ಮೋದಿಯಿಂದ ಅಚ್ಚರಿಯ ಆಯ್ಕೆ, ರಾಜಸ್ಥಾನದ ಸಂಸದನಿಗೆ ಚಾನ್ಸ್
ನವದೆಹಲಿ, ಮೇ 30: ಲೋಕಸಭೆ ಚುನಾವಣೆಯಲ್ಲಿ ಕುತೂಹಲಕಾರಿ ಕದನವನ್ನು ಗೆದ್ದ ಸಂಸದ ಕೈಲಾಶ್ ಚೌಧರಿಗೆ ಮೋದಿಯಿಂದ ಅಚ್ಚರಿಯ ಕರೆ ಬಂದಿದೆ. ಪ್ರಧಾನಿ ಸರ್ಕಾರ್ 2ನಲ್ಲಿ ಕೈಲಾಶ್ ಚೌಧರಿ ಅಚ್ಚರಿ, ಅದೃಷ್ಟದ ಆಯ್ಕೆ ಎನಿಸಿಕೊಂಡಿದ್ದಾರೆ.
40 ವರ್ಷ ವಯಸ್ಸಿನ ಕೈಲಾಶ್ ಅವರು ಬಿಜೆಪಿಯಿಂದ ಮುನಿಸಿಕೊಂಡಿರುವ ಹಿರಿಯ ನಾಯಕ ಜಸ್ವಂತ್ ಸಿಂಗ್ ಅವರ ಪುತ್ರ, ಕಾಂಗ್ರೆಸ್ ಅಭ್ಯರ್ಥಿ ಮಾನ್ವೇಂದ್ರ ಸಿಂಗ್ ವಿರುದ್ಧ ಸೆಣಸಿ ಗೆಲುವು ಸಾಧಿಸಿದ್ದಾರೆ.
2019ರ ಮೋದಿ ಸರ್ಕಾರದ ಕೇಂದ್ರ ಸಚಿವ ಸಂಪುಟ ಸದಸ್ಯರು
ಈ ಹಿಂದಿನ ಸಿಎಂ ವಸುಂಧರಾ ರಾಜೇ ಅವರೊಂದಿಗೆ ಕಿತ್ತಾಡಿಕೊಂಡು ಕಳೆದ ಅಕ್ಟೋಬರ್ ನಲ್ಲಿ ಬಿಜೆಪಿ ತೊರೆದಿದ್ದ ಮಾನ್ವೇಂದ್ರ ಅವರು ಕಾಂಗ್ರೆಸ್ ಸೇರಿದ್ದರು. 2014ರ ಲೋಕಸಭೆ ಚುನಾವಣೆಯಲ್ಲಿ ಜಸ್ವಂತ್ ಸಿಂಗ್ ಅವರಿಗೆ ಟಿಕೆಟ್ ನಿರಾಕರಿಸಿದ್ದ ಬಿಜೆಪಿ ಹೈಕಮಾಂಡ್ ವಿರುದ್ಧ ತಿರುಗೇಟು ನೀಡಲು ಸ್ವಾಭಿಮಾನ ಉಳಿಸಿಕೊಳ್ಳಲು ಈ ನಿರ್ಧಾರ ಕೈಗೊಂಡಿದ್ದೇನೆ ಎಂದಿದ್ದರು.
ರಾಜಸ್ಥಾನದಲ್ಲಿ ಬಿಜೆಪಿಗೆ ಹಿನ್ನಡೆ, ಪಕ್ಷ ತೊರೆದ ಜಸ್ವಂತ್ ಸಿಂಗ್ ಪುತ್ರ
ಕಳೆದ ಡಿಸೆಂಬರ್ ನಲ್ಲಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದ ಮಾನ್ವೇಂದ್ರ ಸೋಲು ಕಂಡಿದ್ದರು. ಆದರೆ, ಬರ್ಮಾರ್ ಕ್ಷೇತ್ರದಿಂದ ಸ್ಪರ್ಧಿಸಲು ಮಾನ್ವೇಂದ್ರಗೆ ಅವಕಾಶ ಸಿಕ್ಕಿತ್ತು. ಆರೆಸ್ಸೆಸ್ ಬೆಂಬಲದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕೈಲಾಶ್ 3 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ದಾಖಲಿಸಿದರು.