ವಾಚ್ಟವರ್ನಲ್ಲಿ ಸೆಲ್ಫಿ ಕ್ಲಿಕ್ಕಿಸುತ್ತಿರುವಾಗ ಸಿಡಿಲು ಬಡಿದು 11 ಮಂದಿ ಸಾವು
ಜೈಪುರ, ಜುಲೈ 12: ವಾಚ್ಟವರ್ನಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿರುವಾಗ ಸಿಡಿಲು ಬಡಿದು 11 ಮಂದಿ ಮೃತಪಟ್ಟು, ಹಲವು ಮಂದಿ ಗಾಯಗೊಂಡಿರುವ ಘಟನೆ ಜೈಪುರದಲ್ಲಿ ನಡೆದಿದೆ.
ಇಲ್ಲಿನ ಪ್ರಸಿದ್ಧ ಅಮರ್ ಅರಮನೆ ಎದುರು ಇರುವ ವಾಚ್ಟವರ್ಗೆ ಸಿಡಿಲುಬಡಿದಿದೆ. ಕೆಲವರು ಭಯದಿಂದ ಟವರ್ನಿಂದ ಕೆಳಗೆ ಹಾರಿದ್ದು, ಗಾಯಗೊಂಡಿದ್ದಾರೆ.
ವಾಯುಭಾರ ಕುಸಿತ: ರಾಜ್ಯದ 7 ಜಿಲ್ಲೆಗಳಲ್ಲಿ ಅಧಿಕ ಮಳೆಯ ಮುನ್ಸೂಚನೆ
ರಾಜಸ್ಥಾನದಲ್ಲಿ ಭಾನುವಾರ ಭಾರಿ ಮಳೆಯಾಗುತ್ತಿತ್ತು, ಇಂತಹ ಸಂದರ್ಭದಲ್ಲಿ ವಾಚ್ ಟವರ್ ಹತ್ತಿ ಜನರು ಸೆಲ್ಫಿ ತೆಗೆದುಕೊಳ್ಳುವುದರಲ್ಲಿ ಮಗ್ನರಾಗಿದ್ದರು. ಆ ಸಂದರ್ಭದಲ್ಲಿ 27 ಮಂದಿ ವಾಚ್ಟವರ್ನಲ್ಲಿ ಇದ್ದರು ಎನ್ನಲಾಗಿದೆ.
ಸಿಡಿಲು ಬಡಿದು ಮೃತಪಟ್ಟಿರುವ ಕುಟುಂಬಕ್ಕೆ 5 ಲಕ್ಷ ರೂ ಪರಿಹಾರ ನೀಡುವಂತೆ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಆದೇಶ ಹೊರಡಿಸಿದ್ದಾರೆ. ಕೇವಲ ಅಮರ್ ಅರಮನೆ ಮಾತ್ರವಲ್ಲದೆ ರಾಜ್ಯಾದ್ಯಂತ ಸಿಡಿಲು ಬಡಿದು ಮೃತಪಟ್ಟಿರುವ 9 ಘಟನೆಗಳು ನಡೆದಿವೆ.
PM Modi announces ex-gratia of Rs 2 lakhs each from PM National Relief Fund to the next of kin of those who lost their lives due to lightning in parts of Rajasthan. Rs. 50,000 to be provided to the injured: Prime Minister's Office
— ANI (@ANI) July 12, 2021
ಪ್ರಧಾನಿ ನರೇಂದ್ರ ಮೋದಿ ಮೃತರಿಗೆ ಸಂತಾಪ ಸೂಚಿಸಿದ್ದಾರೆ, ಟ್ವೀಟ್ನಲ್ಲಿ ರಾಜಸ್ಥಾನದಲ್ಲಿ ಸಿಡಿಲು ಬಡಿದು ಹಲವು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ, ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಬರೆದುಕೊಂಡಿದ್ದಾರೆ.
ರಾಜಸ್ಥಾನದಲ್ಲಿ ಭಾನುವಾರ ಹಲವೆಡೆ ಭಾರಿ ಮಳೆಯಾಗಿದೆ, ಮುಂದಿನ ನಾಲ್ಕು ದಿನಗಳ ಕಾಲ ಮಳೆ ಮುಂದುವರೆಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.