ಸೆ.23: ದೇಶ, ವಿದೇಶ ಸುದ್ದಿಗಳ ಹೆಡ್ ಲೈನ್ಸ್
ಬೆಂಗಳೂರು, ಸೆ.23: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಅಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.
12.00: ಬಹುಕೋಟಿ ವಿವಿಐಪಿ ಹೆಲಿಕಾಪ್ಟರ್ ಹಗರಣದಲ್ಲಿ ದೆಹಲಿಯ ವಕೀಲ ಗೌತಮ್ ಖೈತಾನ್ ಅವರನ್ನು ವಶಕ್ಕೆ ಪಡೆದು ಜಾರಿ ನಿರ್ದೇಶನಾಲಯ ವಿಚಾರಣೆಗೊಳಪಡಿಸಿದೆ.
11.45:
ಏಷ್ಯನ್
ಗೇಮ್ಸ್ನಲ್ಲಿ
ಭಾರತದ
ಶೂಟರ್
ಗಳ
ಪದಕ
ಬೇಟೆ
ಮುಂದುವರಿದಿದೆ.
10
ಮೀಟರ್
ಏರ್
ರೈಫಲ್ನಲ್ಲಿ
ಶೂಟರ್
ಅಭಿನವ್
ಬಿಂದ್ರಾ
ಕಂಚಿನ
ಪದಕ
ಗೆದ್ದಿದ್ದಾರೆ.
ವೃತ್ತಿ
ಬದುಕಿಗೆ
ವಿದಾಯ
ಹೇಳುತ್ತಿರುವುದಾಗಿ
ಸೋಮವಾರ
ಟ್ವೀಟ್
ಮಾಡಿದ್ದ
ಬಿಂದ್ರಾ
ಅವರು
ಅವಕಾಶ
ಸಿಕ್ಕರೆ
2016ರಲ್ಲಿ
ರಿಯೋ
ಒಲಿಂಪಿಕ್ಸ್
ನಲ್ಲಿ
ಭಾರತವನ್ನು
ಪ್ರತಿನಿಧಿಸುತ್ತೇನೆ
ಎಂದಿದ್ದಾರೆ.
10.40: ಅಮೆರಿಕದ ವೈಮಾನಿಕ ದಾಳಿಯ ನಂತರ ರಕ್ಕಾ ಪ್ರದೇಶದಲ್ಲಿ ಸಂಪೂರ್ಣವಾಗಿ ವಿದ್ಯುತ್ ಸ್ಥಗಿತಗೊಂಡು, ಕತ್ತಲು ಆವರಿಸಿದೆ.
10.30:
ಇಸ್ಲಾಮಿಕ್
ರಾಜ್ಯದ
ಉಗ್ರರನ್ನು
ಸಂಪೂರ್ಣವಾಗಿ
ಸದೆಬಡೆಯುವಂತೆ
ಅಮೆರಿಕ
ಅಧ್ಯಕ್ಷ
ಬರಾಕ್
ಒಬಾಮಾ
ಆದೇಶಿಸಿದ್ದಾರೆ.
10.15: ಇರಾಕಿನ ಇಸ್ಲಾಮಿಕ್ ರಾಜ್ಯ ಉಗ್ರ ಸಂಘಟನೆ(ಐಎಸ್ಐಎಸ್) ಮೇಲೆ ಮೊದಲ ಬಾರಿಗೆ ಅಮೆರಿಕ ವೈಮಾನಿಕ ದಾಳಿ ನಡೆಸಿದೆ.
10.10: ನರೇಂದ್ರ ಮೋದಿ ಅವರು ಪ್ರಧಾನಿಯಾದ ಮೇಲೆ ಪ್ರಥಮ ಬಾರಿಗೆ ಕರ್ನಾಟಕಕ್ಕೆ ಮಂಗಳವಾರ ಆಗಮಿಸಲಿದ್ದಾರೆ. ಇಸ್ರೋ ಕೇಂದ್ರಕ್ಕೆ ಭೇಟಿ ನೀಡಿ ಮಂಗಳಯಾನದ ಬಗ್ಗೆ ಮಾಹಿತಿ ಪಡೆಯಲಿದ್ದಾರೆ.
10.05: ಮಂಗಳ ಯಾನ ನೌಕೆ ಸೆ.24 ರಂದು ಬೆಳಗ್ಗೆ 7.17ರಿಂದ ಮಂಗಳ ಗ್ರಹದ ಕಕ್ಷೆಗೆ ಸೇರುವ ಪ್ರಕ್ರಿಯೆ ಆರಂಭಗೊಳ್ಳಲಿದೆ.