ಪಿಸ್ತೂಲ್ನಿಂದ ಗುಂಡು ಹಾರಿಸಿಕೊಂಡು ಮಹಿಳೆ ಹಾಗೂ ಪ್ರಿಯಕರ ಆತ್ಮಹತ್ಯೆ
ಜೈಪುರ, ಜೂನ್ 14: ಅವರಿಬ್ಬರೂ ಪರಸ್ಪರ ಒಬ್ಬರನ್ನೊಬ್ಬರು ಪ್ರೀತಿಸ್ತಿದ್ರು, ಯುವತಿಗೆ ಕೆಲ ದಿನಗಳ ಹಿಂದೆ ಬಲವಂತವಾಗಿ ಮದುವೆ ಮಾಡಲಾಗಿತ್ತು. ತಮ್ಮ ಪ್ರೀತಿ ಸೋತಿದ್ದಕ್ಕೆ ಇಬ್ಬರು ಪಿಸ್ತೂಲ್ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
21 ವರ್ಷದ ಅಂಜು ಸುಥಾರ್ ಹಾಗೂ ಶಂಕರ್ ಚೌದರಿ ಆತ್ಮಹತ್ಯೆ ಮಾಡಿಕೊಂಡವರು. ಮರಣೋತ್ತರ ಪರೀಕ್ಷೆ ಬಳಿಕ ಸಾವಿಗೆ ನಿಜವಾದ ಕಾರಣ ತಿಳಿದುಬರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
ಮಗನಿಗೆ ನೇಣು ಹಾಕಿದ ತಂದೆ: ಕೃತ್ಯವನ್ನು ಮೊಬೈಲ್ನಲ್ಲಿ ಸೆರೆ ಹಿಡಿದ ಮಗಳು
ಶವದ ಬಳಿ ಎರಡು ಕಂಟ್ರಿ ಮೇಡ್ ಪಿಸ್ತೂಲ್ಗಳು ದೊರೆತಿವೆ. ಎರಡು ಶವ ಸ್ಮಶಾನದ ಬಳಿ ದೊರೆತಿದೆ. ಸ್ಥಳೀಯರಿಗೆ ಕಾಣಿಸಿದ ಬಳಿಕ ಆಸ್ಪತ್ರೆಗೆ ಕಳುಹಿಸಲಾಗಿದೆ. ಆದರೆ ಆ ಸ್ಥಳದಲ್ಲಿ ಎಲ್ಲೂ ಡೆತ್ ನೋಟ್ ಪತ್ತೆಯಾಗಿಲ್ಲ.
ಆದರೆ ಅವರ ಮೊಬೈಲ್ನಲ್ಲಿ ಲಭ್ಯವಾದ ವಿಡಿಯೋಗಳು ಅವರ ಪ್ರೀತಿ ಸೋತಿದ್ದರಿಂದ ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನುವುದು ಸ್ಪಷ್ಟವಾಗಿದೆ. ಇದೇ ರೀತಿ ಘಟನೆ ಕೂಡ ರಾಮನಗರದಲ್ಲಿ ಇತ್ತೀಚೆಗೆ ನಡೆದಿತ್ತು. ಬ್ಲಾಕ್ಮೇಲ್ ಮಾಡುವ ಉದ್ದೇಶದಿಂದ ಮಹಿಳೆಯ ಫೋಟೊವನ್ನು ತೆಗೆದು ಆತನ ಪತಿಗೆ ಕಳುಹಿಸಿದ್ದರು. ಇದರಿಂದ ಮನನೊಂದು ಇಬ್ಬರು ಆತ್ಮಹತ್ಯೆಗೆ ಶರಣಾಗಿದ್ದರು.