ಭಾರತ ಧ್ವಂಸಗೊಳಿಸಿದ ಜೈಷ್ ಉಗ್ರನೆಲೆಯ ಚಿತ್ರ ವೈರಲ್
Recommended Video
ಬಾಲಕೋಟ್, ಫೆಬ್ರವರಿ 27: ಭಾರತವು ಧ್ವಂಸಗೊಳಿಸಿದ ಪಾಕಿಸ್ತಾನದ ಬಾಲಕೋಟ್ ನಲ್ಲಿದ್ದ ಜೈಷ್ ಇ ಮೊಹಮ್ಮದ್ ಉಗ್ರನೆಲೆಯ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸರ್ಜಿಕಲ್ ಸ್ಟ್ರೈಕ್: ಸುಳ್ಳಿನ ಸರಮಾಲೆ ಕಟ್ಟಿ ಕೊನೆಗೆ ಸತ್ಯ ಒಪ್ಪಿಕೊಂಡ ಪಾಕ್
ಬಾಲಕೋಟ್ ನಲ್ಲಿದ್ದ ಜೈಷ್ ಇ ಮೊಹಮ್ಮದ್ ಉಗ್ರನೆಲೆಯನ್ನೇ ಗುರಿಯಾಗಿಸಿಕೊಂಡು ಫೆಬ್ರವರಿ 26 ರ ಬೆಳಿಗ್ಗೆ 3:30 ಕ್ಕೆ ಭಾರತ ವಾಯುಸೇನೆ ದಾಳಿ ನಡೆಸಿತ್ತು. ಜೈಷ್ ಉಗ್ರರ ಅಡಗುದಾಣದ ಮೇಲೆ ಭಾರತ ಬಾಂಬ್ ಸುರಿಮಳೆ ಸುರಿಸಿದ ಪರಿಣಾಮ ಸುಮಾರು 300 ಕ್ಕೂ ಹೆಚ್ಚು ಉಗ್ರರ ಹತ್ಯೆಯಾಗಿರಬಹುದು ಎಂದು ಅಂದಾಜಿಸಲಾಗಿದ್ದು, ಈ ಕುರಿತ ನಿಖರ ಮಾಹಿತಿ ಲಭ್ಯವಾಗಿಲ್ಲ.
ದಿನದ ಮುಖ್ಯ ಸುದ್ದಿ: ಭಾರತದ ಪ್ರತೀಕಾರ ಹೇಗಿತ್ತು? ಪಾಕ್ ಪ್ರತಿಕ್ರಿಯೆ ಹೇಗಿತ್ತು?
ನಿನ್ನೆಯೆಲ್ಲಾ ಘಟನೆ ನಡೆದಿದ್ದೇ ಸುಳ್ಳು ಎನ್ನುತ್ತಿದ್ದ ಪಾಕಿಸ್ತಾನ, ಭಾರತ ದಾಳಿ ನಡೆಸಿದಾಗ ಕತ್ತಲಾಗಿದ್ದರಿಂದ ನಮ್ಮ ವಾಯುಸೇನೆಗೆ ಪ್ರತಿದಾಳಿ ನಡೆಸಲು ಕಷ್ಟವಾಯಿತು ಎಂದಿದೆ. ಆ ಮೂಲಕ ದಾಳಿ ನಡೆದಿದ್ದು ಸತ್ಯ ಎಂಬುದನ್ನು ಒಪ್ಪಿಕೊಂಡಿದೆ.
'ಈಗ ನಿಮ್ಮ ಸರದಿ, ನಮ್ಮ ಅಚ್ಚರಿ ಎದುರಿಸಲು ಸಿದ್ಧರಾಗಿ' : ಪಾಕಿಸ್ತಾನ
ಫೆಬ್ರವರಿ 14 ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್ ಪಿಎಫ್ ಯೋಧರಿದ್ದ ವಾಹನದ ಮೇಲೆ ಜೈಷ್ ಉಗ್ರ ಆದಿಲ್ ದಾರ್ ನಡೆಸಿದ ಆತ್ಮಾಹುತಿ ಕಾರ್ ಬಾಂಬ್ ದಾಳಿಯಲ್ಲಿ ಭಾರತೀಯ ಸೇನೆಯ 44 ಸಿಆರ್ ಪಿಎಫ್ ಯೋಧರು ಹುತಾತ್ಮರಾಗಿದ್ದರು. ಈ ಘಟನೆ ನಡೆದ 12 ನೇ ದಿನಕ್ಕೆ ಭಾರತ ಪ್ರತೀಕಾರ ತೀರಿಸಿಕೊಂಡಿದೆ.