ಭಾರತ ಒಪ್ಪಿದರೆ ಮಧ್ಯಸ್ಥಿಕೆಯಿಂದ ಕಾಶ್ಮೀರ ಸಮಸ್ಯೆ ನಿವಾರಣೆ ಸಾಧ್ಯ ಎಂದ ಪಾಕ್
Recommended Video
ಶ್ರೀನಗರ, ಆಗಸ್ಟ್ 22: ಜಮ್ಮು ಮತ್ತು ಕಾಶ್ಮೀರ ವಿಚಾರಕ್ಕೆ ಸಂಬಂಧಿಸಿದಂತೆ ಹಲವು ರಾಷ್ಟ್ರಗಳು ಮಧ್ಯಸ್ಥಿಕೆ ವಹಿಸಲು ತಯಾರಿವೆ ಆದರೆ ಭಾರತ ಒಪ್ಪಬೇಕು ಎಂದು ಪಾಕಿಸ್ತಾನ ಹೇಳಿದೆ.
ಪರಿಚ್ಛೇದ 370 ರದ್ದುಗೊಳಿಸಿದ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ಕೂಡ ಹಿಂಪಡೆಯಲಾಗಿದೆ ಇದೇ ಕಾರಣ ಪಾಕಿಸ್ತಾನ ಹಾಗೂ ಭಾರತದ ನಡುವೆ ದೊಡ್ಡ ಕಂದಕವನ್ನೇ ನಿರ್ಮಾಣ ಮಾಡಿದೆ. ಜಮ್ಮು ಮತ್ತು ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿದೆ. ವಿಧಾನಸಭೆಯೂ ಇರಲಿದೆ.
ಜಮ್ಮು ಮತ್ತು ಕಾಶ್ಮೀರ ಕುರಿತು ಚುನಾವಣಾ ಆಯೋಗದ ಮಹತ್ವದ ಚರ್ಚೆ
ಆದರೆ ಇದುವರೆಗೂ ಯಾವ ರಾಷ್ಟ್ರಕ್ಕೂ ಈ ವಿಚಾರ ಕುರಿತಾಗಿ ಮಧ್ಯಸ್ಥಿಕೆವಹಿಸಲು ಅನುವು ಮಾಡಿಕೊಟ್ಟಿಲ್ಲ. ಚೀನಾವು ಪಾಕಿಸ್ತಾನಕ್ಕೆ ಬೆಂಬಲ ನೀಡಿದರೆ. ಬಾಂಗ್ಲಾದೇಶ ಇನ್ನಿತರೆ ರಾಷ್ಟ್ರಗಳು ಭಾರತವನ್ನು ಬೆಂಬಲಿಸಿವೆ.
ಡೊನಾಲ್ಡ್ ಟ್ರಂಪ್ ಕೂಡ ಎರಡೂ ರಾಷ್ಟ್ರದ ಪ್ರಧಾನಿ ಜೊತೆ ಫೋನಿನಲ್ಲಿ ಚರ್ಚೆ ನಡೆಸಿದ್ದಾರೆ. ಆದರೆ ಮಧ್ಯಸ್ಥಿಕೆಗೆ ಎರಡೂ ರಾಷ್ಟ್ರಗಳು ಒಪ್ಪಿರಲಿಲ್ಲ. ಇದೀಗ ಪಾಕಿಸ್ತಾನವು ಮಗ್ಗಲು ಬದಲಿಸಿದೆ. ಭಾರತ ಒಪ್ಪಿದರೆ ಬೇರೆ ರಾಷ್ಟ್ರದ ಮಧ್ಯಸ್ಥಿಕೆಯಲ್ಲಿ ಕಾಶ್ಮೀರ ಸಮಸ್ಯೆ ಬಗೆಹರಿಸಿಕೊಳ್ಳಬಹುದು ಎಂದು ಹೇಳುತ್ತಿದೆ. ಇದೀಗ ಜಮ್ಮು ಕಾಶ್ಮೀರ ಸಹಜ ಸ್ಥಿತಿಯತ್ತ ಮರಳುತ್ತಿದೆ