ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ರಾಜಸ್ಥಾನದ ಮೇಜ್ ನದಿಗೆ ಉರುಳಿದ ಬಸ್: 24 ಮಂದಿ ಸಾವು

|
Google Oneindia Kannada News

ಜೈಪುರ್, ಫೆಬ್ರವರಿ 26: ಚಾಲಕನ ನಿಯಂತ್ರಣ ತಪ್ಪಿ ಬಸ್ ಒಂದು ನದಿಗೆ ಉರುಳಿ 24 ಮಂದಿ ಮೃತಪಟ್ಟಿರುವ ಘಟನೆ ರಾಜಸ್ಥಾನದ ಬುಂದಿ ಜಿಲ್ಲೆಯ ಲಖೇರಿ ಸಮೀಪ ನಡೆದಿದೆ.

ಮದುವೆ ಮುಗಿಸಿಕೊಂಡು ವಾಪಸಾಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿ ಬಸ್ ಮೇಜ್ ನದಿಗೆ ಉರುಳಿ, ಪ್ರಯಾಣಿಕರೆಲ್ಲರೂ ಉಸಿರುಕಟ್ಟಿ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಸ್ಥಳೀಯರು ಆಗಮಿಸಿ ರಕ್ಷಣಾ ಕಾರ್ಯ ಮುಂದುವರೆಸಿದ್ದಾರೆ.

24 Dead Four Injured As Bus Plunges Into River In Bundi

ಕೋಟಾದಿಂದ ಕೋಟಾ-ಲಾಲ್‌ಸೋಟ್ ಹೆದ್ದಾರಿ ಮೂಲಕ ಸವಾಯ್ ಮಾಧೋಪುರಕ್ಕೆ ತೆರಳುತ್ತಿದ್ದರು.80 ಅಡಿ ಎತ್ತರದ ಬ್ರಿಡ್ಜ್‌ನಿಂದ ಬಸ್ ನದಿಗುರುಳಿತ್ತು. ಪಾಪಡಿ ಹಳ್ಳಿಯ ಸಮೀಪ ಘಟನೆ ನಡೆದಿದೆ.

ಬುಂದಿಯಿಂದ 75 ಕಿ,ಮೀ ದೂರದಲ್ಲಿ ಈ ಪ್ರದೇಶವಿದೆ. ಬ್ರಿಡ್ಜ್‌ನಿಂದ ನದಿಗೆ ಬಸ್ ಬಿದ್ದ ತಕ್ಷಣವೇ ಮುಳುಗಿಬಿಟ್ಟಿತ್ತು. ಎಸ್‌ಡಿಆರ್ಎಫ್ ಸಿಬ್ಬಂದಿ ಹಾಗೂ ಸ್ಥಳೀಯರು ರಕ್ಷಣೆಗೆ ಮುಂದಾಗಿದ್ದಾರೆ.

English summary
24 Dead, Four Injured as bus carrying wedding party plunges into river in Rajasthan's Bundi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X