ಕಾಣೆಯಾಗಿದ್ದ ಯುವಕನ ಅವಶೇಷಗಳು ಮೃಗಾಲಯದ ಸಿಂಹದ ಬೋನಿನಲ್ಲಿ ಪತ್ತೆ
ಲಾಹೋರ್, ಫೆಬ್ರವರಿ 27: ಹಲವು ದಿನಗಳ ಹಿಂದೆ ಕಾಣಿಯಾಗಿದ್ದ ಯುವಕನ ಅವಶೇಷಗಳು ಮೃಗಾಲಯದ ಸಿಂಹದ ಬೋನಿನಲ್ಲಿ ಪತ್ತೆಯಾಗಿದೆ.
Recommended Video
ಯುವಕನನ್ನು ಕೊಂದು ಬೋನಿನೊಳಗೆ ಎಳೆದೊಯ್ದು ತಿಂದಿದೆ. ಸೋಮವಾರದಂದು ಮನೆಯಿಂದ ಹೊರನಡೆದ ಬಿಲಾಲ್ (18) ನೇರವಾಗಿ ಸಫಾರಿ ಪಾರ್ಕ್ನತ್ತ ಹೋಗಿದ್ದ.
ಬೇಲಿ ಹಾರಿ ಸಫಾರಿ ಪಾರ್ಕ್ನೊಳಗೆ ಹೋದ ಯುವಕ ಅಲ್ಲಿದ್ದ ಹುಲ್ಲನ್ನು ಕೊಯ್ಯಲು ಮುಂದಾಗಿದ್ದಾನೆ. ಅದೇ ಸಮಯಕ್ಕೆ ಮೃಗಾಲಯದ ಸಿಂಹವು ಆತನ ಮೇಲೆ ಎಗರಿದ್ದು, ಯುವಕನನ್ನು ಕೊಂದಿರಬಹುದು ಎಂದು ಅಂದಾಜಿಸಲಾಗಿದೆ.
ಘಟನೆ ನಡೆದ ಸ್ಥಳದಲ್ಲಿ ಕುಡಗೋಲು ಮತ್ತು ಹುಲ್ಲು ಸಹ ಇರುವುದು ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಲಾಹೋರ್ನ ಸಫಾರಿ ಪಾರ್ಕ್ನಲ್ಲಿ ಈ ಘಟನೆ ನಡೆದಿದೆ. ಬಿಲಾಲ್ನ ಕುಟುಂಬಸ್ಥರು ಆತನಿಗಾಗಿ ಸತತ ಹುಡುಕಾಟ ನಡೆಸಿದ್ದಾರೆ. ಆತನ ಚಿಕ್ಕಪ್ಪ ಒಬ್ಬರು ಮೃಗಾಲಯದದಲ್ಲಿ ಕೆಲಸ ಮಾಡುತ್ತಿದ್ದರಿಂದಾಗಿ ಅವರು ಮೃಗಾಲಯದ ಆಡಳಿತವನ್ನೂ ಸಹ ಸಂಪರ್ಕಿಸಿದ್ದಾರೆ.
ಅವರ ಮನವಿ ಮೇರೆಗೆ ಮೃಗಾಲಯದಲ್ಲಿ ಪರಿಶೀಲಿಸಿದಾಗ ಸಿಂಹದ ಬೋನಿನೊಳಗೆ ಯುವಕನ ಅವಶೇಷಗಳಿರುವುದು ಪತ್ತೆಯಾಗಿದೆ.