ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಗ್ರರ ಪತ್ತೆಗೆ ಅಗತ್ಯಬಿದ್ದರೆ ಪಾಕಿಸ್ತಾನದ ನೆರವು ಕೇಳುತ್ತೇವೆ: ಶ್ರೀಲಂಕಾ ಪ್ರಧಾನಿ

|
Google Oneindia Kannada News

ಕೊಲಂಬೋ,ಏ.26: ಶ್ರೀಲಂಕಾದಲ್ಲಿ ನಡೆದ ಸರಣಿ ಆತ್ಮಾಹುತಿ ಬಾಂಬ್ ದಾಳಿಗೆ ಕಾರಣರಾದ ಉಗ್ರರನ್ನು ಪತ್ತೆ ಹಚ್ಚಲು ಅಗತ್ಯಬಿದ್ದರೆ ಪಾಕಿಸ್ತಾನದ ನೆರವು ಪಡೆಯುತ್ತೇವೆ ಎಂದು ಶ್ರೀಲಂಕಾ ಪ್ರಧಾನಿ ರಾನಿಲ್ ವಿಕ್ರಂಸಿಂಘೆ ತಿಳಿಸಿದ್ದಾರೆ.

ಹಿಂದೂಸ್ತಾನ್ ಟೈಮ್ಸ್ ನಡೆಸಿದ ವಿಶೇಷ ಸಂದರ್ಭದಲ್ಲಿ ಮಾತನಾಡಿದ ಅವರು, ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಇಲ್ಲಿಯವರೆಗೆ 253 ಮಂದಿ ಮೃತಪಟ್ಟಿದ್ದು ಅದರಲ್ಲಿ 45 ಮಂದಿ ಮಕ್ಕಳಿದ್ದರು. 76 ಮಂದಿ ಶಂಕಿತರನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದರು. ಉಗ್ರರ ಪತ್ತೆಗೆ ಅಗತ್ಯಬಿದ್ದರೆ ಪಾಕಿಸ್ತಾನದ ನೆರವು ಕೋರುವುದಾಗಿ ತಿಳಿಸಿದರು.

ಶ್ರೀಲಂಕಾ ಸ್ಫೋಟ: ಮೂವರು ಮಹಿಳೆಯರು ಸೇರಿ ಆರು ಶಂಕಿತರ ಫೋಟೋ ಬಿಡುಗಡೆಶ್ರೀಲಂಕಾ ಸ್ಫೋಟ: ಮೂವರು ಮಹಿಳೆಯರು ಸೇರಿ ಆರು ಶಂಕಿತರ ಫೋಟೋ ಬಿಡುಗಡೆ

ನಾವು ತನಿಖೆ ನಡೆಸುವಾಗ ಉಗ್ರರು ಇದೇ ದೇಶಕ್ಕೆ ಸೇರಿದವರು ಎಂದು ಖಚಿತವಾಗಿಲ್ಲ, ನಮ್ಮ ಆಸುಪಾಸಿರುವ ಉಳಿದ ದೇಶಗಳು ಕೂಡ ಇದೇ ರೀತಿಯ ತೊಂದರೆಯನ್ನು ಅನುಭವಿಸುತ್ತಿದೆ. ಭಾರತವು ಜಾಗತಿಕ ಉಗ್ರವದವನ್ನು ತಡೆಯುವ ಕೆಲಸ ಮಾಡುತ್ತಿದೆ.

Will seek Pakistan help to trace terrorists if needed Sri Lanka PM

ಶ್ರೀಲಂಕಾ ಉಗ್ರ ದಾಳಿಯಲ್ಲಿ ಮೃತಪಟ್ಟವರು 253 ಮಂದಿ; 359 ಅಲ್ಲ ಶ್ರೀಲಂಕಾ ಉಗ್ರ ದಾಳಿಯಲ್ಲಿ ಮೃತಪಟ್ಟವರು 253 ಮಂದಿ; 359 ಅಲ್ಲ

ಪಾಕಿಸ್ತಾನವು ಉಗ್ರರನ್ನು ಹುಡುಕಲು ನಮಗೆ ಸಹಾಯ ಮಾಡುವುದಾಗಿ ತಿಳಿಸಿದೆ. ಸಂಪೂರ್ಣ ಬೆಂಬಲ ನೀಡುವುದಾಗಿಯೂ ಹೇಳಿದೆ. ಈ ಉಗ್ರರನ್ನು ಪತ್ತೆ ಹಚ್ಚಲು ಬೆಂಬಲ ನೀಡುವುದಾಗಿ ಭಾರತದ ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ಅವರ ಬೆಂಬಲ ಸದಾ ನಮ್ಮ ಮೇಲಿದೆ. ಹಾಗೆಯೇ ಭಾರತದ ಗುಪ್ತಚರ ಇಲಾಖೆಯ ಮಾಹಿತಿಗಳನ್ನು ಕೂಡ ಶ್ರೀಲಂಕಾದೊಂದಿಗೆ ಹಂಚಿಕೊಳ್ಳಲಿದೆ ಎಂದರು.

English summary
Sri Lankan Prime Minister Ranil Wickremesinghe sent written responses to e-mailed questions from Hindustan Times on Easter Sunday’s suicide attacks on churches and hotels in Colombo, in which 253 people, including at least 45 children, were killed and hundreds injured.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X