ಪಾಕ್ ಪಾಲಿಗೆ ಉಗ್ರ ಬುರ್ಹಾನ್ ವಾನಿ ಹೀರೋನಂತೆ! ಅಂಚೆ ಚೀಟಿಯಲ್ಲೂ ಅವನೇ!
ಇಸ್ಲಾಮಾಬಾದ್, ಸೆಪ್ಟೆಂಬರ್ 21: ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಮುಖ್ಯಸ್ಥ ಬುರ್ಹಾನ್ ವಾನಿಯನ್ನು ಸ್ವಾತಂತ್ರ್ಯ ಹೋರಾಟಗಾರ ಎಂದು ಕರೆಯುವ ಮೂಲಕ ಪಾಕಿಸ್ತಾನ ಮತ್ತೊಂದು ವಿವಾದಕ್ಕೆ ನಾಂದಿ ಹಾಡಿದೆ.
ಅಷ್ಟೇ ಅಲ್ಲ, ಬುರ್ಹಾನ್ ವಾನಿ ಸ್ಮರಣಾರ್ಥ ಅಂಚೆ ಚೀಟಿಯನ್ನು ಪಾಕಿಸ್ಥಾನ ಅಂಚೆ ಇಲಾಖೆ ಬಿಡುಗಡೆ ಮಾಡಿದ್ದು, ಈ ಅಂಚೆ ಚೀಟಿಗಳು ಬುರ್ಹಾನ್ ಭಾವಚಿತ್ರವನ್ನು ಹೊಂದಿವೆ!
ಕಾಶ್ಮೀರದ ಪ್ರತ್ಯೇಕತಾವಾದಿಗಳಿಗೆ 800 ಕೋಟಿ ರು ಸುಪಾರಿ!
'ಬುರ್ಹಾನ್ ವಾನಿ ಭಾರತೀಯ ಸೇನೆಯ ದೌರ್ಜನ್ಯಕ್ಕೆ ಬಲಿಯಾದ ಸಂತ್ರಪ್ತ. ಮತ್ತು ಆತ ಕಾಶ್ಮೀರದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಹುತಾತ್ಮ' ಎಂದು ಪಾಕಿಸ್ತಾನದಲ್ಲಿರುವ ವಾನಿ ಬೆಂಬಲಿಗರು ಹೇಳಿದ್ದಾರೆ.
2016 ರ ನುಲೈನಲ್ಲಿ ಭಾರತೀಯ ಸೇನೆಯ ಗುಂಡಿನ ದಾಳಿಗೆ ಬಲಿಯಾದ ಬುರ್ಹಾನ್ ವಾನಿ ಹಿಜ್ಬುಲ್ ಮುಜಾಹಿದ್ದಿನ್ ಭಯೋತ್ಪಾದಕನಾಗಿಯೂ, ಪ್ರತ್ಯೇಕತಾವಾದಿಯಾಗಿಯೂ ಗುರುತಿಸಿಕೊಂಡಿದ್ದ. ಜಮ್ಮ-ಕಾಶ್ಮೀರದಲ್ಲಿ ಈತನಿಗೆ ಸಾಕಷ್ಟು ಅನುಯಾಯಿಗಳಿದ್ದರು. ಅದಕ್ಕೆಂದೇ ಬುರ್ಹಾನ್ ವಾನಿಯನ್ನು ಸೇನೆ ಬಲಿಪಡೆಯುತ್ತಿದ್ದಂತೆಯೇ ಕಾಶ್ಮೀರದಲ್ಲಿ ಗಲಭೆ ಎದ್ದಿತ್ತು. ಈ ಗಲಭೆ ಸುಮಾರು ತಿಂಗಳುಗಳ ಕಾಲ ಮುಂದುವರಿದಿತ್ತು.
ಉಗ್ರ ಬುರ್ಹಾನ್ ವಾನಿಯನ್ನು ಸಾಯಿಸಲು ಬಿಡುತ್ತಿರಲಿಲ್ಲ: ಕಾಂಗ್ರೆಸ್ ನಾಯಕ
ಕಾಶ್ಮೀರದಲ್ಲಿ ಹಲವು ಗಲಭೆಗಳಿಗೆ ಕಾರನೀಕರ್ತನಾದ ವಾನಿಯನ್ನು ಪಾಕಿಸ್ತಾನ ಈ ಪರಿ ಮೆರೆಸುತ್ತಿರುವುದು ಭಾರತೀಯರಲ್ಲಿ ಆಕ್ರೋಶ ಮೂಡಿಸಿದೆ.