ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಮಾಧ್ಯಮಗಳನ್ನು ಕರೆದೊಯ್ದು 'ದಾಳಿ' ಪ್ರದೇಶಗಳನ್ನು ತೋರಿಸುತ್ತೇವೆ'

|
Google Oneindia Kannada News

Recommended Video

Surgical Strike 2: ಶಾ ಮಹ್ಮೂದ್ ಖುರೇಷಿ: ಮಾಧ್ಯಮಗಳನ್ನು ಕರೆದೊಯ್ದು 'ದಾಳಿ' ಪ್ರದೇಶಗಳನ್ನು ತೋರಿಸುತ್ತೇವೆ

ಭಾರತ ವಾಯುಸೇನೆ ದಾಳಿ ನಡೆಸಿದ ಜಾಗಗಳು ಇಂಥವು. ಅಲ್ಲಿ ಭಾರೀ ಸಂಖ್ಯೆಯಲ್ಲಿ ಉಗ್ರಗಾಮಿಗಳು ಹತರಾಗಿದ್ದಾರೆ ಎಂದು ಭಾರತದ ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಅವರು ಮಂಗಳವಾರ ನವದೆಹಲಿಯಲ್ಲಿ ಪತ್ರಿಕಾಗೋಷ್ಠಿ ಕರೆದು, ತಿಳಿಸಿದ್ದಾರೆ. ಪುಲ್ವಾಮಾ ಉಗ್ರ ದಾಳಿಯ ಹೊಣೆ ಹೊತ್ತ ಜೈಶ್ ಇ ಮೊಹ್ಮದ್ ನ ಮುಖ್ಯ ನೆಲೆ ಬಲಾಕೋಟ್ ನಲ್ಲಿ ದಾಳಿ ನಡೆಸಿದ ಬಗ್ಗೆ ಭಾರತ ಸ್ಪಷ್ಟ ಮಾತುಗಳಲ್ಲಿ ತಿಳಿಸಿದೆ.

ಭಾರತದ ಆಕ್ರಮಣಕ್ಕೆ ಪ್ರತಿದಾಳಿ ಪಾಕಿಸ್ತಾನದ ಹಕ್ಕು: ಖುರೇಷಿಭಾರತದ ಆಕ್ರಮಣಕ್ಕೆ ಪ್ರತಿದಾಳಿ ಪಾಕಿಸ್ತಾನದ ಹಕ್ಕು: ಖುರೇಷಿ

ಆದರೆ, ಯಾವುದೇ ದಾಳಿಯ ಆಗಿಲ್ಲ. ಗಡಿ ನಿಯಂತ್ರಣ ರೇಖೆಯನ್ನು ದಾಟಿ ಬಂದಿದ್ದ ಭಾರತೀಯ ಯುದ್ಧ ವಿಮಾನಗಳನ್ನು ಪಾಕಿಸ್ತಾನದ ವಾಯು ಸೇನೆಯಿಂದ ಹಿಮ್ಮೆಟ್ಟಿಸಲಾಗಿದೆ ಎಂದು ಅಲ್ಲಿನ ಸೇನಾ ವಕ್ತಾರ ತಿಳಿಸಿದ್ದಾರೆ. ಒಂದು ಕಡೆ ಭಾರತವು ದಾಳಿ ಮಾಡಿರುವುದನ್ನು ಖಾತ್ರಿ ಪಡಿಸುತ್ತಿದ್ದರೆ, ಮತ್ತೊಂದು ಕಡೆ ಪಾಕ್ ಸೇನೆ ನಿರಾಕರಿಸಿದೆ.

Mahammad Qureshi

ಇನ್ನು ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮಹ್ಮದ್ ಖುರೇಷಿ ಮಾತು ಮತ್ತೂ ಆಸಕ್ತಿಕರವಾಗಿದೆ. ಅ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲೂ ಅದನ್ನು ಹಾಕಿದ್ದಾರೆ. ಎಲ್ಲೆಲ್ಲಿ ದಾಳಿ ನಡೆದಿದೆ ಅಂತ ಹೇಳಲಾಗುತ್ತಿದೆಯೋ ಅಲ್ಲೆಲ್ಲ ಅಂತರರಾಷ್ಟ್ರೀಯ ಮಾಧ್ಯಮಗಳನ್ನು ಕರೆದೊಯ್ಯುತ್ತೇವೆ. ಅದಕ್ಕಾಗಿ ಹೆಲಿಕಾಪ್ಟರ್ ಕೂಡ ಸಿದ್ಧವಿದೆ. ಆದರೆ ಈಗ ಹವಾಮಾನ ಚೆನ್ನಾಗಿಲ್ಲ. ಆದ್ದರಿಂದ ಯಾವಾಗ ಹವಾಮಾನ ಸರಿಹೋಗುವುದೋ ಆಮೇಲೆ ಕರೆದೊಯ್ಯುತ್ತೇವೆ ಎಂದು ಹೇಳಿದ್ದಾರೆ.

English summary
Pakistan Foreign Minister Shah Mahmood Qureshi​ said, Pakistan will take international media to the area of strikes, helicopters are being readied, right now weather is bad, will fly when weather permits.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X