ತ್ವರಿತ ಅಲರ್ಟ್ ಗಳಿಗಾಗಿ
For Daily Alerts
Breaking: ರಾಜಸ್ಥಾನದ ಮೇಜ್ ನದಿಗೆ ಉರುಳಿದ ಬಸ್: 24 ಮಂದಿ ಸಾವು
ಜೈಪುರ್, ಫೆಬ್ರವರಿ 26: ಚಾಲಕನ ನಿಯಂತ್ರಣ ತಪ್ಪಿ ಬಸ್ ಒಂದು ನದಿಗೆ ಉರುಳಿ 24 ಮಂದಿ ಮೃತಪಟ್ಟಿರುವ ಘಟನೆ ರಾಜಸ್ಥಾನದ ಬುಂದಿ ಜಿಲ್ಲೆಯ ಲಖೇರಿ ಸಮೀಪ ನಡೆದಿದೆ.
ಮದುವೆ ಮುಗಿಸಿಕೊಂಡು ವಾಪಸಾಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿ ಬಸ್ ಮೇಜ್ ನದಿಗೆ ಉರುಳಿ, ಪ್ರಯಾಣಿಕರೆಲ್ಲರೂ ಉಸಿರುಕಟ್ಟಿ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಸ್ಥಳೀಯರು ಆಗಮಿಸಿ ರಕ್ಷಣಾ ಕಾರ್ಯ ಮುಂದುವರೆಸಿದ್ದಾರೆ.
ಕೋಟಾದಿಂದ ಕೋಟಾ-ಲಾಲ್ಸೋಟ್ ಹೆದ್ದಾರಿ ಮೂಲಕ ಸವಾಯ್ ಮಾಧೋಪುರಕ್ಕೆ ತೆರಳುತ್ತಿದ್ದರು.80 ಅಡಿ ಎತ್ತರದ ಬ್ರಿಡ್ಜ್ನಿಂದ ಬಸ್ ನದಿಗುರುಳಿತ್ತು. ಪಾಪಡಿ ಹಳ್ಳಿಯ ಸಮೀಪ ಘಟನೆ ನಡೆದಿದೆ.
ಬುಂದಿಯಿಂದ
75
ಕಿ,ಮೀ
ದೂರದಲ್ಲಿ
ಈ
ಪ್ರದೇಶವಿದೆ.
ಬ್ರಿಡ್ಜ್ನಿಂದ
ನದಿಗೆ
ಬಸ್
ಬಿದ್ದ
ತಕ್ಷಣವೇ
ಮುಳುಗಿಬಿಟ್ಟಿತ್ತು.
ಎಸ್ಡಿಆರ್ಎಫ್
ಸಿಬ್ಬಂದಿ
ಹಾಗೂ
ಸ್ಥಳೀಯರು
ರಕ್ಷಣೆಗೆ
ಮುಂದಾಗಿದ್ದಾರೆ.
Comments
English summary
24 Dead, Four Injured as bus carrying wedding party plunges into river in Rajasthan's Bundi.