ರಾಜಸ್ಥಾನದ 11 ಜಿಲ್ಲೆಗಳಲ್ಲಿ ಸಪ್ಟೆಂಬರ್.30ರವರೆಗೂ ನಿಷೇಧಾಜ್ಞೆ
ಜೈಪುರ್, ಸಪ್ಟೆಂಬರ್.20: ರಾಜಸ್ಥಾನದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದ್ದಂತೆ ಸರ್ಕಾರವು ಶಿಸ್ತುಕ್ರಮಗಳನ್ನು ತೆಗೆದುಕೊಂಡಿದೆ. ರಾಜ್ಯದ 11 ಜಿಲ್ಲೆಗಳಲ್ಲಿ ಕೊವಿಡ್-19 ನಿಯಂತ್ರಿಸುವ ಉದ್ದೇಶದಿಂದ ಸಿಆರ್ ಪಿಸಿ 144ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಜೈಪುರ್, ಜೋಧಪುರ್, ಕೋಟಾ, ಅಜ್ಮಿರ್, ಅಲ್ವರ್, ಭಿಲ್ವಾರ, ಬಿಕನೇರ್, ಉದಯಪುರ್, ಸಿಕರ್, ಪಾಲಿ ಮತ್ತು ನಗೌರ್ ಜಿಲ್ಲೆಗಳಲ್ಲಿ ನಿಷೇಧಾಜ್ಞೆಯನ್ನು ಜಾರಿಗೊಳಿಸಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನೇತೃತ್ವದ ಸರ್ಕಾರವು ಆದೇಶಿಸಿದೆ.
ಭಾರತದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 54 ಲಕ್ಷಕ್ಕೆ ಏರಿಕೆ
ರಾಜ್ಯದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಕುರಿತು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನೇತೃತ್ವದಲ್ಲಿ ಚರ್ಚಿಸಲಾಯಿತು. ಆರೋಗ್ಯ ಸಚಿವ ರಘು ಶರ್ಮಾ, ಸರ್ಕಾರದ ಮುಖ್ಯಕಾರ್ಯದರ್ಶಿ ರಾಜೀವ್ ಸ್ವರೂಪ್, ಗೃಹ ಕಾರ್ಯದರ್ಶಿ ಅಭಯ್ ಕುಮಾರ್, ಆರೋಗ್ಯ ಮತ್ತು ವೈದ್ಯಕೀಯ ಇಲಾಖೆಯ ಪ್ರಿನ್ಸಿಪಲ್ ಸೆಕ್ರಟರಿ ಅಖಿಲ್ ಅಕೋರಾ ಸಭೆಯಲ್ಲಿ ಭಾಗಿಯಾಗಿದ್ದು, ಪರಿಸ್ಥಿತಿ ಕುರಿತು ಚರ್ಚೆ ನಡೆಸಿದರು.
ಮದುವೆ,
ಅಂತ್ಯಸಂಸ್ಕಾರಕ್ಕೆ
ಅನುಮತಿ:
ರಾಜಸ್ಥಾನದಲ್ಲಿ
ಅಕ್ಟೋಬರ್.31ರವರೆಗೂ
ಸಾಮಾಜಿಕ
ಅಂತರವನ್ನು
ಕಾಯ್ದುಕೊಳ್ಳುವ
ಉದ್ದೇಶದಿಂದಾಗಿ
ಧಾರ್ಮಿಕ
ಕಾರ್ಯಕ್ರಮಗಳನ್ನು
ನಿಷೇಧಿಸಲಾಗಿದೆ.
ಅಂತ್ಯ
ಸಂಸ್ಕಾರದಲ್ಲಿ
20
ಮತ್ತು
ಮದುವೆಗಳಲ್ಲಿ
50
ಜನರು
ಭಾಗಿಯಾಗುವುದಕ್ಕಷ್ಟೇ
ರಾಜ್ಯ
ಸರ್ಕಾರವು
ಅನುಮತಿ
ನೀಡಿದೆ.
ರಾಜ್ಯದಲ್ಲಿ
ಪ್ರತಿನಿತ್ಯ
ಕೊವಿಡ್-19
ಸೋಂಕಿತ
ಪ್ರಕರಣಗಳ
ಸಂಖ್ಯೆಯಲ್ಲಿ
ಭಾರಿ
ಏರಿಕೆ
ಕಂಡು
ಬರುತ್ತಿದೆ.
ಕಳೆದ
24
ಗಂಟೆಗಳಲ್ಲೇ
1834
ಹೊಸ
ಸೋಂಕಿತ
ಪ್ರಕರಣಗಳು
ಪತ್ತೆಯಾಗಿದ್ದು,
ಒಟ್ಟು
ಸೋಂಕಿತ
ಪ್ರಕರಣಗಳ
ಸಂಖ್ಯೆಯು
113124ಕ್ಕೆ
ಏರಿಕೆಯಾಗಿದೆ.
ಈವರೆಗೂ
93805
ಸೋಂಕಿತರು
ಗುಣಮುಖರಾಗಿದ್ದು,
ರಾಜ್ಯದಲ್ಲಿ
17997
ಸಕ್ರಿಯ
ಪ್ರಕರಣಗಳಿವೆ
ಎಂದು
ತಿಳಿದು
ಬಂದಿದೆ.