ಉಗ್ರರ ಭೀತಿ ನಡುವೆಯೂ ಪಾಕ್ ನೆಲಕ್ಕೆ ಕಾಲಿಟ್ಟ ರಾಜನಾಥ್
ಇಸ್ಲಾಮಾಬಾದ್, ಆಗಸ್ಟ್ 03: ಎರಡು ದಿನಗಳ ಸಾರ್ಕ್ ಶೃಂಗ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಇಸ್ಲಾಮಾಬಾದಿಗೆ ಬುಧವಾರದಂದು ಭಾರತದ ಗೃಹ ಸಚಿವ ರಾಜನಾಥ್ ಸಿಂಗ್ ಆಗಮಿಸಿದ್ದಾರೆ. ರಾಜನಾಥ್ ಆಗಮನವನ್ನು ಖಂಡಿಸಿ ವಿಮಾನ ನಿಲ್ದಾಣದಲ್ಲಿ ಧಾರ್ಮಿಕ ಹಾಗೂ ಉಗ್ರ ಸಂಘಟನೆ ಜತೆ ಗುರುತಿಸಿಕೊಂಡಿರುವ 2 ಸಾವಿರಕ್ಕೂ ಅಧಿಕ ಮಂದಿ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.
ಹಿಜ್ಬುಲ್
ಸಂಘಟನೆ
ಮುಖ್ಯಸ್ಥ
ಸೈಯದ್
ಸಲಾಹುದ್ದೀನ್
ನೇತೃತ್ವದಲ್ಲಿ
ಭಾರಿ
ಪ್ರತಿಭಟನೆ
ನಡೆಸಲಾಯಿತು.
ಯುನೈಟೆಡ್
ಜಿಹಾದ್
ಕೌನ್ಸಿಲ್
ಹಾಗೂ
ಇನ್ನೂ
ಅನೇಕ
ಗುಂಪುಗಳು
ವಿಮಾನ
ನಿಲ್ದಾಣದ
ಬಳಿ
ಪ್ರತಿಭಟನೆಯಲ್ಲಿ
ಪಾಲ್ಗೊಂಡಿದ್ದವು.
ಇನ್ನೊಂದೆಡೆ
ಇಸ್ಲಾಮಾಬಾದಿನ
ನ್ಯಾಷನಲ್
ಪ್ರೆಸ್
ಕ್ಲಬ್
ಬಳಿ
ಯಾಸಿನ್
ಮಲೀಕ್
ಪತ್ನಿ
ಮಿಶಾಲ್
ಮಲಿಕ್
ನೇತೃತ್ವದಲ್ಲಿ
ಪ್ರತಿಭಟನೆ
ನಡೆಸಲಾಯಿತು.
ಮುಂಬೈ ದಾಳಿ ರೂವಾರಿ ಹಫೀಜ್ ಸಯೀದ್ ಪುತ್ರ ತಲ್ಹಾ ಸಯೀದ್ ನೇತೃತ್ವದ ತಂಡ ಎಲ್ ಒಸಿ ಬಳಿ ಇರುವ ಚಕೋತಿ(ಪಾಕ್ ಆಕ್ರಮಿತ ಕಾಶ್ಮೀರದ ಪ್ರದೇಶ)ಯಲ್ಲಿ ಪ್ರತಿಭಟನೆ ನಡೆಸಿದರು.
ಆದರೆ, ಉಗ್ರರ ಬೆದರಿಕೆ, ವ್ಯಾಪಕ ವಿರೋಧದ ನಡುವೆಯೂ ಎರಡು ದಿನಗಳ 2016ರ ಸಾರ್ಕ್ ಶೃಂಗ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಗೃಹ ಸಚಿವ ರಾಜನಾಥ್ ಸಿಂಗ್ ಅವರು ಬುಧವಾರ ಸಂಜೆ ಪಾಕಿಸ್ತಾನದ ಇಸ್ಲಾಮಾಬಾದ್ಗೆ ಆಗಮಿಸಿದರು.
ಶೃಂಗ ಸಭೆಯಲ್ಲಿ ಭಾರತದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಭಯೋತ್ಪಾದಕ ಗುಂಪುಗಳಿಗೆ ಪಾಕಿಸ್ತಾನ ಬೆಂಬಲ ನೀಡುವ ವಿಷಯವನ್ನು ಪ್ರಸ್ತಾಪಿಸುವ ಸಾಧ್ಯತೆಯಿದೆ. ಜೊತೆಗೆ ಭಾರತದ ಮೋಸ್ಟ್ ವಾಂಟೆಂಡ್ ಭಯೋತ್ಪಾದಕ ದಾವೂದ್ ಇಬ್ರಾಹಿಂ ವಿಚಾರಣೆಗೆ ಭಾರತಕ್ಕೆ ಕಳಿಸಲು ಕೋರುವ ನಿರೀಕ್ಷೆಯಿದೆ.
ಅಲ್ಲದೆ, ಗಡಿಯಾಚೆಯಿಂದ ನಡೆಯುತ್ತಿರುವ ಭಯೋತ್ಪಾದನೆಗೆ ಸಂಬಂಧಿಸಿದ ವಿಚಾರಗಳನ್ನು ರಾಜನಾಥ್ ಸಿಂಗ್ ಅವರು ಸಾರ್ಕ್ ಒಳಾಡಳಿತ/ ಗೃಹ ಸಚಿವರ ಸಮ್ಮೇಳನದಲ್ಲಿ ಗುರುವಾರ ಪ್ರಸ್ತಾಪಿಸುವ ನಿರೀಕ್ಷೆ ಇದೆ. ಇಸ್ಲಾಮಾಬಾದ್ನಿಂದ ವಾಪಸ್ ಹೊರಡುವ ಮುನ್ನ ಅವರು South Asian Association for Regional Cooperationಸಾರ್ಕ್ ಗೃಹ ಸಚಿವರ ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ.