತುಗಳು ಬಿಸಾಡಿದರೆ ಅದು ಮಣ್ಣಿನಲ್ಲಿ ಕೊಳೆಯುವುದಿಲ್ಲ. ಪ್ರತಿ ದಿನವೂ ನಮ್ಮ ಸುತ್ತ ಪ್ಲಾಸ್ಟಿಕ್ ಬ್ಯಾಗ್ಗಳು, ಬಾಟಲ್, ಆಹಾರದ ಕಂಟೈನರ್, ಕಾಫಿ, ಟೀ ಕಪ್ಪುಗಳು, ಪ್ಲಾಸ್ಟಿಕ್ ಸುತ್ತಿಕೊಡುವ ಆಹಾರಗಳನ್ನು ಮಣ್ಣಿನಲ್ಲಿ ಬೆರೆತರೆ ಮಣ್ಣು ಕೂಡ ಹಾಳಾಗುತ್ತದೆ. ಹಾಗಾಗಿ ಪ್ಲಾಸ್ಟಿಕ್ ವಸ್ತುಗಳನ್ನು ನಿಷೇಧಿಸಬೇಕು ಎನ್ನುವುದು ರಾಜಸ್ಥಾನ ಸರ್ಕಾರದ ಉದ್ದೇಶವಾಗಿದೆ.
ಗ್ರಾಮೀಣ ಪ್ರದೇಶಗಳಲ್ಲಿ ಪ್ಲಾಸ್ಟಿಕ್ ಬಳಕೆ ನಿಯಂತ್ರಣ
ಎಲ್ಲೆಂದರಲ್ಲಿ ಬಿಸಾಡುವ ಆಹಾರಯುಕ್ತ ಪ್ಲಾಸ್ಟಿಕ್ ವಸ್ತುಗಳನ್ನು ಪಶುಗಳು ಭಕ್ಷಿಸುತ್ತವೆ. ಅವುಗಳ ಹೊಟ್ಟೆ ಸೇರಿದ ಪ್ಲಾಸ್ಟಿಕ್ ಪಶುಗಳ ಪ್ರಾಣವನ್ನು ಬಲಿತೆಗೆದುಕೊಳ್ಳುತ್ತವೆ. ಹೀಗಾಗಿ ಮುನ್ನಚ್ಚೆರಿಕೆಯಿಂದ ಗ್ರಾಮೀಣ ಪ್ರದೇಶಗಳಲ್ಲಿ ಪ್ಲಾಸ್ಟಿಕ್ ಬಳಕೆ ನಿಯಂತ್ರಿಸಲು ಜಾಗೃತರಾಗಬೇಕು.