ರಾಜಸ್ತಾನದಲ್ಲಿ ಗೌಪ್ಯವಾಗಿ ಮಾಹಿತಿ ಪಡೆಯುವಾಗ ಸಿಕ್ಕಿಬಿದ್ದ ಪಾಕಿಸ್ತಾನಿ ಸ್ಪೈ
ಬಾರ್ಮರ್, ಸೆಪ್ಟೆಂಬರ್ 13: ಗೌಪ್ಯವಾಗಿ ಭಾರತೀಯ ಸೇನೆ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದ ಪಾಕಿಸ್ತಾನದ ಬೇಹುಗಾರ(ಸ್ಪೈ)ನನ್ನು ಭದ್ರತಾ ಸಿಬ್ಬಂದಿಗಳು ಬಂಧಿಸಿದ್ದಾರೆ.
ರಾಜಸ್ತಾನದ ಬಾರ್ಮರ್ನಲ್ಲಿ ಭಾರತೀಯ ಸೇನೆ ಹಾಗೂ ಗಡಿಯಲ್ಲಿ ಸೇನೆಯ ನಿಯೋಜನೆ ಕುರಿತು ಮಾಹಿತಿ ಪಡೆಯುತ್ತಿದ್ದ ಎನ್ನಲಾಗಿದೆ.
ಪಿಒಕೆ ಕುರಿತ ಕೇಂದ್ರದ ಯಾವುದೇ ನಿರ್ಧಾರಕ್ಕೂ ನಾವು ಬದ್ಧ: ಬಿಪಿನ್ ರಾವತ್
ಹೆಚ್ಚಿನ ತನಿಖೆಗಾಗಿ ಜೈಪುರಕ್ಕೆ ಕರೆದೊಯ್ಯಲಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಪರಿಚ್ಛೇದ 370 ರದ್ದುಗೊಳಿಸಿದ ಹಿನ್ನೆಲೆಯಲ್ಲಿ ಪಾಕಿಸ್ತಾನದ ಮೇಲೆ ಯುದ್ಧ ನಡೆಸಲು ಪಾಕಿಸ್ತಾನ ತಯಾರಿ ನಡೆಸುತ್ತಿದೆ. ಜೊತೆಗೆ ಭಾರತ ಪಾಕ್ ಗಡಿಯಲ್ಲಿ ಹೆಚ್ಚು ಸೇನೆಯನ್ನು ಕೂಡ ನಿಯೋಜಿಸಿಕೊಂಡಿದೆ.
ರಕ್ಷಣಾ ಸಚಿವ ಈ ಹಿಂದೆ ಮಾತನಾಡಿ ಪಾಕಿಸ್ತಾನದ ಜೊತೆ ಮಾತುಕತೆ ಏನಿದ್ದರೂ ಅದು ಪಾಕ್ ಆಕ್ರಮಿತ ಕಾಶ್ಮೀರದ ಬಗ್ಗೆಯೇ ಹೊರತು ಜಮ್ಮು ಕಾಶ್ಮೀರದ ಬಗ್ಗೆ ಅಲ್ಲ ಎಂದು ಖಡಕ್ ಆಗಿಯೇ ಹೇಳಿದ್ದರು.
ಕಾಶ್ಮೀರದಲ್ಲಿ ಎಕೆ 47 ಹೊತ್ತ ಉಗ್ರರ ಟ್ರಕ್ ಪೊಲೀಸ್ ವಶಕ್ಕೆ
ಅದರ ಜೊತೆಗೆ ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು ಮಾತನಾಡಿ ಪಾಕ್ ಆಕ್ರಮಿತ ಕಾಶ್ಮೀರದ ಕುರಿತು ಕೇಂದ್ರ ಸರ್ಕಾರ ಯಾವುದೇ ತೀರ್ಮಾನ ತೆಗೆದುಕೊಂಡರು ನಮ್ಮ ಸೇನೆ ಸಿದ್ಧವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.