ವಯೋಲಿನ್ ಜುಗಲ್ಬಂಧಿ: ಭಾರತವನ್ನು ಪ್ರತಿನಿಧಿಸಿದ ಬೆಂಗಳೂರಿನ ಸಹೋದರಿಯರು
ಬೆಂಗಳೂರು, ಸೆಪ್ಟೆಂಬರ್ 6: ಇಂಡೋ-ಯುರೋಪಿಯನ್ ಚೇಂಬರ್ ವಯೋಲಿನ್ ಜುಗಲ್ಬಂಧಿ ಕಾರ್ಯಕ್ರಮವನ್ನು ಹಂಗೇರಿಯ ಬುಡಾಪೆಸ್ಟಿನ ದಣುಬೆ ಪ್ಯಾಲೇಸ್ ನಲ್ಲಿ ಏರ್ಪಡಿಸಿತ್ತು.
ಬೆಂಗಳೂರಿನ ಸಹೋದರಿಯರು ಮಿಶೆಲ್ ಜೋಹಾನ್ನಾ(17) ದ್ವಿತೀಯ ಪಿಯುಸಿ ಪಿಸಿಎಂಬಿ ಓದುತ್ತಿದ್ದಾರೆ. ಇನ್ನೊಬ್ಬರು ಗ್ಯಾಬ್ರಿಯೆಲ್ಲಾ ತನಿಷ್ತಾ ಬೆಂಗಳೂರಿನ ಬಿಷಪ್ ಕಾಟನ್ ಶಾಲೆಯಲ್ಲಿ ಮ್ಯೂಸಿಕ್ ಟೀಚರ್ ಆಗಿ ಕೆಲಸ ಮಾಡುತ್ತಿದ್ದಾರೆ.
ಯುರೋಪ್ ನಲ್ಲಿ ನಡೆದ ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಈ ಇಬ್ಬರು ಸಹೋದರಿಯರು ಭಾರತವನ್ನು ಪ್ರತಿನಿಧಿಸಿದ್ದರು. ದನುಬೆ ಸಿಂಫೊನಿ ಆರ್ಕೆಸ್ಟ್ರಾದಲ್ಲಿ ಇಬ್ಬರು ದೆಹಲಿಯ ಸಂಗೀತಗಾರರು, ಮುಂಬೈ, ಕೊಲ್ಕತ್ತ ಹಾಗೂ ಮೂರು ಮಂದಿ ಅಮೆರಿಕ ಹಾಗೂ ಯುಕೆ, ಹಾಗೂ ಎಂಟು ಹಂಗೇರಿಯನ್ ಸಂಗೀತಗಾರರು ಪಾಲ್ಗೊಂಡಿದ್ದರು.
ಕೊಲ್ಕತ್ತದ ಅಪ್ರತಿಮ್ ನಾಯಕ್ ಎನ್ನುವವರು ಈ ಆರ್ಕೆಸ್ಟ್ರಾದ ಮಾಸ್ಟರ್ ಆಗಿದ್ದರು. ಬುಡಾಪೆಸ್ಟ್ ನಿಂದ ಗ್ಯಾಬ್ರಿಯೆಲ್ಲಾ ಇಟಲಿಗೆ ತೆರಳಿದರು. ಒಂಬತ್ತನೇ ಅಂತಾರಾಷ್ಟ್ರೀಯ ಸಂಗೀತ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇಟಲಿಯ ನಾರ್ನಿ ಕಮ್ಯುನಲ್ ಪ್ಯಾಲೇಸ್ನಲ್ಲಿ ಪ್ರದರ್ಶನ ನೀಡಿದರು. ಗ್ಯಾಬ್ರಿಯೆಲ್ಲಾ ಅವರು ಸ್ಯಾಂಡಲ್ ವುಡ್ ನಲ್ಲೂ ತಮ್ಮ ಕಂಠಸಿರಿ ಹರಿಸಿದ್ದಾರೆ.