ಪಾಕಿಸ್ತಾನ ಮುಟ್ಟಿನೋಡಿಕೊಳ್ಳುವಂತೆ ಮಾತಿನ ಛಾಟಿ ಬೀಸಿದ ಶಶಿ ತರೂರ್
ಬೆಲ್ಗ್ರೇಡ್ (ಸೆರ್ಬಿಯಾ), ಅಕ್ಟೋಬರ್ 17: ಅಂತರ್ರಾಷ್ಟ್ರೀಯ ವೇದಿಕೆಯಲ್ಲಿ ಪಾಕಿಸ್ತಾನದ ಮಾನ ತೆಗೆದಿದ್ದಾರೆ ಕಾಂಗ್ರೆಸ್ ಹಿರಿಯ ಸಂಸದ ಮತ್ತು ಇತಿಹಾಸಜ್ಞ ಶಶಿ ತರೂರ್.
ಸೆರ್ಬಿಯಾದಲ್ಲಿ ನಡೆದ ವಿಶ್ವಸಂಸ್ಥೆ ವ್ಯಾವಹಾರಿಕ ಸಭೆಯಲ್ಲಿ ಭಾರತದ ಪ್ರತಿನಿಧಿಯಾಗಿ ಪಾಲ್ಗೊಂಡಿದ್ದ ಶಶಿ ತರೂರ್ ಅವರು, ಜಮ್ಮು ಕಾಶ್ಮೀರದ ವಿಚಾರವಾಗಿ ಪಾಕಿಸ್ತಾನದ ಬಣ್ಣ ಬಯಲು ಮಾಡಿದರು. ಅವರ ನಿಖರ, ಮಾಹಿತಿ ತುಂಬಿದ ಮಾತುಗಳಿಗೆ ವಿಶ್ವ ವೇದಿಕೆ ತಲೆದೂಗಿತು.
ಅಯೋಧ್ಯಾ ಅಂತಿಮ ತೀರ್ಪು: ಹಿಂದೂ, ಮುಸ್ಲಿಮರಿಗೆ ಒಪ್ಪಿಗೆಯಾಗದಿದ್ದರೆ...?
ಪ್ರಖರ ಮಾತು ಮತ್ತು ವಿಭಿನ್ನ ಚಿಂತನೆಗಳ ಶಶಿ ತರೂರ್, ಸೆರ್ಬಿಯಾದಲ್ಲಿ ವಿಶ್ವಸಂಸ್ಥೆ ವ್ಯಾವಹಾರಿಕ ಸಭೆಯಲ್ಲಿ ಮಾತನಾಡಿ, 'ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದನೆ ಕೃತ್ಯಗಳಿಗೆ ಪಾಕಿಸ್ತಾನ ನೇರ ಹೊಣೆ' ಎಂದು ಹೇಳಿದರು.
ಸಭೆಯ ಬಗ್ಗೆ ಕೆಲವು ಮಾಹಿತಿ ಚಿತ್ರ, ವಿಡಿಯೋಗಳನ್ನು ಶಶಿ ತರೂರ್ ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದು, ಐಎಫ್ಎಸ್ ಅಧಿಕಾರಿಗಳು, ಸಭೆಯಲ್ಲಿ ನಡೆದ ಚರ್ಚೆಗಳ ಬಗ್ಗೆಯೂ ಚುಟುಕು ಮಾಹಿತಿ ನೀಡಿದ್ದಾರೆ.
ಜಾಗತಿಕ ಹಸಿವು ಸೂಚ್ಯಂಕ ಪಟ್ಟಿ: ಪಾಕಿಸ್ತಾನಕ್ಕಿಂತ ಕೆಳಗಿಳಿದ ಭಾರತ
ಶಶಿ ತರೂರ್ ಅವರು ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಭಾರತದ ಘನತೆ ಎತ್ತಿ ಹಿಡಿಯುವ ಕಾರ್ಯವನ್ನು ಹಿಂದಿನಿಂದಲೂ ಮಾಡುತ್ತಲೇ ಬಂದಿದ್ದಾರೆ. ತಮಗೆ ಸಿಕ್ಕ ಅವಕಾಶದಲ್ಲಿ ಮಾಹಿತಿಪೂರ್ಣ ವಾದ ಮಂಡಿಸುವುದು ಅವರ ವೈಶಿಷ್ಟ್ಯ.