"ರಾಜಸ್ಥಾನದಲ್ಲೂ ನಡೆಯೋದಿಲ್ಲ ಪೌರತ್ವ ತಿದ್ದುಪಡಿ ಕಾಯ್ದೆಯ ಆಟ"
ಜೈಪುರ್,
ಡಿಸೆಂಬರ್.22:
ದೇಶದಲ್ಲಿ
ಪೌರತ್ವ
ತಿದ್ದುಪಡಿ
ಕಾಯ್ದೆ
ಹಾಗೂ
ರಾಷ್ಟ್ರೀಯ
ನಾಗರಿಕ
ನೋಂದಣಿ
ಬಗ್ಗೆಯೇ
ದೊಡ್ಡ
ಮಟ್ಟದ
ಚರ್ಚೆ,
ಹೋರಾಟ,
ಪ್ರತಿಭಟನೆ
ನಡೆಯುತ್ತಿದೆ.
ಇದರ
ಮಧ್ಯೆ
ಕೇಂದ್ರ
ಸರ್ಕಾರಕ್ಕೆ
ಮತ್ತೊಂದು
ರಾಜ್ಯ
ಶಾಕ್
ಕೊಟ್ಟಿದೆ.
ರಾಜಸ್ಥಾನದಲ್ಲಿ
ರಾಷ್ಟ್ರೀಯ
ನಾಗರಿಕ
ನೋಂದಣಿ
ಹಾಗೂ
ಪೌರತ್ವ
ತಿದ್ದುಪಡಿ
ಕಾಯ್ದೆಯನ್ನು
ಜಾರಿಗೊಳಿಸಲು
ಸಾಧ್ಯವಿಲ್ಲ
ಎಂದು
ಮುಖ್ಯಮಂತ್ರಿ
ಅಶೋಕ್
ಗೆಹ್ಲೋಟ್
ಸ್ಪಷ್ಟವಾಗಿ
ಕೇಂದ್ರ
ಸರ್ಕಾರಕ್ಕೆ
ಹೇಳಿದ್ದಾರೆ.
ಜೈಪುರದಲ್ಲಿ
ಪ್ರತಿಭಟನಾ
ಮೆರವಣಿಗೆ
ನಂತರ
ನಡೆದ
ಸಮಾವೇಶವನ್ನು
ಉದ್ದೇಶಿಸಿ
ಅಶೋಕ್
ಗೆಹ್ಲೋಟ್
ಮಾತನಾಡಿದರು.
ಪೌರತ್ವ
ಕಾಯ್ದೆ
ವಿರೋಧಿ
ಹೋರಾಟ:
ಮೃತರ
ಮನೆಗೆ
ಪ್ರಿಯಾಂಕಾ
ವಾದ್ರಾ
ರಾಜಸ್ಥಾನದಲ್ಲಿ
ಕೇಂದ್ರ
ಸರ್ಕಾರದ
ಜಾರಿಗೊಳಿಸಿರುವ
ರಾಷ್ಟ್ರೀಯ
ನಾಗರಿಕ
ನೋಂದಣಿ
ಹಾಗೂ
ಪೌರತ್ವ
ತಿದ್ದುಪಡಿ
ಕಾಯ್ದೆಯನ್ನು
ಅನುಷ್ಠಾನಗೊಳಿಸಲು
ಆಗುವುದಿಲ್ಲ
ಎಂದು
ಮುಖ್ಯಮಂತ್ರಿ
ಅಶೋಕ್
ಗೆಹ್ಲೋಟ್
ಸ್ಪಷ್ಟ
ಸಂದೇಶವನ್ನು
ರವಾನಿಸಿದ್ದಾರೆ.
"ಮಿತ್ರಪಕ್ಷಗಳೇ
ಪೌರತ್ವ
ಕಾಯ್ದೆಯನ್ನು
ವಿರೋಧಿಸುತ್ತಿವೆ"
ಪ್ರಧಾನಿ
ನರೇಂದ್ರ
ಮೋದಿ
ಅವರನ್ನು
ಉದ್ದೇಶಿಸಿ
ಮುಖ್ಯಮಂತ್ರಿ
ಅಶೋಕ್
ಗೆಹ್ಲೋಟ್
ಮಾತನಾಡಿದರು.
ಈಗಾಗಲೇ
ಒಂಬತ್ತು
ರಾಜ್ಯಗಳು
ಪೌರತ್ವ
ತಿದ್ದುಪಡಿ
ಕಾಯ್ದೆಯನ್ನು
ಜಾರಿಗೊಳಿಸುವುದಿಲ್ಲ
ಎಂದು
ಸ್ಪಷ್ಟವಾಗಿ
ಹೇಳಿವೆ.
ಕೇಂದ್ರ
ಸರ್ಕಾರಕ್ಕೆ
ಬೆಂಬಲ
ನೀಡಿರುವ
ಮಿತ್ರಪಕ್ಷಗಳೇ
ಪೌರತ್ವ
ತಿದ್ದುಪಡಿ
ಕಾಯ್ದೆಯ
ಬಗ್ಗೆ
ಅಸಮಾಧಾನ
ವ್ಯಕ್ತಪಡಿಸಿವೆ.
ಬಿಹಾರ
ಹಾಗೂ
ಒಡಿಶಾದಲ್ಲಿ
ಬಿಜೆಪಿ
ಬೆಂಬಲಿತ
ಪಕ್ಷಗಳೇ
ಅಧಿಕಾರದಲ್ಲಿವೆ.
ಈ
ಎರಡು
ರಾಜ್ಯಗಳ
ಮುಖ್ಯಮಂತ್ರಿಗಳು
ಕೂಡಾ
ಕೇಂದ್ರ
ಸರ್ಕಾರದ
ನಿರ್ಧಾರವನ್ನು
ವಿರೋಧಿಸಿದ್ದಾರೆ.