ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಳಚಿತು ಪಾಕ್ ಮುಖವಾಡ, ಉಗ್ರರ ಬಗ್ಗೆ ಮಾಜಿ ಸಚಿವ ಬಾಯ್ಬಿಟ್ಟ ಸತ್ಯ

|
Google Oneindia Kannada News

ಇಸ್ಲಾಮಾಬಾದ್ (ಪಾಕಿಸ್ತಾನ), ಮಾರ್ಚ್ 1: ಪಾಕಿಸ್ತಾನದ ಪ್ರಧಾನಿ ತಮ್ಮ 'ನಯಾ ಪಾಕಿಸ್ತಾನ್' ಆಲೋಚನೆ ಬಗ್ಗೆ ಹೇಳುತ್ತಲೇ ಇದ್ದಾರೆ. ಆದರೆ ಪಾಕಿಸ್ತಾನ ಅಂದರೆ ಅದರ ನೀತಿಯಲ್ಲೇ ಭಯೋತ್ಪಾದನೆ ಎಂಬುದು ಸೇರಿಹೋಗಿದೆ ಎಂಬ ಸಂಗತಿ ಮತ್ತೊಮ್ಮೆ ಬಯಲಾಗಿದೆ.

ಪಾಕಿಸ್ತಾನದ ಮಾಜಿ ವಿದೇಶಾಂಗ ಖಾತೆ ಸಚಿವ ಖ್ವಾಜಾ ಅಸೀಫ್ ಸಂಸತ್ ನಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. ಪುಲ್ವಾಮಾದಲ್ಲಿ ನಡೆದ ದಾಳಿ ಹಾಗೂ ಅದರಲ್ಲಿ ಸಿಆರ್ ಪಿಎಫ್ ನ ನಲವತ್ತು ಸಿಬ್ಬಂದಿ ಹುತಾತ್ಮರಾಗಿದ್ದು ಸೇರಿದಂತೆ ಇತರ ಭಯೋತ್ಪಾದನಾ ಕೃತ್ಯಗಳನ್ನು ಸಹ ಸಮರ್ಥಿಸಿಕೊಂಡಿದ್ದಾರೆ.

ಮಸೂದ್ ಅಝರ್ ನಮ್ಮಲ್ಲೇ ಇದ್ದಾನೆ:ಸತ್ಯ ಬಾಯ್ಬಿಟ್ಟ ಪಾಕಿಸ್ತಾನಮಸೂದ್ ಅಝರ್ ನಮ್ಮಲ್ಲೇ ಇದ್ದಾನೆ:ಸತ್ಯ ಬಾಯ್ಬಿಟ್ಟ ಪಾಕಿಸ್ತಾನ

ಖ್ವಾಜಾ ಅಸೀಫ್ ಮಾತನಾಡಿ, ಜೈಶ್-ಇ-ಮೊಹ್ಮದ್ ನಿಂದ ಆಗಿರುವುದು ದ್ವೇಷ ತೀರಿಸಿಕೊಳ್ಳುವ ಕೃತ್ಯ. ಇದು ಅವರ ಕಾನೂನುಬದ್ಧ ಹಕ್ಕು ಹಾಗೂ ಜನ್ಮಸಿದ್ಧ ಹಕ್ಕು. ನಾವು ಅವರನ್ನು ಬೆಂಬಲಿಸುತ್ತೇವೆ ಹಾಗೂ ಪರವಾಗಿ ನಿಲ್ಲುತ್ತೇವೆ ಎಂದು ಆತ ಹೇಳಿದ್ದಾರೆ.

Pulwama attack an act of revenge, it is a legitimate right and a birth-right

ಖ್ವಾಜಾ ಅಸೀಫ್ ಮಾಜಿ ಸಚಿವ. ಸದ್ಯಕ್ಕೆ ವಿದೇಶಾಂಗ ಸಚಿವ ಆಗಿರುವ ಮಹ್ಮದ್ ಖುರೇಷಿ ಮಾತನಾಡಿ, ಜೈಶ್-ಇ-ಮೊಹ್ಮದ್ ನ ಮುಖ್ಯಸ್ಥ ಮಸೂದ್ ಅಜರ್ ಪಾಕಿಸ್ತಾನದಲ್ಲೇ ಇದ್ದಾನೆ. ಅನಾರೋಗ್ಯದಿಂದ ಬಳಲುತ್ತಿರುವ ಆತನಿಗೆ ಮನೆಯಿಂದ ಆಚೆ ಬರಲು ಸಹ ಆಗುತ್ತಿಲ್ಲ ಎಂದು ಕೂಡ ಹೇಳಿದ್ದಾರೆ.

English summary
While making his address in the Pakistan assembly, Khawaja Asif spoke about the Jaish-e-Mohammed-backed Pulwama bomber, calling the attack an 'act of revenge', saying it is a legitimate right and a birth-right, and shockingly going on to add, "we support them and we advocate them".
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X