ನೇಪಾಳದಲ್ಲಿ ಮತ್ತೆ ವಿಮಾನ ದುರಂತ, 11 ಜನ ಸಾವಿನ ಶಂಕೆ
ಕಠ್ಮಂಡು, ಫೆ.26: ನೇಪಾಳದಲ್ಲಿ ಮತ್ತೊಂದು ಲಘು ವಿಮಾನ ದುರಂತಕ್ಕೀಡಾಗಿದೆ. ಇತ್ತೀಚೆಗೆ ಪೋಖರಾದಿಂದ ಜೋಮ್ ಸಮ್ ಗೆ ತೆರಳುತ್ತಿದ್ದ ವಿಮಾನ ಅಪಘಾತಕ್ಕೀಡಾಗಿತ್ತು. ಈ ದುರಂತದಲ್ಲಿ 23 ಮಂದಿ ಸಾವನ್ನಪ್ಪಿದ್ದರು. ಶುಕ್ರವಾರ ಸಂಭವಿಸಿದ ಅಪಘಾತದಲ್ಲಿ 11 ಜನ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.
ಸಿಂಗಲ್ ಇಂಜಿನ್ 9ಎನ್ ಎಜೆಬಿ ಏರ್ ಕ್ರಾಫ್ಟ್ ನೇಪಾಳ್ ಗಂಜ್ ನಿಂದ ಜೂಮ್ಲಾಗೆ ತೆರಳುತ್ತಿತ್ತು. ಮಾರ್ಗ ಮಧ್ಯದಲ್ಲಿ ಚಿಲ್ಖಯಾ ಪ್ರದೇಶದಲ್ಲಿ ಪರ್ವತಗಳಿಗೆ ಡಿಕ್ಕಿ ಹೊಡೆದು ಪತನಗೊಂಡಿರುವ ಶಂಕೆ ವ್ಯಕ್ತವಾಗಿದೆ.
ಘಟನೆ ನಡೆದಿರುವ ಪ್ರದೇಶಕ್ಕೆ ತೆರಳು ಸರಿ ಸುಮಾರು 4 ಗಂಟೆಗಳ ಟ್ರೆಕ್ಕಿಂಗ್ ಮಾಡಬೇಕಾಗುತ್ತದೆ. ಹೆಲಿ ಕಾಪ್ಟರ್ ಬಳಸಿಕೊಂಡು ರಕ್ಷಣಾ ಕಾರ್ಯಕ್ಕೆ ಮುಂದಾಗಿದ್ದೇವೆ ಎಂದು ಸರ್ಕಾರದ ವಕ್ತಾರರಾದ ಪದಮ್ ಲಾಲ್ ಲಾಮಿಚಾನೆ ಹೇಳಿದ್ದಾರೆ. [ನಾಪತ್ತೆಯಾಗಿದ್ದ ವಿಮಾನ ಪತ್ತೆ, 23 ಜನ ದುರಂತ ಸಾವು]
ಏರ್
ಕಾಷ್ಟಮಂಡಪ್
ಸಂಸ್ಥೆಗೆ
ಸೇರಿದ
ಲಘು
ವಿಮಾನದಲ್ಲಿ
ತಾಂತ್ರಿಕ
ದೋಷ
ಕಂಡು
ಬಂದಿದ್ದರಿಂದ
ತುರ್ತು
ಭೂಸ್ಪರ್ಶಕ್ಕೆ
ಪೈಲಟ್
ಯತ್ನಿಸಿದ್ದಾರೆ.
ಆದರೆ,
ಈ
ಪ್ರಯತ್ನದಲ್ಲಿ
ಪರ್ವತ
ಶ್ರೇಣಿಗೆ
ವಿಮಾನ
ಡಿಕ್ಕಿ
ಹೊಡೆದಿದೆ
ಎಂದು
ತಿಳಿದು
ಬಂದಿದೆ.
#Update Air Kasthamandap crash-land in Kalikot, two feared deadhttps://t.co/MNDYPlMYeX pic.twitter.com/umcZec4UHD
— The Kathmandu Post (@kathmandupost) ಫೆಬ್ರವರಿ 26, 2016
ಕ್ಯಾಪ್ಟನ್ ದಿನೇಶ್ ನ್ಯೂಪೇನ್ ಹಾಗೂ ಸಹ ಪೈಲಟ್ ಸಂತೋಷ್ ರಾಣಾ ಸೇರಿದಂತೆ 11 ಜನ ಪ್ರಯಾಣಿಕರು ನೇಪಾಳ್ ಗಂಜ್ ನಿಂದ ಜೂಮ್ಲಾ ಎಂಬ ಪ್ರದೇಶಕ್ಕೆ 12.16ಕ್ಕೆ ಸೇರಬೇಕಿತ್ತು. ಆದರೆ, ಮಾರ್ಗಮಧ್ಯೆ ದುರಂತ ಸಂಭವಿಸಿದೆ.ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ. (ಒನ್ಇಂಡಿಯಾ ಸುದ್ದಿ)