Breaking: ಶ್ರೀಲಂಕಾ ಅಧ್ಯಕ್ಷೀಯ ಚುನಾವಣೆ, ಬಿಗಿ ಭದ್ರತೆ
ಕೊಲಂಬೋ, ಜುಲೈ 20: ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು, ಜನರ ಪ್ರತಿಭಟನೆಗೆ ಬೆದರಿ ಅಧ್ಯಕ್ಷ ಗೊಟಬಯ ರಾಜಪಕ್ಸ ರಾಜೀನಾಮೆ ನೀಡಿದ್ದರು. ನೂತನ ಅಧ್ಯಕ್ಷರ ಆಯ್ಕೆಗೆ ಬುಧವಾರ ಚುನಾವಣೆ ನಡೆಯುತ್ತಿದೆ.
ಈ ಹಿನ್ನೆಲೆಯಲ್ಲಿ ಸಂಸತ್ತಿನ ಸಂಕೀರ್ಣದ ಸುತ್ತಮುತ್ತಲೂ ಬಿಗ್ರಿ ಭದ್ರತೆ ನೀಡಲಾಗಿದೆ. ಈಗಾಗಲೇ ಜನರು ಬೀದಿಗಿಳಿದಿದ್ದರು. ಇದರಿಂದ ಅಧ್ಯಕ್ಷ ಗೊಟಬಯ ರಾಜಪಕ್ಸ ಅವರೇ ದೇಶ ಬಿಟ್ಟು ಪಲಾಯನ ಮಾಡಿದ್ದರು. ಶ್ರೀಲಂಕಾದಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದರಿಂದ ಅಧ್ಯಕ್ಷರು ಸಿಂಗಾಪುರಕ್ಕೆ ಪಲಾಯನ ಮಾಡಿದ್ದರು.
ಇದೀಗ ತೆರವಾದ ಸ್ಥಾನಕ್ಕೆ ಚುನಾವಣೆ ನಡೆದಿದ್ದು, ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಈ ಕಾರಣದಿಂದ ಸುಸೂತ್ರವಾಗಿ ಮತದಾನ ನಡೆಸಲು ಹಾಗೂ ಯಾವುದೇ ಅಹಿತಕರ ಘಟನೆ ನಡೆಯದಂತೆ ಹೆಚ್ಚುವರಿ ಪೊಲೀಸ್, ಸೇನೆ ಇನ್ನಿತರ ಸಿಬ್ಬಂದಿ ನಿಯೋಜಿಸಿ ಭದ್ರತೆ ಒದಗಿಸಲಾಗಿದೆ.
ಶ್ರೀಲಂಕಾದ ಆಡಳಿತ ಸುಗಮ ಯಂತ್ರಕ್ಕೆ ಈ ಚುನಾವಣೆ ನಿರ್ಣಾಯಕವಾಗಿದೆ. ಶ್ರೀಲಂಕಾ ಜನರು ಆರ್ಥಿಕ ಬಿಕ್ಕಟ್ಟಿನ ವಿರುದ್ಧ ಆಕ್ರೋಶಗೊಂಡು ಬೀದಿಗಿಳಿದು ಪ್ರತಿಭಟನೆ ಮಾಡಿದ್ದರು. ಅಧ್ಯಕ್ಷರ ಮನೆಗೂ ಮುತ್ತಿಗೆ ಹಾಕಿದ್ದರು. ಇದಾದ ಬಳಿಕ ಗೊಟಬಯ ಪಲಾಯನ ಮಾಡಿದ್ದರು.
ಇದೀಗ ರಾನಿಲ್ ವಿಕ್ರಮಸಿಂಘೆ ಹಂಗಾಮಿ ಅಧ್ಯಕ್ಷರಾಗಿದ್ದಾರೆ. ಬುಧವಾರ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿದ್ದು, ಇಲ್ಲಿ ಶ್ರೀಲಂಕಾ ಪೊದುಜನ ಪಕ್ಷದ ಬಂಡಾಯ ನಾಯಕ ಡಲ್ಲಾಸ್ ಅಲಹಪ್ಪೆ ರುಮ ಮತ್ತು ಎಡಪಕ್ಷವಾದ ಜನತಾ ವಿಮುಕ್ತಿ ಪೆರಮುನ ನಾಯಕ ಅನುರ ಕುಮಾರ ಡಿಸಾನಾಯಕೆ ನಡುವೆ ತೀವ್ರ ಪೈಪೋಟಿ ನಡೆದಿದೆ.
ಶ್ರೀಲಂಕಾ
ಅಧ್ಯಕ್ಷ
ರಾನಿಲ್
ವಿಕ್ರಮ
ಸಿಂಘೆ
ಅಂತಿಮವಾಗಿ
ಶ್ರೀಲಂಕಾ
ಚುನಾವಣೆಯಲ್ಲಿ
ಬುಧವಾರ
ರಾನಿಲ್
ವಿಕ್ರಮ
ಸಿಂಘೆ
ಅವರು
ಆಯ್ಕೆಯಾಗಿದ್ದಾರೆ.
ಈ
ಮೂಲಕ
ತೆರವಾಗಿದ್ದ
ಅಧ್ಯಕ್ಷ
ಸ್ಥಾನವನ್ನು
ತುಂಬಿದ್ದಾರೆ
ಎಂದು
ತಿಳಿದು
ಬಂದಿದೆ.
Recommended Video
ಈ ಹಿಂದೆ ಪ್ರತಿಭಟನಾಕಾರರು ರಾನಿಲ್ ಅವರ ಮನೆ ಮೇಲೆ ದಾಳಿ ನಡೆಸಿ ಬೆಂಕಿದ್ದ ಹಚ್ಚಿದ್ದರು. ಇದೀಗಿ ಅವರೆ ಆಯ್ಕೆ ಯಾಗಿದ್ದಾರೆ. ಮತ್ತೊಮ್ಮೆ ಆಕ್ರೋಶ ಭುಗಿಲೇಳು ಸಾಧ್ಯತೆ ಇದೆ. ಆರು ಭಾರಿ ಪ್ರಧಾನಿಯಾಗಿ ಸೇವೆ ಸಲ್ಲಿರುವ 73ವರ್ಷದ ವಿಕ್ರಮಸಿಂಘೆ ಅವರು ಒಟ್ಟು 134ಮತಗಳನ್ನು ಪಡೆದಿದ್ದಾರೆ. ಭಿನ್ನ ಗುಂಪಿನ ನಾಯಕ 82ಮತ ಹಾಗೂ ಅರುಣಾ ಕುಮಾರ ಡಿಸ್ಸಾನಾಯಕೆ ಅವರು ಚುಣಾವಣೆಯಲ್ಲಿ ಮೂರು ಮತಗಳನ್ನು ಮಾತ್ರ ಪಡೆದು ಹೀನಾಯ ಸೋಲು ಅನುಭವಿಸಿದ್ದಾರೆ ಎನ್ನಲಾಗಿದೆ.