ಹೆರಾತ್ : ಪಾದ್ರಿ ಅಪಹರಣ ಪ್ರಕರಣ,ಒಬ್ಬ ಬಂಧನ
ಕಾಬೂಲ್, ಜೂ.4: ಅಫ್ಘಾನಿಸ್ತಾನದ ಹೆರಾತ್ನಲ್ಲಿ ಭಾರತ ಮೂಲದ ಧರ್ಮಗುರು ಅಲೆಕ್ಸಿನ್ ಪ್ರೇಮ್ ಕುಮಾರ್ ಅವರನ್ನು ಅಡಗಿಟ್ಟಿಸಿರುವ ಸ್ಥಳ ಪತ್ತೆಯಾಗಿರುವ ಸುದ್ದಿ ಬಂದಿದೆ. ಈ ನಡುವೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ.
ಅಫ್ಘಾನಿಸ್ತಾನದ ಹೆರಾತ್ನಲ್ಲಿ ಸೋಮವಾರ ಅಪಹರಣವಾಗಿದ್ದ ತಮಿಳುನಾಡು ಮೂಲದ ಫಾದರ್ ಅಲೆಕ್ಸಿಸ್ ಪ್ರೇಮ್ ಕುಮಾರ್ ಅವರನ್ನು ಅಡಗಿಸಿಟ್ಟಿರುವ ಸ್ಥಳದ ಕುರಿತು ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಇದೇ ವೇಳೆ ಅಪಹರಣ ಪ್ರಕರಣಕ್ಕೆ ಸಂಬಂಧ 12 ಮಂದಿಯನ್ನು ಬುಧವಾರ ಬಂಧಿಸಲಾಗಿದೆ ಎಂದು ಅಫ್ಘಾನಿಸ್ತಾನದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಬಂಧಿತರಲ್ಲಿ ಒಬ್ಬ ಮಾತ್ರ ಅಪಹರಣಕಾರರ ಜತೆ ಸಂಬಂಧ ಹೊಂದಿದ್ದ ಎಂದು ತಿಳಿದು ಬಂದಿದೆ.
ಯುಎಸ್
ವಾಯುಪಡೆಯ
ಮೂಲಕ
ತೀವ್ರ
ಶೋಧ
ಕಾರ್ಯ
ನಡೆಸಲಾಗುತ್ತಿದೆ.
ವ್ಯಾಪಕ
ಶೋಧ
ನಡೆಯುತ್ತಿರುವುದು
ತಿಳಿದ
ಅಪಹರಣಕಾರರು
ಪ್ರೇಮ್
ಕುಮಾರ್
ಅವರನ್ನು
ಬೇರೆ
ಗುಪ್ತ
ಸ್ಥಳಕ್ಕೆ
ಕರೆದೊಯ್ಯುವ
ಸಾಧ್ಯತೆಗಳಿವೆ.
ಈ
ನಡುವೆ
ಪ್ರೇಮ್
ಕುಮಾರ್
ಅಪಹರಣದ
ಹಿನ್ನೆಲೆಯಲ್ಲಿ
ಅವರು
ಕಾರ್ಯನಿರ್ವಹಿಸುತ್ತಿದ್ದ
ಎನ್ಜಿಒ
ತನ್ನ
ಸೇವೆಯನ್ನು
ಸ್ಥಗಿತಗೊಳಿಸಿದೆ.
ಅಫ್ಘಾನಿಸ್ತಾನದ ಹೆರಾತ್ನಲ್ಲಿ ಅಪಹರಣಕ್ಕೀಡಾದ ತಮಿಳುನಾಡು ಮೂಲದ ಫಾದರ್ ಅಲೆಕ್ಸಿಸ್ ಪ್ರೇಮ್ ಕುಮಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಪ್ರವೇಶಿಸುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು ಮನವಿ ಮಾಡಿದ್ದಾರೆ.
ಪ್ರೇಮ್ ಕುಮಾರ್ ಅವರ ತಂದೆ 77 ವರ್ಷದ ಅಂಥೋಣಿ, ಸೋದರ ಅಲ್ಬರ್ಟ್ ಮನೋಹರ್ ಹಾಗೂ ಸೋದರಿ ಎಲೆಜಬತ್ ಅವರು ಮದುರೈ ಜಿಲ್ಲಾಧಿಕಾರಿ ವಿ ರಾಜರಾಮನ್ ಅವರನ್ನು ಭೇಟಿ ಮಾಡಿ ಪ್ರೇಮ್ ಕುಮಾರ್ ರಕ್ಷಣೆಗಾಗಿ ಕೋರಿದ್ದಾರೆ. 2011ರಿಂದ ಪ್ರೇಮ್ ಕುಮಾರ್ ಅಫ್ಘಾನಿಸ್ತಾನದಲ್ಲಿದ್ದರೂ ಎಂದಿಗೂ ಈ ರೀತಿ ತೊಂದರೆ ಅನುಭವಿಸಿರಲಿಲ್ಲ ಎಂದು ಕುಟುಂಬ ವರ್ಗ ಪಿಟಿಐಗೆ ತಿಳಿಸಿದೆ.
ಪ್ರೇಮ್ ಕುಮಾರ್ ಅವರ ಪತ್ತೆಗೆ ಅಗತ್ಯ ನೆರವು ನೀಡಲಾಗುತ್ತಿದೆ, ಭಾರತ ಹಾಗೂ ಅಫ್ಘಾನಿಸ್ತಾನ ಸರ್ಕಾರದ ಜತೆ ಮಾತುಕತೆ ನಡೆಸಲಾಗಿದೆ ಎಂದು ಯುಎಸ್ ಅಧಿಕಾರಿಗಳು ಹೇಳಿರುವುದು ಆಶಾದಾಯಕವಾಗಿದೆ.
ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಈ ಪ್ರಕರಣದ ಬಗ್ಗೆ ಆಪ್ಘಾನಿಸ್ತಾನದ ಅಧಿಕಾರಿಗಳ ಜತೆ ಶೀಘ್ರವೇ ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿದೆ. ಎಂಡಿಎಂಕೆ ಮುಖ್ಯಸ್ಥ ವೈಕೋ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು, ಅಫ್ಘಾನಿಸ್ತಾನದಲ್ಲಿನ ಭಾರತೀಯ ರಕ್ಷಣೆಗೆ ಕೋರಿ, ಪ್ರೇಮ್ ಕುಮಾರ್ ಪತ್ತೆ ಮಾಡಿಕೊಡುವಂತೆ ಕೇಳಿಕೊಂಡಿದ್ದರು.
Jesuit Refugee Service ಜತೆ ಕಾರ್ಯ ನಿರ್ವಹಿಸುತ್ತಿದ್ದ 47 ವರ್ಷ ವಯಸ್ಸಿನ ಪ್ರೇಮ್ ಕುಮಾರ್ ಅವರು ನಿರಾಶ್ರಿತರಿಗೆ ಶಿಕ್ಷಣ ನೀಡುವಲ್ಲಿ ನಿರತರಾಗಿದ್ದರು. ಈ ಹಿಂದೆ ಶ್ರೀಲಂಕಾ ನಿರಾಶ್ರಿತರಿಗೆ ನೆರವು ನೀಡಿದ ಅನುಭವ ಪ್ರೇಮ್ ಅವರಿಗಿದೆ.(ಪಿಟಿಐ)