ರಷ್ಯಾ-ಉಕ್ರೇನ್ ಸಂಘರ್ಷ: 24 ಗಂಟೆ ನಿರ್ಣಾಯಕ ಎಂದ ವೊಲೊಡಿಮಿರ್
ಕೀವ್, ಫೆಬ್ರವರಿ 28: ಉಕ್ರೇನ್ನಲ್ಲಿ ರಷ್ಯಾ ದಾಳಿ ನಡೆಸುತ್ತಿದ್ದು, ಮುಂದಿನ 24 ಗಂಟೆ ನಿರ್ಣಾಯಕ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ತಿಳಿಸಿದ್ದಾರೆ.
ಈ ಮಧ್ಯೆ ಮಾತನಾಡಿರುವ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮುಂದಿನ 24 ಗಂಟೆ ನಮಗೆ ತುಂಬಾ 'ನಿರ್ಣಾಯಕ' ಎಂದು ಘೋಷಣೆ ಮಾಡಿದ್ದಾರೆಂದು ವರದಿಯಾಗಿದೆ. ಜೊತೆಗೆ ರಷ್ಯಾ ಕೂಡಲೇ ಕದನ ವಿರಾಮ ಘೋಷಣೆ ಮಾಡಲಿ ಎಂದು ಅವರು ಆಗ್ರಹಿಸಿದ್ದಾರೆ.
ಅಫ್ಘನ್ನಿಂದ ಉಕ್ರೇನ್ಗೆ ಬಂದು ಇಲ್ಲೂ ನೆಲೆ ಕಳೆದುಕೊಂಡರು
ರಷ್ಯಾ-ಉಕ್ರೇನ್
ನಡುವಿನ
ಸಂಘರ್ಷ
ಐದನೇ
ದಿನಕ್ಕೆ
ಕಾಲಿಟ್ಟಿದ್ದು,
ಇಲ್ಲಿಯವರೆಗೆ
ಉಭಯ
ದೇಶಗಳ
ಮಧ್ಯೆ
ಯಾವುದೇ
ರೀತಿಯ
ರಾಜತಾಂತ್ರಿಕ
ಮಾತುಕತೆ
ನಡೆದಿಲ್ಲ.
ರಷ್ಯಾ
ಆಕ್ರಮಣದಿಂದಾಗಿ
ಉಕ್ರೇನ್ನಲ್ಲಿ
ಇಲ್ಲಿಯವರೆಗೆ
14
ಮಕ್ಕಳು
ಸೇರಿದಂತೆ
352
ನಾಗರಿಕರು
ಸಾವನ್ನಪ್ಪಿದ್ದು,
1,684
ಜನರು
ಗಾಯಗೊಂಡಿದ್ದಾರೆಂದು
ಅಲ್ಲಿನ
ಸಚಿವಾಲಯ
ಮಾಹಿತಿ
ಹಂಚಿಕೊಂಡಿದೆ.
ಯುಕೆ ಪ್ರಧಾನಿ ಬೋರಿಸ್ ಜಾನ್ಸನ್ ಜೊತೆ ದೂರವಾಣಿ ಮೂಲಕ ಮಾತನಾಡಿರುವ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್, ಮುಂದಿನ 24 ಗಂಟೆಗಳು ನಮಗೆ ನಿರ್ಣಾಯಕ ಎಂದು ಹೇಳಿದ್ದಾರೆಂದು ಅಲ್ಲಿನ ಸುದ್ದಿಸಂಸ್ಥೆವೊಂದು ವರದಿ ಮಾಡಿದೆ.
ಇದೇ ವೇಳೆ ಮಾತನಾಡಿರುವ ಬೋರಿಸ್ ಯುಕೆ ಹಾಗೂ ಮಿತ್ರರಾಷ್ಟ್ರಗಳು ಉಕ್ರೇನ್ಗೆ ಎಲ್ಲ ರೀತಿಯಲ್ಲೂ ರಕ್ಷಣಾತ್ಮಕ ಸಹಾಯ ನೀಡಲು ಸಿದ್ಧರಾಗಿದ್ದೇವೆ ಎಂದು ಘೋಷಿಸಿದ್ದಾರೆ. ಈಗಾಗಲೇ ಅಂತಾರಾಷ್ಟ್ರೀಯ ಹಣಕಾಸು ವ್ಯವಸ್ಥೆಯಿಂದ ರಷ್ಯಾವನ್ನ ಪ್ರತ್ಯೇಕ ಮಾಡಲಾಗಿದ್ದು, ರಷ್ಯಾ ಅಧ್ಯಕ್ಷ ಪುಟಿನ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ನಾವು ನಿರ್ಧರಿಸಿದ್ದೇವೆ ಎಂದು ಬ್ರಿಟನ್ ಪ್ರಧಾನಿ ತಿಳಿಸಿದ್ದಾರೆ.
ಕಳೆದ ಐದು ದಿನಗಳಿಂದ ರಷ್ಯಾ-ಉಕ್ರೇನ್ ಮಧ್ಯೆ ಯುದ್ಧ ನಡೆಯುತ್ತಿದ್ದು, ಇದರ ಮಧ್ಯೆ ಇಂದು ಉಭಯ ದೇಶಗಳ ಮಧ್ಯೆ ಬೆಲಾರಸ್ನಲ್ಲಿ ಮಹತ್ವದ ಶಾಂತಿ ಮಾತುಕತೆ ಆರಂಭಗೊಂಡಿದೆ. ಇದರಲ್ಲಿ ಖುದ್ದಾಗಿ ಉಕ್ರೇನ್ ದೇಶದ ರಕ್ಷಣಾ ಸಚಿವರು ಭಾಗಿಯಾಗಿದ್ದಾರೆ. ನಿನ್ನೆ ಕೂಡ ಗೋಮೆಲ್ ಪ್ರದೇಶದಲ್ಲಿ ಉಭಯ ದೇಶಗಳ ಮಧ್ಯೆ ಶಾಂತಿ ಮಾತುಕತೆ ನಡೆದಿತ್ತು.
ಬೆಲಾರಸ್ನಲ್ಲಿ ರಷ್ಯಾ- ಉಕ್ರೇನ್ ನಿಯೋಗದ ಮಧ್ಯೆ ಮಹತ್ವದ ಶಾಂತಿ ಮಾತುಕತೆ ಆರಂಭಗೊಂಡಿದ್ದು, ಯುದ್ಧ ಆರಂಭದ ಬಳಿಕ ನಡೆಯುತ್ತಿರುವ ಎರಡನೇ ಸುತ್ತಿನ ಮಾತುಕತೆ ಇದಾಗಿದೆ. ಇದರ ಬೆನ್ನಲ್ಲೇ ಕದನ ವಿರಾಮ ಘೋಷಣೆ ಮಾಡುವಂತೆ ಉಕ್ರೇನ್ ಒತ್ತಾಯ ಮಾಡಿದ್ದಾಗಿ ತಿಳಿದು ಬಂದಿದೆ.
5 ಸಾವಿರ ರಷ್ಯಾ ಯೋಧರ ಹತ್ಯೆ?: ಕಳೆದ ಐದು ದಿನಗಳಿಂದ ನಡೆಯುತ್ತಿರುವ ಸಂಘರ್ಷದಲ್ಲಿ ರಷ್ಯಾದ 5 ಸಾವಿರ ಯೋಧರು ಸಾವನ್ನಪ್ಪಿದ್ದಾರೆಂದು ಉಕ್ರೇನ್ ಮಾಹಿತಿ ನೀಡಿದ್ದಾಗಿ ಬಿಬಿಸಿ ಸುದ್ದಿಸಂಸ್ಥೆ ವರದಿ ಮಾಡಿದೆ. ಜೊತೆಗೆ 191 ಟ್ಯಾಂಕರ್, 29 ಫೈಟರ್ ಜೆಟ್, 29 ಹೆಲಿಕಾಪ್ಟರ್ ಹೊಡೆದುರುಳಿಸಿರುವುದಾಗಿ ತಿಳಿಸಿದೆ.
ಸೇನಾ ಅನುಭವ ಇರುವ ಕೈದಿಗಳ ಬಿಡುಗಡೆ ಉಕ್ರೇನ್ ನಿರ್ಧಾರ: ರಷ್ಯಾ ವಿರುದ್ಧ ಭೀಕರ ಯುದ್ಧ ಆರಂಭಗೊಂಡಿರುವ ಕಾರಣ ಇದೀಗ ಉಕ್ರೇನ್ ಮಹತ್ವದ ನಿರ್ಧಾರ ಕೈಗೊಂಡಿದ್ದು, ಹೋರಾಟದಲ್ಲಿ ಭಾಗಿಯಾಗಲು ಸೇನಾ ಅನುಭವ ಹೊಂದಿರುವ ಕೈದಿಗಳನ್ನ ರಿಲೀಸ್ ಮಾಡಲಾಗುವುದು ಎಂದು ಅಲ್ಲಿನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿಕೆ ನೀಡಿದ್ದಾರೆ.