ಹೆಡ್ ಲೈನ್ಸ್: ದೇಶ, ವಿದೇಶಗಳ ಚುಟುಕು ಸುದ್ದಿ
ಬೆಂಗಳೂರು, ಮೇ.23: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಆಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.
12.20:
ಭಾರತ
ರತ್ನ
ಲತಾ
ಮಂಗೇಷ್ಕರ್,
ರಜನಿಕಾಂತ್,
ಬಿಗ್
ಬಿ
ಅಮಿತಾಬ್
ರಿಗೆ
ಮೋದಿ
ಪ್ರಮಾಣ
ವಚನ
ಸ್ವೀಕಾರ
ಸಮಾರಂಭಕ್ಕೆ
ಅಹ್ವಾನ
ಕಳಿಸಲಾಗಿದೆ.
12.15:
ಕಪ್ಪು
ಹಣ
ಪ್ರಕರಣ
ವಿಶೇಷ
ತನಿಖಾ
ತಂಡ
ರಚಿಸುವಂತೆ
ಸುಪ್ರೀಂಕೋರ್ಟ್
ಆದೇಶ.
12.00:
ಎಂಡಿಎಂಕೆ
ನಾಯಕರು
ಬಿಜೆಪಿ
ಅಧ್ಯಕ್ಷ
ರಾಜನಾಥ್
ಸಿಂಗ್
ಅವರನ್ನು
ಭೇಟಿ
ಮಾಡಿದ್ದು,
ಶ್ರೀಲಂಕಾ
ಅಧ್ಯಕ್ಷ
ರಾಜಪಕ್ಸೆಗೆ
ನೀಡಿರುವ
ಅಹ್ವಾನ
ಹಿಂಪಡೆಯುವಂತೆ
ಒತ್ತಾಯಿಸಿದ್ದಾರೆ.
11.00:
ದಕ್ಷಿಣ
ಏಷ್ಯಾ
ನಾಯಕರಿಗೆ
ಮೋದಿ
ಅವರು
ನೀಡಿರುವ
ಅಹ್ವಾನ
ಉತ್ತಮ
ಬೆಳವಣಿಗೆ
ಎಂದು
ಅಮೆರಿಕ
ಹೇಳಿದೆ.
10.35: ಭಾರತದ ಮಾವುಗಳಿಗೆ ಹೇರಲಾಗಿರುವ ನಿಷೇಧ ಹಿಂಪಡೆಯುವ ಬಗ್ಗೆ ಬ್ರಿಟನ್ ಸರ್ಕಾರ ದುಂಡುಮೇಜಿನ ಸಭೆ ನಡೆಸಿದೆ. ಡಿ. 2015ರೊಳಗೆ ನಿಷೇಧ ವಾಪಸ್ ಪಡೆಯಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗಿದೆ.
10.15: ಅಫ್ಘಾನಿಸ್ತಾನದಲ್ಲಿರುವ ಭಾರತೀಯ ರಾಯಭಾರ ಕಚೇರಿ ಮೇಲಿನ ಬಾಂಬ್ ದಾಳಿ ಹಿಂದೆ ತಾಲಿಬಾನ್ ಇದೆ ಎಂದು ಅಫ್ಘಾನ್ ಮಾಧ್ಯಮಗಳು ವರದಿ ಮಾಡಿವೆ.
10.00: ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರನ್ನು ತಿಹಾರ್ ಜೈಲಿನಿಂದ ಕೋರ್ಟಿಗೆ ಕರೆದೊಯ್ಯಲಾಗಿದೆ.
9.45: ನವದೆಹಲಿಯಲ್ಲಿರುವ ಸಂಸತ್ ಭವನದಲ್ಲಿ ಬೆಂಕಿ ಕಾಣಿಸಿಕೊಂಡು, ಅಗ್ನಿ ಶಾಮಕದಳ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಸಫಲರಾಗಿದ್ದಾರೆ.
9.30 : ನವದೆಹಲಿಗೆ ಹಿಂತಿರುಗಿರುವ ಮೋದಿ ಅವರು ಸಚಿವ ಸಂಪುಟ ರಚನೆ ಬಗ್ಗೆ ಚರ್ಚೆ ನಡೆಸಲಿದ್ದಾರೆ.
9.15: ಎಎಪಿ ಕಾರ್ಯಕರ್ತರು ತಿಹಾರ್ ಜೈಲಿನ ಮುಂದೆ ನಡೆಸಿದ ಪ್ರತಿಭಟನೆ ಹಾಗೂ ಅರವಿಂದ್ ಅವರ ನಡೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ.