ಕ್ರಾಸಿಂಗ್ ವೇಳೆ ಬಸ್ಗೆ ಡಿಕ್ಕಿ ಹೊಡೆದ ರೈಲು, 19 ಜನರು ಸಾವು
ಇಸ್ಲಾಮಬಾದ್, ಜುಲೈ 3: ಕ್ರಾಸಿಂಗ್ ವೇಳೆ ಬಸ್ಗೆ ರೈಲು ಡಿಕ್ಕಿ ಹೊಡೆದ ಪರಿಣಾಮ 19 ಜನರು ಮೃತಪಟ್ಟಿರುವ ಘಟನೆ ಪಾಕಿಸ್ತಾನದ ಶೇಖ್ಪುರದಲ್ಲಿ ಶುಕ್ರವಾರ ನಡೆದಿದೆ.
Recommended Video
ಅಪಘಾತ; ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಹೋಗುತ್ತಿದ್ದ ಇಬ್ಬರ ಸಾವು
ಶುಕ್ರವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, ಪಾಕಿಸ್ತಾನದ ಪಂಜಾಬ್ ಜಿಲ್ಲೆಯ ಶೇಖ್ಪುರದಲ್ಲಿ ಲಾಹೋರ್ಗೆ ಚಲಿಸುತ್ತಿದ್ದ ಬಸ್ ಅಪಘಾತಕ್ಕೆ ಗುರಿಯಾಗಿದೆ.
A bus carrying Sikh pilgrims was hit by a train in Sheikhupura district in Pakistan's Punjab, 19 passengers killed, 8 injured: Local media pic.twitter.com/udx1E5Aqv7
— ANI (@ANI) July 3, 2020
ಈ ಬಸ್ನಲ್ಲಿ ಸುಮಾರು 15 ಜನರು ಸಿಖ್ ಯಾತ್ರಿಕರು ಪ್ರಯಾಣ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಶಾ ಹುಸೇನ್ ಎಕ್ಸ್ಪ್ರೆಸ್ ಶೇಖ್ಪುರದ ಕ್ರಾಸಿಂಗ್ನಲ್ಲಿ ಅಡ್ಡ ಬಂದ ಬಸ್ಗೆ ಡಿಕ್ಕಿ ಹೊಡೆದಿದೆ.
ಎಲ್ಲ ಯಾತ್ರಿಕರು ಪೇಶಾವರದಿಂದ ಲಾಹೋರ್ಗೆ ತೆರಳುತ್ತಿದ್ದರು. ಸುಮಾರು 27 ಮಂದಿ ಈ ಬಸ್ನಲ್ಲಿ ಪ್ರಯಾಣ ಮಾಡುತ್ತಿದ್ದರು. 19 ಮಂದಿ ಸಾವನ್ನಪ್ಪಿದ್ದಾರೆ ಹಾಗೂ 8 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Pained by the tragic demise of Sikh pilgrims in Pakistan. My thoughts are with their families and friends in this hour of grief.
— Narendra Modi (@narendramodi) July 3, 2020
I pray that those pilgrims injured recover at the earliest.
ಈ ಘಟನೆ ಕುರಿತು ಭಾರತದ ಪ್ರಧಾನಿ ಮೋದಿ ಪ್ರತಿಕ್ರಿಯೆ ನೀಡಿದ್ದು ''ಪಾಕಿಸ್ತಾನದಲ್ಲಿ ಸಿಖ್ ಯಾತ್ರಿಕರ ದುರಂತ ಸಾವು ಬಹಳ ನೋವು ತಂದಿದೆ. ಇಂತಹ ದುಃಖದ ಸಮಯದಲ್ಲಿ ಕುಟುಂಬಕ್ಕೆ ನಮ್ಮ ಸಾಂತ್ವನ ಇದೆ. ಗಾಯಗೊಂಡ ಆ ಯಾತ್ರಾರ್ಥಿಗಳು ಬೇಗನೆ ಚೇತರಿಸಿಕೊಳ್ಳಬೇಕೆಂದು ನಾನು ಪ್ರಾರ್ಥಿಸುತ್ತೇನೆ'' ಎಂದು ಟ್ವೀಟ್ ಮಾಡಿದ್ದಾರೆ.