ಚಿತ್ರಗಳಲ್ಲಿ: ಸುಮನ್ 'ಸ್ಮಾರ್ಟ್' ಫೋನ್ ಸ್ಟೆಥೋಸ್ಕೋಪ್
ಬೆಂಗಳೂರು, ಮೇ.13: ಆತನಿಗಿನ್ನೂ 15 ರ ಹರೆಯ ಆದರೆ, ಈಗಲೇ ತಂತ್ರಜ್ಞಾನದ ಹೊಸ ಆವಿಷ್ಕಾರಗಳನ್ನು ಅರೆದು ಕುಡಿವ ಉತ್ಸಾಹಿ. ಕೈಲಿರುವ ಸ್ಮಾರ್ಟ್ ಫೋನನ್ನು ಡಿಜಿಟಲ್ ಸ್ಟೆಥೋಸ್ಕೋಪ್ ಆಗಿ ಪರಿವರ್ತಿಸಿಬಿಟ್ಟಿದ್ದಾನೆ. ಇತ್ತೀಚಿಗೆ 'ಟುನೈಟ್ ಶೋ ವಿಥ್ ಜಿಮ್ಮಿ ಫಾಲನ್' ನಲ್ಲಿ ಈತನ ಬಗ್ಗೆ ಜಗತ್ತಿಗೆ ತಿಳಿದು ಬಂದಿದೆ.
ಅಮೆರಿಕದ ಸಿಯಾಟಲ್ ನ ಲೇಕ್ ಸೈಡ್ ಶಾಲೆಯ ವಿದ್ಯಾರ್ಥಿಯಾಗಿರುವ ಭಾರತೀಯ ಮೂಲದ ಸುಮನ್ ಮುಲುಮುಡಿ ಈ ಹೊಸ ಸಾಧನವನ್ನು ಆವಿಷ್ಕರಿಸಿದ್ದಲ್ಲದೆ ಸ್ಟ್ರಾಟೋ ಸೈಟಿಂಫಿಕ್ ಐಎನ್ ಸಿ ಹೆಸರಿನ ಕಂಪನಿ ತೆರೆದು ಅದಕ್ಕೆ ಸಿಇಒ ಆಗಿ ಕಾರ್ಯ ನಿರ್ವಹಿಸುತ್ತಿದ್ದಾನೆ.
ಸುಮನ್ ತನ್ನ ಸ್ಮಾರ್ಟ್ ಫೋನ್ ಸ್ಟೆಥೋಸ್ಕೋಪ್ ಅನ್ನು ಮೊದಲಿಗೆ ಅಮೆರಿಕದಲ್ಲಿ ಬಿಡುಗಡೆ ಮಾಡಿ, ನಂತರ ಯುರೋಪ್ ಹಾಗೂ ಅಭಿವೃದ್ಧಿ ಶೀಲ ದೇಶಗಳಿಗೆ ಪರಿಚಯಿಸುವ ಇರಾದೆ ಹೊಂದಿದ್ದಾನೆ. ಸುಮನ್ ತಂದೆ ಮಹೇಶ್ ಕಾರ್ಡಿಯಾಲೊಜಿಸ್ಟ್ ಆಗಿದ್ದರೆ, ತಾಯಿ ಶ್ರೀಲತಾ ಶ್ರಾಫ್ ಅವರು ಕೂಡಾ ವೈದ್ಯರಾಗಿದ್ದಾರೆ. ಸ್ಮಾರ್ಟ್ ಫೋನ್ ಜತೆ ಸುಮನ್ ಚಿತ್ರ ಇಲ್ಲಿದೆ.. ಉಳಿದಂತೆ ಇನ್ನಷ್ಟು ಕುತೂಹಲಕಾರಿ ಚಿತ್ರಗಳು ನಿಮಗಾಗಿ...
ಸುಮನ್ 'ಸ್ಮಾರ್ಟ್' ಫೋನ್ ಸ್ಟೆಥೋಸ್ಕೋಪ್
ಅಮೆರಿಕದ ಸಿಯಾಟಲ್ ನ ಲೇಕ್ ಸೈಡ್ ಶಾಲೆಯ ವಿದ್ಯಾರ್ಥಿಯಾಗಿರುವ ಭಾರತೀಯ ಮೂಲದ ಸುಮನ್ ಮುಲುಮುಡಿ ಈ ಹೊಸ ಸಾಧನವನ್ನು ಆವಿಷ್ಕರಿಸಿದ್ದಲ್ಲದೆ ಸ್ಟ್ರಾಟೋ ಸೈಟಿಂಫಿಕ್ ಐಎನ್ ಸಿ ಹೆಸರಿನ ಕಂಪನಿ ತೆರೆದು ಅದಕ್ಕೆ ಸಿಇಒ ಆಗಿ ಕಾರ್ಯ ನಿರ್ವಹಿಸುತ್ತಿದ್ದಾನೆ.
ಟರ್ಕಿಯ ಕಲ್ಲಿದ್ದಲು ಗಣಿಯಲ್ಲಿ ಸ್ಫೋಟ
ಟರ್ಕಿಯ ಕಲ್ಲಿದ್ದಲು ಗಣಿಯಲ್ಲಿ ಸ್ಫೋಟ ಸುಮಾರು 274 ಜನ ಸಾವು, ನೂರಾರು ಮಂದಿಗೆ ಗಾಯ. ಗಣಿಯಲ್ಲಿ ಇನ್ನೂ ಅನೇಕರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
ಥಾಮಸ್, ಉಬೇರ್ ಕಪ್ ಗಾಗಿ ತಂಡ
ನವದೆಹಲಿ: ಸೈನಾ ನೆಹ್ವಾಲ್, ಪಿವಿ ಸಿಂಧು, ಜ್ವಾಲ ಗುಟ್ಟಾ, ಅಶ್ವಿನಿ ಪೊನ್ನಪ್ಪ ಹಾಗೂ ಇನ್ನಿತರ ಬಾಡ್ಮಿಂಟನ್ ಪಟುಗಳು ಥಾಮಸ್ ಕಪ್ ಹಾಗೂ ಉಬೇರ್ ಕಪ್ ಗಾಗಿ ತೆರಳುವ ಮುನ್ನ ನಡೆಸಿದ ಸುದ್ದಿಗೋಷ್ಠಿಯಲ್ಲಿ PTI Photo by Atul Yadav
ಮದುರೈನಲ್ಲಿ ಕಳಂಗರ್ ಸ್ವಾಮಿ ರಥ
ಮದುರೈ: ಕಳಂಗರ್ ಸ್ವಾಮಿಯ ಉತ್ಸವ ಮೂರ್ತಿಯನ್ನು ವೈಗೈ ನದಿ ನೀರಿನಲ್ಲಿ ಅಭಿಷೇಕ ಮಾಡಿಸಿ ಮೆರವಣಿಗೆ ಹೊತ್ತು ಕರೆತರುತ್ತಿರುವ ಭಕ್ತಾದಿಗಳು, ಚಿತ್ರಾ ಹಬ್ಬದ ಕೊನೆ ದಿನ ದೃಶ್ಯ.PTI Photo
ಕಾಶ್ಮೀರದಲ್ಲಿ ಹಿಮಚ್ಛಾದಿತ ರಸ್ತೆ
ಅನಂತ್ ನಾಗ್ ಹಾಗೂ ಕಿಶ್ತಾರ್ ರಸ್ತೆಯನ್ನು ಸಮಗೊಳಿಸುತ್ತಿರುವ ಸಿಬ್ಬಂದಿಗಳುPTI Photo
ಹೈದರಾಬಾದಿನ ಹಿಂಸಾಚಾರ ನಂತರ
ಹೈದರಾಬಾದಿನ ಹಿಂಸಾಚಾರ ನಂತರದ ದೃಶ್ಯ. ಕಿಶನ್ ಬಾಗ್ ಪ್ರದೇಶದಲ್ಲಿ ಮೋಟರ್ ಸೈಕಲ್ ಭಸ್ಮವಾಗಿದೆ. ಗಲಭೆಯಿಂದ ಇಬ್ಬರು ಸಾವನ್ನಪ್ಪಿದ್ದು, 15ಕ್ಕೂ ಅಧಿಕ ಮಂದಿಗೆ ಗಾಯಗಳಾಗಿವೆ.
ಸ್ಯಾನ್ ಡಿಯಾಗೋ ನಲ್ಲಿ ಫೈರ್ ಫೈಟರ್ಸ್
ಸ್ಯಾನ್ ಡಿಯಾಗೋ ನಲ್ಲಿ ಫೈರ್ ಫೈಟರ್ಸ್ ಗಳು ಹೆಲಿಕಾಪ್ಟರ್ ಬಳಸಿಕೊಂಡು ಕಾಡ್ಗಿಚ್ಚು ನಂದಿಸುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ.